ಕೃಷಿ ಕ್ಷೇತ್ರದಲ್ಲಿ ಆವಿಷ್ಕಾರಗಳಾಗಬೇಕಿದೆ ಎಂದ ನಿರ್ಮಲಾನಂದನಾಥ ಶ್ರೀ

KannadaprabhaNewsNetwork |  
Published : Feb 16, 2025, 01:46 AM IST
15ಎಚ್ಎಸ್ಎನ್5 : ಪಟ್ಟಣದ ಎಪಿಎಂಸಿ ಆವರಣದಲ್ಲಿ ಏರ್ಪಡಿಸಲಾಗಿದ್ದ ಕೃಷಿ ಸಮ್ಮೇಳನವನ್ನು ಆದಿಚುಂಚನಗಿರಿ ಮಠಾಧೀಶರಾದ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಉದ್ಘಾಟಿಸಿದರು. | Kannada Prabha

ಸಾರಾಂಶ

ರೈತರು ಆಧುನಿಕ ತಂತ್ರಜ್ಞಾನಗಳ ಬಳಕೆಯನ್ನು ಹೆಚ್ಚಾಗಿ ಅಳವಡಿಸಿಕೊಳ್ಳಬೇಕು ಎಂದು ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಹೇಳಿದರು. ದೇಶದಲ್ಲಿ ಶೇ. ೬೫ರಷ್ಟು ಜನರು ಕೃಷಿಕರಾಗಿದ್ದು ಹಿಂದೆ ಕೃಷಿವಲಯದಿಂದ ಶೇ. ೫೦ರಷ್ಟು ಆದಾಯ ಬರುತ್ತಿದ್ದರೆ, ಇದರ ಪ್ರಮಾಣ ಈಗ ಶೇ. ೧೮ಕ್ಕೆ ಕುಸಿದಿದೆ. ಕೃಷಿ, ಉತ್ಪಾದನೆ ಹಾಗೂ ಸೇವಾ ಕ್ಷೇತ್ರದಿಂದ ದೇಶಕ್ಕೆ ಹೆಚ್ಚಿನ ಆದಾಯ ಬರುತ್ತಿದೆ. ಸೇವಾ ಕ್ಷೇತ್ರದಿಂದ ಬರುತ್ತಿರುವ ಆದಾಯ ಶೇ. ೫೫ರಷ್ಟಿದೆ. ದೇಶದ ವಿದ್ಯಾವಂತ ಯುವಕರಿಗೆ ಉದ್ಯೋಗ ದೊರಕಿಸಿಕೊಡುವ ನಿಟ್ಟಿನಲ್ಲಿ ಉತ್ಪಾದನೆ ಕ್ಷೇತ್ರ ಬೃಹತ್ ಪ್ರಮಾಣದಲ್ಲಿ ಬೆಳೆಯುವ ಅಗತ್ಯವಿದೆ ಎಂದರು.

ಕನ್ನಡಪ್ರಭ ವಾರ್ತೆ ಸಕಲೇಶಪುರ

ರೈತರು ಆಧುನಿಕ ತಂತ್ರಜ್ಞಾನಗಳ ಬಳಕೆಯನ್ನು ಹೆಚ್ಚಾಗಿ ಅಳವಡಿಸಿಕೊಳ್ಳಬೇಕು ಎಂದು ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಹೇಳಿದರು.

