ತಾಲೂಕಿನ ೮೫ ಗ್ರಾಮಗಳಲ್ಲಿ ಹೊಸದಾಗಿ ಜೆಜೆಎಂ

KannadaprabhaNewsNetwork |  
Published : Jan 21, 2025, 12:35 AM IST
೨೦ ಟಿವಿಕೆ ೨ - ತುರುವೇಕೆರೆ ಸಮೀಪದ ಕೊಟ್ಟರಕೊಟ್ಟಿಗೆ ಗ್ರಾಮದಲ್ಲಿ ಸುಮಾರು ೭೬ ಲಕ್ಷ ವೆಚ್ಚದಲ್ಲಿ ಮನೆ ಮನೆಗೆ ಗಂಗೆ ಕಾಮಗಾರಿಗೆ ಶಾಸಕ ಎಂ.ಟಿ.ಕೃಷ್ಣಪ್ಪ ಭೂಮಿ ಪೂಜೆ ನೆರವೇರಿಸಿದರು. | Kannada Prabha

ಸಾರಾಂಶ

ಜಲ ಜೀವನ್ ಮಿಷನ್ ಆಡಿಯಲ್ಲಿ ಮತ್ತೆ ತಾಲೂಕಿನ ಸುಮಾರು ೮೫ ಗ್ರಾಮಗಳಿಗೆ ಮನೆ ಮನೆ ಗಂಗೆ ಯೋಜನೆ ಕಾಮಗಾರಿ ಮುಂಜೂರಾಗಿದೆ ಎಂದು ಶಾಸಕ ಎಂ.ಟಿ.ಕೃಷ್ಣಪ್ಪ ತಿಳಿಸಿದರು.

ಕನ್ನಡಪ್ರಭ ವಾರ್ತೆ, ತುರುವೇಕೆರೆ

ಜಲ ಜೀವನ್ ಮಿಷನ್ ಆಡಿಯಲ್ಲಿ ಮತ್ತೆ ತಾಲೂಕಿನ ಸುಮಾರು ೮೫ ಗ್ರಾಮಗಳಿಗೆ ಮನೆ ಮನೆ ಗಂಗೆ ಯೋಜನೆ ಕಾಮಗಾರಿ ಮುಂಜೂರಾಗಿದೆ ಎಂದು ಶಾಸಕ ಎಂ.ಟಿ.ಕೃಷ್ಣಪ್ಪ ತಿಳಿಸಿದರು. ಪಟ್ಟಣದ ಸಮೀಪದ ಕೊಟ್ಟರಕೊಟ್ಟಿಗೆ ಗ್ರಾಮದಲ್ಲಿ ಸುಮಾರು ೭೬ ಲಕ್ಷ ವೆಚ್ಚದಲ್ಲಿ ಮನೆ ಮನೆಗೆ ಗಂಗೆ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದ ಅವರು ತಾಲೂಕಿನ ದಂಡಿನಶಿವರ ಹೋಬಳಿ ತೋವಿನಕೆರೆಗೆ ೨೬ ಲಕ್ಷ, ಕಸಬಾ ಹೋಬಳಿಯ ಬಲಮಾದಿಹಳ್ಳಿಗೆ ೨೫ ಲಕ್ಷ ಹಣ ಮುಂಜೂರು ಮಾಡಿದ್ದು ಕಾಮಗಾರಿ ನಡೆಯುತ್ತಿದೆ. ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕು. ಗುತ್ತಿಗೆದಾರರು ಗುಣಮಟ್ಟದ ಕಾಮಗಾರಿ ಮಾಡಬೇಕು ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಕೊಡಗಿಹಳ್ಳಿಗ್ರಾಮ ಪಂಚಾಯಿತಿ ಅಧ್ಯಕ್ಷ ಕಿರಣ್, ಸದಸ್ಯರಾದ ದೇವರಾಜು ಗುತ್ತಿಗೆದಾರರಾದ ತ್ಯಾಗರಾಜು, ಮುಖಂಡರಾದ ಶ್ರೀನಿವಾಸ್, ಜವರಪ್ಪ, ತಿಮ್ಮಯ್ಯ, ಬಸವರಾಜು, ರಾಜೇಗೌಡ, ಮಂಜಯ್ಯ ಇಂಜಿನಿಯರ್ ರವಿಕುಮಾರ್, ತುಳಸಿ ಸೇರಿದಂತೆ ಗ್ರಾಮಸ್ಥರು ಇದ್ದರು.

೨೦ ಟಿವಿಕೆ ೨ - ತುರುವೇಕೆರೆ ಸಮೀಪದ ಕೊಟ್ಟರಕೊಟ್ಟಿಗೆ ಗ್ರಾಮದಲ್ಲಿ ಸುಮಾರು ೭೬ ಲಕ್ಷ ವೆಚ್ಚದಲ್ಲಿ ಮನೆ ಮನೆಗೆ ಗಂಗೆ ಕಾಮಗಾರಿಗೆ ಶಾಸಕ ಎಂ.ಟಿ.ಕೃಷ್ಣಪ್ಪ ಭೂಮಿ ಪೂಜೆ ನೆರವೇರಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪಲ್ಸ್‌ ಪೋಲಿಯೋ ಹಾಕಿಸಿ, ಅಂಗವಿಕತೆ ತಪ್ಪಿಸಿ
ಪುಷ್ಪಗಿರಿ ಜೇಸಿಗೆ 50 ವರ್ಷ: ಸಂಭ್ರಮ ಆಚರಣೆ