ನೇಜಾರು ನಾಲ್ವರ ಕೊಲೆ ಪ್ರಕರಣ: ವಿಚಾರಣೆ ಡಿ.11ಕ್ಕೆ ಮುಂದೂಡಿಕೆ

KannadaprabhaNewsNetwork |  
Published : Nov 22, 2024, 01:19 AM IST
ಮುಂದೂಡಿಕೆ | Kannada Prabha

ಸಾರಾಂಶ

ಹತ್ಯೆ ಪ್ರಕರಣ ಆರೋಪಿ ಪ್ರವೀಣ್‌ ಚೌಗಲೆ ತನ್ನ ಪರ ವಕಾಲತ್ತು ನಡೆಸಲು ಹೊಸ ವಕೀಲರನ್ನು ನೇಮಿಸಿದ್ದು ವಿಚಾರಣೆ ಡಿ 11ಕ್ಕೆ ಮುಂದೂಡಲಾಗಿದೆ.

ಕನ್ನಡಪ್ರಭ ವಾರ್ತೆ ಉಡುಪಿ

ಇಲ್ಲಿನ ನೇಜಾರು ಗ್ರಾಮದಲ್ಲಿ ಹಾಡಹಗಲೇ ತಾಯಿ ಮತ್ತು ಮೂವರು ಮಕ್ಕಳ ಭೀಕರ ಹತ್ಯೆ ಪ್ರಕರಣದ ಆರೋಪಿ ಪ್ರವೀಣ್ ಚೌಗುಲೆ ತನ್ನ ಪರ ವಕಾಲತ್ತು ನಡೆಸಲು ಹೊಸ ವಕೀಲರನ್ನು ನೇಮಿಸಿದ್ದು, ವಿಚಾರಣೆಯನ್ನು ಡಿ.11ಕ್ಕೆ ಮುಂದೂಡಲಾಗಿದೆ.

ಆತನನ್ನು ವಿಚಾರಣೆಗೆ ಬುಧವಾರ ಜಿಲ್ಲಾ 2ನೇ ಹೆಚ್ಚುವರಿ ಜಿಲ್ಲಾ ಸತ್ರ ನ್ಯಾಯಾಲಯಕ್ಕೆ ಹಾಜರು ಪಡಿಸಿದಾಗ ಆತನ ವಕೀಲರು ತನ್ನ ವಕಾಲತ್ತನ್ನು ಹಿಂಪಡೆಯುತ್ತಿರುವುದಾಗಿ ಹೇಳಿದ್ದರು. ಅದರಂತೆ ವಿಚಾರಣೆಯನ್ನು ಗುರುವಾರಕ್ಕೆ ಮುಂದೂಡಲಾಗಿತ್ತು.

ಗುರುವಾರ ಹಿರಿಯಡ್ಕ ಜೈಲಿನಿಂದ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು. ಈ ವೇಳೆ ಆರೋಪಿಯು ತನ್ನ ಪರ ವಕಾಲತ್ತು ನಡೆಸಲು ಬೆಂಗಳೂರಿನ ಶ್ರೀಧರ್ ಎಂಬವರನ್ನು ನೇಮಕ ಮಾಡಿದ್ದು, ಮುಂದಿನ ದಿನಾಂಕದಂದು ಅವರನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗುವುದು ಎಂದು ತಿಳಿಸಿದನು. ಅದರಂತೆ ನ್ಯಾಯಾಧೀಶ ಸಮಿವುಲ್ಲಾ ಅವರು ಮುಂದಿನ ವಿಚಾರಣೆಯನ್ನು ಡಿ.11ಕ್ಕೆ ಮುಂದೂಡಿ ಆದೇಶ ನೀಡಿದರು.

ಅಲ್ಲದೇ ಆರೋಪಿಯನ್ನು ಮತ್ತೆ ಬೆಂಗಳೂರಿನ ಪರಪ್ಪನ ಆಗ್ರಹಾರ ಜೈಲಿನಿಂದ ಉಡುಪಿಗೆ ಕರೆ ತರುವ ಬದಲು ವಿಡಿಯೋ ಕಾನ್ಫರೆನ್ಸ್ ಮೂಲಕ ಹಾಜರುಪಡಿಸುವಂತೆ ನ್ಯಾಯಾಧೀಶರು ತಿಳಿಸಿದರು. ಅದರಂತೆ ಆರೋಪಿಯನ್ನು ಗುರುವಾರ ಮತ್ತೆ ವಾಪಾಸ್ಸು ಬೆಂಗಳೂರು ಪರಪ್ಪರನ ಅಗ್ರಹಾರ ಜೈಲಿಗೆ ಕರೆದೊಯ್ಯಲಾಯಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!