ಜನಸಾಮಾನ್ಯರ ಕೆಲಸ ಮಾಡಿಕೊಡಲು ಪಕ್ಷ ಭೇದ ಬೇಡ: ಡಾ.ಕೆ.ಸುಧಾಕರ್

KannadaprabhaNewsNetwork |  
Published : Aug 25, 2026, 02:00 AM IST
24ಜಿಯುಡಿ1 | Kannada Prabha

ಸಾರಾಂಶ

, ಸರ್ಕಾರಿ ಇಲಾಖೆಗಳಿಗೆ ಕೆಲಸ- ಕಾರ್ಯಗಳಿಗಾಗಿ ಬರುವಂಥವರು ಬಡವರೇ ಆಗಿರುತ್ತಾರೆ. ಬಡವರ ಕೆಲಸಗಳನ್ನು ಮಾಡಿಕೊಟ್ಟರೆ ಪುಣ್ಯ ಸಿಗುತ್ತದೆ. ಜನರ ಕೆಲಸಗಳನ್ನು ಮಾಡಿಕೊಡದೇ ನಾಳೆ ಬನ್ನಿ, ನಾಡಿದ್ದು ಬನ್ನಿ ಎಂದು ಹೇಳಿದರೆ ಅವರ ಹೊಟ್ಟೆಯ ಮೇಲೆ ಹೊಡೆದಂತಾಗುತ್ತದೆ. ಕೆಲಸದ ನಿಮಿತ್ತ ಬರುವಂಥವರಲ್ಲಿ ಜಾತಿ ಕಾಣಬೇಡಿ, ಅವನು ಯಾವ ಪಕ್ಷದವನು ಎಂದು ನೋಡಬೇಡಿ. ಯಾರೇ ಆಗಲಿ, ಅವರು ನಮ್ಮ ಭಾರತೀಯರೇ, ಅವರ ಕೆಲಸಗಳನ್ನು ಮಾಡಿಕೊಡುವುದು ಸರ್ಕಾರಿ ಅಧಿಕಾರಿಗಳ ಕರ್ತವ್ಯವಾಗಿದೆ.

ಕನ್ನಡಪ್ರಭ ವಾರ್ತೆ ಗುಡಿಬಂಡೆ

ಸರ್ಕಾರಿ ಕಚೇರಿಗಳಿಗೆ ಬರುವಂಥ ಸಾರ್ವಜನಿಕರ ಕೆಲಸಗಳನ್ನು ಮಾಡಿಕೊಡಲು ವಿಳಂಬ ಬೇಡ, ಅವರಲ್ಲಿ ಜಾತಿ, ಪಕ್ಷಭೇದಗಳನ್ನು ಕಾಣಬೇಡಿ, ಜನಸ್ನೇಹಿಯಾಗಿ ಜನರ ಕೆಲಸ ಮಾಡಿಕೊಡಿ, ಆ ಪುಣ್ಯ ನಿಮಗೆ ಸಿಗುತ್ತದೆ ಎಂದು ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಸಂಸದ ಡಾ.ಕೆ.ಸುಧಾಕರ್ ತಿಳಿಸಿದರು.

ಪಟ್ಟಣದ ತಾಲೂಕು ಕಚೇರಿ ಸಭಾಂಗಣದಲ್ಲಿ ಆಯೋಜಿಸಿದ್ದ ಸಂಸದರ ಜನಸ್ಪಂದನಾ ಸಭೆಯಲ್ಲಿ ಮಾತನಾಡಿದ ಅವರು, ಸರ್ಕಾರಿ ಇಲಾಖೆಗಳಿಗೆ ಕೆಲಸ- ಕಾರ್ಯಗಳಿಗಾಗಿ ಬರುವಂಥವರು ಬಡವರೇ ಆಗಿರುತ್ತಾರೆ. ಬಡವರ ಕೆಲಸಗಳನ್ನು ಮಾಡಿಕೊಟ್ಟರೆ ಪುಣ್ಯ ಸಿಗುತ್ತದೆ. ಜನರ ಕೆಲಸಗಳನ್ನು ಮಾಡಿಕೊಡದೇ ನಾಳೆ ಬನ್ನಿ, ನಾಡಿದ್ದು ಬನ್ನಿ ಎಂದು ಹೇಳಿದರೆ ಅವರ ಹೊಟ್ಟೆಯ ಮೇಲೆ ಹೊಡೆದಂತಾಗುತ್ತದೆ. ಕೆಲಸದ ನಿಮಿತ್ತ ಬರುವಂಥವರಲ್ಲಿ ಜಾತಿ ಕಾಣಬೇಡಿ, ಅವನು ಯಾವ ಪಕ್ಷದವನು ಎಂದು ನೋಡಬೇಡಿ. ಯಾರೇ ಆಗಲಿ, ಅವರು ನಮ್ಮ ಭಾರತೀಯರೇ, ಅವರ ಕೆಲಸಗಳನ್ನು ಮಾಡಿಕೊಡುವುದು ಸರ್ಕಾರಿ ಅಧಿಕಾರಿಗಳ ಕರ್ತವ್ಯವಾಗಿದೆ. ಎಲ್ಲಾ ಅಧಿಕಾರಿಗಳು ಜನಸ್ನೇಹಿಯಾಗಿ ಕೆಲಸ ಮಾಡಿದಾಗ ಅಭಿವೃದ್ಧಿ ಸಾಧ್ಯವಾಗುತ್ತದೆ. ಆಂಧ್ರದ ಗಡಿಯಲ್ಲಿರುವ ಗುಡಿಬಂಡೆ ಅಭಿವೃದ್ಧಿ ವಂಚಿತವಾಗಿದೆ ಎಂಬೆಲ್ಲಾ ಮಾತಿದೆ. ಹಾಗಾಗಿ ಗೋಲ್ಡನ್ ಗುಡಿಬಂಡೆ ಮಾಡುವ ಶಕ್ತಿ ಅಧಿಕಾರಿಗಳಾದ ತಮ್ಮಲ್ಲಿದೆ. ತಾವು ಮನಸ್ಸು ಮಾಡಿದರೆ ಅಭಿವೃದ್ಧಿ ಸಾಧ್ಯ. ಈ ನಿಟ್ಟಿನಲ್ಲಿ ಅಧಿಕಾರಿಗಳು ಮುಂದಾಗಬೇಕು ಎಂದರು.

