ಕನ್ನಡಪ್ರಭ ವಾರ್ತೆ ದಾವಣಗೆರೆ
ಈಗಾಗಲೇ ಟ್ರಸ್ಟ್ನಿಂದಲೇ ಮುಂದಿನ ದಿನಗಳಲ್ಲಿ ಬಸವ ಜಯಂತಿ ಆಚರಿಸಲು ದಿನಾಂಕ ನಿಗದಿಪಡಿಸಿದ್ದು, ಶ್ರೀಪೀಠದ ಟ್ರಸ್ಟಿಗಳು ಹಾಗೂ ಸಮಾಜ ಬಾಂಧವರು ತೀರ್ಮಾನಿಸಿದ್ದು, ಹಾಗಾಗಿ ಏ.24ರಂದು ಶ್ರೀಪೀಠದಲ್ಲಿ ಯಾವುದೇ ಸಭೆ ನಡೆಸಲು ಅವಕಾಶ ಮಾಡಿಕೊಡಬಾರದು ಎಂದು ಇಲಾಖೆಗೆ ಸಲ್ಲಿಸಿದ ಮನವಿಯಲ್ಲಿ ಆಗ್ರಹಿಸಿದ್ದಾರೆ.
ಶ್ರೀಪೀಠದಲ್ಲಿ ಏ.24ರ ಮಧ್ಯಾಹ್ನ 3ರಿಂದ ಬಸವೋತ್ಸವ ಶ್ರೀಪೀಠದ ನಿಷ್ಟಾವಂತ ಭಕ್ತರ ಹಾಗೂ ಸಮಾಜ ಬಾಂಧವರ ಬೃಹತ್ ರಾಜ್ಯ ಸಮಾವೇಶ ಮಾಡುವುದಾಗಿ ಸಾಮಾಜಿಕ ಜಾಲತಾಣಗಳಲ್ಲಿ ಮತ್ತು ಮಾಧ್ಯಮಗಳಲ್ಲಿ ಪ್ರಕಟಿಸಿರುವುದನ್ನು, ಶ್ರೀ ಪೀಠದ ಉಚ್ಛಾಟಿತ ಶ್ರೀ ವಚನಾನಂದ ಸ್ವಾಮೀಜಿ ಭಾವಚಿತ್ರವನ್ನೂ ಹಾಕಿಕೊಂಡಿದ್ದಾರೆ. ಪ್ರಕಟಣೆಯನ್ನು ಹೊರಡಿಸಿರುವವರು ಆಡಳಿತಾಧಿಕಾರಿಗಳು ಡಾ.ರಾಜಕುಮಾರ ಮತ್ತು ಪರಮೇಶ್ವರ ಗೌಡ್ರು, ಅಧ್ಯಕ್ಷರು, ಲೆಕ್ಕ ಕೊಡು ಚಳವಳಿ ಹೋರಾಟ ಸಮಿತಿಯೆಂಬುದಾಗಿ ನಮೂದಿಸಿದ್ದಾರೆ ಎಂದು ವಿವರಿಸಿದ್ದಾರೆ.ಟ್ರಸ್ಟಿನವರು ಏ.13ರ ಸಭೆಯಲ್ಲಿ ಶ್ರೀ ವಚನಾನಂದ ಸ್ವಾಮೀಜಿಗೆ ಪೀಠದಿಂದ ಉಚ್ಛಾಟನೆ ಮಾಡಿ, ಶ್ರೀಗಳನ್ನು ಗೌರವ ಪೂರ್ವಕವಾಗಿ ಪೀಠದಿಂದ ಹೊರ ಹೋಗಲು ತಿಳಿಸಿದ್ದೇವೆ. ಡಾ.ರಾಜಕುಮಾರರನ್ನು ಏ.17ರಂದು ಟ್ರಸ್ಟ್ನ ತುರ್ತು ಸಭೆಯಲ್ಲೂ ಶ್ರೀ ಪೀಠದ ಆಡಳಿತಾಧಿಕಾರಿ ಸ್ಥಾನದಿಂದ ಅಮಾನತುಗೊಳಿಸಿ, ಪತ್ರದ ಮೂಲಕ ಅಮಾನತುಗೊಳಿಸಿದ ವಿಷಯವನ್ನೂ ಡಾ.ರಾಜಕುಮಾರರಿಗೆ ತಿಳಿಸಿದ್ದೇವೆ. ಇನ್ನು ಪರಮೇಶ್ವರಗೌಡ್ರು ಹೊಳೆ ಸಿರಿಗೆರೆಯವರು ನಮ್ಮ ಯಾವುದೇ ಟ್ರಸ್ಟಿನಲ್ಲಾಗಲೀ, ರಾಜ್ಯ ಸಂಘ, ಜಿಲ್ಲಾ ಸಂಘ, ತಾಲೂಕು ಸಂಘದಲ್ಲಾಗಲೀ ಯಾವುದೇ ಪದವಿಯಲ್ಲೂ ಇಲ್ಲ. ತಾವೇ ಬಂದು ಕಾನೂನು ಬಾಹಿರ ಸಂಘವನ್ನು ಸ್ವಯಂ ಘೋಷಿಸಿಕೊಂಡು, ತಾವೇ ಆ ಸಂಘದ ಅಧ್ಯಕ್ಷರೆಂದು ಬರೆದುಕೊಂಡಿದ್ದಾರೆ ಎಂದು ಟ್ರಸ್ಟಿಗಳು ಇಲಾಖೆಗೆ ಮಾಹಿತಿ ನೀಡಿದ್ದಾರೆ.
ಹಿಂದೆಯೇ ಪತ್ರದ ಮುಖಂಡ ಉಚ್ಛಾಟಿತ ಶ್ರೀ ವಚನಾನಂದ ಸ್ವಾಮೀಜಿ, ಅಮಾನತ್ತಿರುವ ಆಡಳಿತಾಧಿಕಾರಿ ಡಾ.ರಾಜಕುಮಾರ, ಸ್ವಯಂ ಘೋಷಿತ ಲೆಕ್ಕ ಕೊಡಿ ಚಳವಳಿ ಹೋರಾಟ ಸಮಿತಿಯ ಅಧ್ಯಕ್ಷ ಪರಮೇಶ್ವರ ಗೌಡ್ರು ಇವರು ಶ್ರೀಪೀಠಕ್ಕೆ, ಸಮಾಜಕ್ಕೆ, ಸಮಾಜ ಬಾಂಧವರಲ್ಲಿ ಗೊಂದಲ ಉಂಟು ಮಾಡುತ್ತಿರುವುದನ್ನು ಶ್ರೀಪೀಠದ ಆಸ್ತಿಪಾಸ್ತಿಗೆ ಧಕ್ಕೆ ಹಾನಿ, ಮಾಡುತ್ತಾರೆಂಬ ಬಗ್ಗೆ ಇಲಾಖೆ ಗಮನಕ್ಕೆ ತಂದಿದ್ದೇವೆ. ಹಾಗಾಗಿ ಏ.24ರಂದು ಯಾವುದೇ ಸಭೆ, ಕಾರ್ಯಕ್ರಮ ಕ್ಕೆ ಶ್ರೀಪೀಠದಲ್ಲಿ ಅವಕಾಶ ಮಾಡಿಕೊಡಬಾರದು ಎಂದು ಮನವಿ ಮಾಡಿದ್ದಾರೆ.