ಶನಿವಾರ ಪಟ್ಟಣದ ಎಪಿಎಂಸಿ ಅವರಣದಲ್ಲಿ ತಾಲೂಕು ಒಕ್ಕಲಿಗ ಸಮಾಜ ಹಾಗೂ ಆದಿಚುಂಚುನಗಿರಿ ಮಠ ಜಂಟಿಯಾಗಿ ಹಮ್ಮಿಕೊಂಡಿದ್ದ ರಾಜ್ಯಮಟ್ಟದ ಕೃಷಿ ಸಮ್ಮೇಳನದಲ್ಲಿ ಆಶೀರ್ವಚನ ನೀಡಿ, ದೇಶದಲ್ಲಿ ಶೇ. ೬೫ರಷ್ಟು ಜನರು ಕೃಷಿಕರಾಗಿದ್ದು ಹಿಂದೆ ಕೃಷಿವಲಯದಿಂದ ಶೇ. ೫೦ರಷ್ಟು ಆದಾಯ ಬರುತ್ತಿದ್ದರೆ, ಇದರ ಪ್ರಮಾಣ ಈಗ ಶೇ. ೧೮ಕ್ಕೆ ಕುಸಿದಿದೆ. ಕೃಷಿ, ಉತ್ಪಾದನೆ ಹಾಗೂ ಸೇವಾ ಕ್ಷೇತ್ರದಿಂದ ದೇಶಕ್ಕೆ ಹೆಚ್ಚಿನ ಆದಾಯ ಬರುತ್ತಿದೆ. ಸೇವಾ ಕ್ಷೇತ್ರದಿಂದ ಬರುತ್ತಿರುವ ಆದಾಯ ಶೇ. ೫೫ರಷ್ಟಿದೆ. ದೇಶದ ವಿದ್ಯಾವಂತ ಯುವಕರಿಗೆ ಉದ್ಯೋಗ ದೊರಕಿಸಿಕೊಡುವ ನಿಟ್ಟಿನಲ್ಲಿ ಉತ್ಪಾದನೆ ಕ್ಷೇತ್ರ ಬೃಹತ್ ಪ್ರಮಾಣದಲ್ಲಿ ಬೆಳೆಯುವ ಅಗತ್ಯವಿದೆ.

ಬೇರೆ ಬೇರೆ ಕ್ಷೇತ್ರದಲ್ಲಿರುವಂತೆ ವ್ಯವಸಾಯ ಕ್ಷೇತ್ರದಲ್ಲೂ ಹೆಚ್ಚಿನ ಅವಿಷ್ಕಾರಗಳಾಗಬೇಕಿದೆ. ಆಧುನಿಕ ಯಂತ್ರಗಳ ಬಳಕೆಯಿಂದ ರೈತರ ಶ್ರಮ ಕಡಿಮೆಯಾಗಲಿದೆ. ಕೃಷಿ ಸಮ್ಮೇಳನಗಳ ಅಗತ್ಯ ರೈತರಿಗೆ ತಂತ್ರಜ್ಞಾನದ ಪರಿಚಯ ಮಾಡುವುದಾಗಿದೆ. ರೈತರೆಂದರೆ ಹರಕು ಬಟ್ಟೆಯಲ್ಲಿರಬೇಕು ಎಂಬ ಕಲ್ಪನೆ ಇಂದು ಇಲ್ಲ. ಇಂದು ಹೆಚ್ಚಿನ ಜನಸಂಖ್ಯೆಯಿಂದ ಭೂಮಿ ಒಡೆತನ ಸಹ ಕಡಿಮೆಯಾಗಿದೆ. ಇರುವ ಭೂಮಿಯಲ್ಲೇ ಹೆಚ್ಚಿನ ಆದಾಯ ಗಳಿಸುವ ನಿಟ್ಟಿನಲ್ಲಿ ರೈತರು ಚಿಂತನೆ ನಡೆಸಬೇಕಿದೆ ಎಂದರು. ಕೋಟ್ಯಂತರ ರು. ಖರ್ಚು ಮಾಡಿ ಸಂಶೋಧನೆಗಳ ಮೂಲಕ ಆಧುನಿಕ ಅವಿಷ್ಕಾರಗಳನ್ನು ನಡೆಸಲಾಗಿದೆ. ರೈತರು ಈ ಆಧುನಿಕ ಆವಿಷ್ಕಾರಗಳ ಸದ್ಬಳಕೆ ಮಾಡಿಕೊಳ್ಳದೆ ಹೋದರೆ ಸರ್ಕಾರದ ಅಷ್ಟು ಹಣ ವ್ಯರ್ಥವಾಗಲಿದೆ ಎಂದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬಿಪಿಎಲ್‌ ಮಾನದಂಡ ಬದಲಿಗೆ ಮುಂದಾದ ರಾಜ್ಯ
ಸರ್ಕಾರಿ ಶಾಲೆಗೆ ಶೀಘ್ರ 11000 ಶಿಕ್ಷಕರ ನೇಮಕ : ಮಧು