ಕೇಂದ್ರದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಅಧಿಕಾರಕ್ಕೆ ಬಂದ ಬಳಿಕ ಸಾಕಷ್ಟು ಜನಪರ ಕೆಲಸಗಳು ನಡೆಯುತ್ತಿವೆ. ಹಿಂದೆ ಮಹಿಳೆಯರು ಸೂರ್ಯ ಮುಳುಗುವ ತನಕ ಶೌಚಾಲಯಕ್ಕೆ ಹೋಗಲು ಕಾಯಬೇಕಿತ್ತು. ಅದನ್ನು ಮನಗಂಡ ನಮ್ಮ ಪ್ರಧಾನಿಗಳು ದೇಶದಾದ್ಯಂತ ೧೫ ಕೋಟಿಗೂ ಅಧಿಕ ಶೌಚಾಲಯಗಳನ್ನು ನಿರ್ಮಿಸಿಕೊಟ್ಟಿದ್ದಾರೆ. ಮಹಿಳೆಯರಿಗೆ ಕಷ್ಟಕರವಾಗಬಾರದೆಂಬ ಉದ್ದೇಶದಿಂದ ಮನೆ ಮನೆಗೂ ಕೊಳಾಯಿ ಮೂಲಕ ನೀರು ಪೂರೈಸುವಂತಹ ಜಲ ಜೀವನ್ ಮಿಷನ್ ಕಾರ್ಯಕ್ರಮವನ್ನು ಜಾರಿಗೆ ತಂದಿದ್ದಾರೆ. ಅದೇ ರೀತಿ ಹಿಂದಿನ ನರೇಗಾ ಯೋಜನೆಗೆ ಕೆಲವೊಂದು ಮಾರ್ಪಾಡುಗಳನ್ನು ಮಾಡಿ ವಿಬಿ–ಜಿ ರಾಮ್ ಜಿ ಎಂಬ ಹೆಸರನ್ನು ಇಟ್ಟಿದ್ದಾರೆ. ಈ ಹಿಂದೆ ನರೇಗಾದಲ್ಲಿ ಸಾಕಷ್ಟು ಅವ್ಯವಹಾರ ನಡೆಯುತ್ತಿತ್ತು. ಆದರೆ ವಿಬಿ–ಜಿ ರಾಮ್ ಜಿನ ನಿಯಮಗಳಲ್ಲಿ ಯಾರೂ ತಪ್ಪು ಮಾಡಲು ಸಾದ್ಯವಿಲ್ಲ. ಬಿಡುಗಡೆಯಾದ ಅನುದಾನ ಫಲಾನುಭವಿಗಳ ಕೈಗೆ ಸೇರುತ್ತಿದೆ ಎಂದು ತಿಳಿಸಿದರು.

