ಡಿಜೆ ಬಳಸುವಂತಿಲ್ಲ, ಶಾಂತಿ ಕದಡುವಂತಿಲ್ಲ

KannadaprabhaNewsNetwork |  
Published : Aug 22, 2025, 01:01 AM IST
21ಕೆಪಿಎಲ್23 ಕೊಪ್ಪಳ ನಗರದ ಸಾಹಿತ್ಯಭವನದಲ್ಲಿ ಗಣೇಶ ಚತುರ್ಥಿ ಹಾಗೂ ಈದ್ ಮೀಲಾದಿ ಕುರಿತ ಶಾಂತಿ ಸಭೆಯಲ್ಲಿ ಎಸ್ಪಿ ಡಾ. ರಾಮ ಎಲ್. ಅರಸಿದ್ದಿ ಅವರು ಮಾತನಾಡುತ್ತಿರುವುದು. | Kannada Prabha

ಸಾರಾಂಶ

ಗಣೇಶ ಪ್ರತಿಷ್ಠಾಪನೆಯ 9ನೇ ದಿನವಾದ ಸೆ. 4ರಂದೇ ಈದ್‌-ಮೀಲಾದ್‌ ಬಂದಿದೆ. ಹೀಗಾಗಿ, ಅಂದು ಸುಪ್ರೀಂಕೋರ್ಟ್ ಆದೇಶದ ಮೇರೆಗೆ ಮೆರವಣಿಗೆಗೆ ಅವಕಾಶವಿಲ್ಲ. ಯಾರಿಗೂ ಡಿಜೆ ಬಳಕೆಗೆ ಅವಕಾಶ ನೀಡುವುದಿಲ್ಲ ಎಂದು ಪೊಲೀಸ್ ವರಿಷ್ಠಾಧಿಕಾರಿ ಡಾ. ರಾಮ ಎಲ್ . ಅರಸಿದ್ದಿ ಖಡಕ್ ಎಚ್ಚರಿಕೆ ನೀಡಿದ್ದಾರೆ.

ಕೊಪ್ಪಳ:

ಗಣೇಶ ವಿಸರ್ಜನಾ ಮೆರವಣಿಗೆ ಮತ್ತು ಈದ್‌-ಮಿಲಾದ್ ಮೆರವಣಿಗೆಯಲ್ಲಿ ಡಿಜೆ ಬಳಸುವಂತಿಲ್ಲ, ಶಾಂತಿ ಕದಡುವಂತಿಲ್ಲವೆಂದು ಪೊಲೀಸ್ ವರಿಷ್ಠಾಧಿಕಾರಿ ಡಾ. ರಾಮ ಎಲ್ . ಅರಸಿದ್ದಿ ಖಡಕ್ ಎಚ್ಚರಿಕೆ ನೀಡಿದ್ದಾರೆ.ನಗರದ ಸಾಹಿತ್ಯಭವನದಲ್ಲಿ ಗಣೇಶ ಹಬ್ಬ ಮತ್ತು ಈದ್‌-ಮೀಲಾದ್‌ ಹಬ್ಬದ ಕುರಿತು ಆಯೋಜಕರ ಪ್ರತನಿಧಿಗಳ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಎಲ್ಲರೂ ಪ್ರೀತಿ ಮತ್ತು ಸಹಬಾಳ್ವೆಯಿಂದ ಇರುವುದಕ್ಕೆ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.

ಹಬ್ಬವನ್ನು ಸಂತೋಷ, ಸಂಭ್ರಮದಿಂದ ಆಚರಿಸಬೇಕು. ಶಾಂತಿ ಕದಡುವ ಕಿಡಿಗೇಡಿ ವಿರುದ್ಧ ಮುಲಾಜಿಲ್ಲದೆ ಕ್ರಮವಹಿಸಲಾಗುವುದು ಎಂದು ಎಚ್ಚರಿಸಿದ ಅವರು, ಗಣೇಶ ಚತುರ್ಥಿ ಮತ್ತು ಈದ್‌-ಮೀಲಾದ್‌ ಒಟ್ಟಿಗೆ ಬಂದಿರುವುದರಿಂದ ಸೌರ್ಹಾದತೆಯಿಂದ ಆಚರಿಸಬೇಕು. ಸಂಘಟಕರು ಈ ದಿಸೆಯಲ್ಲಿ ಕ್ರಮವಹಿಸಬೇಕು. ಅಗತ್ಯ ಮುನ್ನಚ್ಚರಿಕೆ ಕ್ರಮಕೈಗೊಳ್ಳಬೇಕು. ನಮಗೂ ಸಹ ಸಹಕಾರ ನೀಡಬೇಕು ಎಂದು ಹೇಳಿದರು.