ಸದಾ ರೈತರ ಪರ ಕೆಲಸ ಮಾಡುವಂಥ ನರೇಂದ್ರ ಮೋದಿ ನೇತೃತ್ವದ ಎನ್.ಡಿ.ಎ ಸರ್ಕಾರ, ರೈತರ ಬೆಳವಣಿಗೆಗಾಗಿ ಸಾಕಷ್ಟು ಯೋಜನೆಗಳನ್ನು ಜಾರಿಗೆ ತಂದಿದೆ. ಅದರಲ್ಲಿ ಪಿಎಂ ಕಿಸಾನ್ ಯೋಜನೆ, ಪಿಎಂ ಫಸಲ್ ಭಿಮಾ ಯೋಜನೆ ಸಹ ಒಂದಾಗಿದೆ. ಕಡಿಮೆ ಮೊತ್ತದ ಪ್ರೀಮಿಯಂ ಕಟ್ಟಿದರೆ ಸಾಕು ಪ್ರೀಮಿಯಂಗಿಂತ ದೊಡ್ಡ ಮೊತ್ತದ ಹಣ ರೈತರಿಗೆ ಫಸಲ್ ಭಿಮಾ ಯೋಜನೆ ಮೂಲಕ ಸಿಗುತ್ತಿದೆ. ಈ ಯೋಜನೆಯಿಂದ ರೈತರಿಗೆ ತುಂಬಾ ಅನುಕೂಲವಾಗುತ್ತಿದೆ. ನಮ್ಮ ಪಕ್ಷದ ಮುಖಂಡರು ನಾನಾ ಕಾರ್ಯಕ್ರಮಗಳಿಗೆ ಸಾಕಷ್ಟು ಹಣ ಖರ್ಚು ಮಾಡುತ್ತೀರಾ, ತಾವೇ ಮುಂದಿನ ದಿನಗಳಲ್ಲಿ ರೈತರ ಪರವಾಗಿ ವಿಮಾ ಮೊತ್ತವನ್ನು ಪಾವತಿಸುವಂತಹ ಕಾರ್ಯಕ್ರಮ ಮಾಡಬೇಕು ಎಂದರು.

ಜನಸ್ಪಂದನಾ ಸಭೆಯಲ್ಲಿ ಶಾಸಕರು, ಜಿಲ್ಲಾ ಪಂಚಾಯಿತಿ, ಪಟ್ಟಣ ಪಂಚಾಯಿತಿ ಅಧ್ಯಕ್ಷರು, ಸದಸ್ಯರು ಮಾಡುವಂಥ ಕೆಲಸಗಳ ಕುರಿತು ಅರ್ಜಿ ನೀಡಲಾಗಿದೆ. ಅದರಲ್ಲೂ ಓರ್ವ ವಿಶೇಷ ಚೇತನ ಮಹಿಳೆ ತನ್ನ ಪಡಿತರ ಚೀಟಿ ರದ್ದಾದ ಕುರಿತು ಅರ್ಜಿ ನೀಡಿದ್ದಾಳೆ. ಇದನ್ನೆಲ್ಲಾ ನೋಡಿದರೆ ನಾವು ಯಾವ ಕಾಲದಲ್ಲಿ ಇದ್ದೀವಿ ಎಂದು ಭಾಸವಾಗುತ್ತಿದೆ. ಆಹಾರ ಇಲಾಖೆಯ ಅಧಿಕಾರಿಗಳನ್ನು ಕರೆಸಿ ಕೂಡಲೇ ಆ ವಿಶೇಷ ಚೇತನ ಮಹಿಳೆಗೆ ಪಡಿತರ ಸಿಗುವಂತೆ ಮಾಡಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಸಭೆಯಲ್ಲಿ ವಿವಿಧ ಅಹವಾಲುಗಳನ್ನು ಸ್ವೀಕರಿಸಿದ ಸಂಸದರು, ಒಂದು ವಾರದೊಳಗೆ ಎಲ್ಲಾ ಅರ್ಜಿಗಳನ್ನು ವಿಲೇವಾರಿ ಮಾಡಬೇಕು. ಜಲಜೀವನ್ ಮಿಷನ್ ಸೇರಿದಂತೆ ಕೇಂದ್ರ ಸರ್ಕಾರದ ಕೆಲವೊಂದು ಕಾಮಗಾರಿಗಳಲ್ಲಿ ಲೋಪಗಳು ಕಂಡು ಬಂದಿರುವ ಬಗ್ಗೆ ದೂರುಗಳು ಬಂದಿದ್ದು, ಈ ಕುರಿತು ಆದಷ್ಟು ಶೀಘ್ರ ಖುದ್ದು ನಾನೇ ಭೇಟಿ ನೀಡಿ ಪರಿಶೀಲನೆ ನಡೆಸುವುದಾಗಿ ತಿಳಿಸಿದರು.

ತಹಸೀಲ್ದಾರ್ ಸಿಗ್ಬತ್ತುಲ್ಲಾ, ತಾಪಂ ಇಒ ನಾಗಮಣಿ, ಆರಕ್ಷಕ ವೃತ್ತ ನಿರೀಕ್ಷಕ ಮುನಿಕೃಷ್ಣ, ಪಪಂ ಮುಖ್ಯಾಧಿಕಾರಿ ಆರತಿ ಸೇರಿದಂತೆ ಮುಖಂಡರು ಹಾಗೂ ಸಾರ್ವಜನಿಕರು ಹಾಜರಿದ್ದರು.

-------

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹೆದ್ದಾರಿ ಸೇತುವೆ ದುರಸ್ತಿ ಮರೀಚಿಕೆ
ಯುವಜನತೆಯ ಕ್ರೀಡಾಸಕ್ತಿ ಸದೃಢ ಸಮಾಜಕ್ಕೆ ಮುನ್ನುಡಿ: ಪುಟ್ಟು ಅಂಜಿನಪ್ಪ