ಗಣೇಶ ಪ್ರತಿಷ್ಠಾಪನೆಯ 9ನೇ ದಿನವಾದ ಸೆ. 4ರಂದೇ ಈದ್‌-ಮೀಲಾದ್‌ ಬಂದಿದೆ. ಹೀಗಾಗಿ, ಅಂದು ಸುಪ್ರೀಂಕೋರ್ಟ್ ಆದೇಶದ ಮೇರೆಗೆ ಮೆರವಣಿಗೆಗೆ ಅವಕಾಶವಿಲ್ಲ. ಯಾರಿಗೂ ಡಿಜೆ ಬಳಕೆಗೆ ಅವಕಾಶ ನೀಡುವುದಿಲ್ಲ ಎಂದ ಅವರು, ಗಣೇಶ ವಿಸರ್ಜನೆ ಮೆರವಣಿಗೆ ವೇಳೆಯಲ್ಲಿ ಅರ್ಧಕ್ಕೆ ಬಿಟ್ಟು ತೆರಳಿದರೆ ಅದನ್ನು ಯಾರು ವಿಸರ್ಜಿಸಬೇಕು. ಇಂತಹ ಘಟನೆಗಳಿಗೆ ಅವಕಾಶ ನೀಡದೆ ಶಾಂತಿಯುತವಾಗಿ ಮೆರವಣಿಗೆಯಲ್ಲಿ ಪಾಲ್ಗೊಂಡು ಸಂಭ್ರಮದಿಂದ ಆಚರಿಸಬೇಕು ಎಂದರು.

ಗಣೇಶ ಮೂರ್ತಿ ಪ್ರತಿಷ್ಠಾಪನೆ ಮಾಡಿದವರು ಎಚ್ಚರಿಕೆ ವಹಿಸಬೇಕು. ಕಳೆದ ವರ್ಷ ಗಲಾಟೆಗೆ ಕಾರಣವಾದ ಒಂದು ಸಂಘಟನೆಗೆ ಪರವಾನಗಿ ನೀಡದಂತೆ ತಹಸೀಲ್ದಾರ್‌ಗೆ ನಾನೇ ಪತ್ರ ಬರೆದಿದ್ದೇನೆ. ಏಕಗವಾಕ್ಷಿಯಡಿ ಪರವಾನಗಿ ನೀಡಲಾಗುತ್ತಿರುವುದರಿಂದ ಇದು ಆಯೋಜರಿಗೆ ಮತ್ತು ನಮಗೂ ಅನುಕೂಲವಾಗಿದೆ ಎಂದರು.

ನಗರಸಭೆ ಪೌರಾಯುಕ್ತ ಸುರೇಶ ಬಬಲಾದಿ, ಸೈಬರ್ ಕ್ರೈಂ ಡಿವೈಎಸ್ಪಿ ಯಶವಂತಕುಮಾರ, ಜೆಸ್ಕಾಂ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಯೂನಸ್ , ಭಾಗ್ಯನಗರ ಪಟ್ಟಣ ಪಂಚಾಯಿತಿ ಉಪಾಧ್ಯಕ್ಷ ಹೊನ್ನೂರಸಾಬ್‌ ಭೈರಾಪುರ, ನಗರಸಭೆ ಸದಸ್ಯ ಅಕ್ಬರ್‌ ಪಾಷಾ ಪಲ್ಟನ್, ನಗರಸಭೆ ಪೊಲೀಸ್ ಠಾಣೆ ಪಿಐ ಜಯಪ್ರಕಾಶ ಹಾಗೂ ಸಹಾಯಕ ಅಗ್ನಿಶಾಮಕ ಠಾಣಾಧಿಕಾರಿ ಎಂ.ಕೆ. ಸವಣೂರ್ ಸೇರಿದಂತೆ ಅನೇಕರು ಇದ್ದರು.ಸೋಷಿಯಲ್ ಮೀಡಿಯಾ ಮೇಲೆ ನಿಗಾ

ಗಣೇಶ ಚತುರ್ಥಿ ಹಾಗೂ ಈದ್‌-ಮೀಲಾದ್ ಹಿನ್ನೆಲೆಯಲ್ಲಿ ಸೋಷಿಯಲ್ ಮೀಡಿಯಾದ ಮೇಲೆ ವಿಶೇಷ ನಿಗಾ ಇರಿಸಲಾಗುತ್ತದೆ. ಅದರಲ್ಲಿ ಶಾಂತಿ ಕದಡುವ, ಪ್ರಚೋದಿಸುವ ಪೋಸ್ಟ್ ಮಾಡುವುದು, ಲೈಕ್ ಮಾಡುವವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮವಹಿಸಲಾಗುವುದು ಎಂದು ಎಸ್ಪಿ ಎಚ್ಚರಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮೇಕೇದಾಟು ಯೋಜನೆ ಅನುಷ್ಠಾನಕ್ಕೆ 30 ಮಂದಿ ತಂಡ ರಚಿಸಿದ ಸರ್ಕಾರ
ಗ್ರಾಪಂಗಳಲ್ಲಿ 10 ವರ್ಷಗಳಲ್ಲಿ ₹50000 ಕೋಟಿ ಅಕ್ರಮ: ಶಾಸಕ