ಹುಟ್ಟಿನಿಂದಲೇ ಯಾರೂ ಬುದ್ಧಿವಂತರಲ್ಲ, ದಡ್ಡರೂ ಅಲ್ಲ

KannadaprabhaNewsNetwork |  
Published : Feb 04, 2026, 01:30 AM IST
ಹೊನ್ನಾಳಿ ಫೋಟೋ 3ಎಚ್.ಎಲ್.ಐ1  ತಾಲೂಕಿನ  ಕುಂದೂರು  ಗ್ರಾಮದವರಾದ ಸಿ.ಎಚ್. ಮುರಿಗೇಂದ್ರಪ್ಪ ಅವರು ದಾವಣಗೆರೆ ವಿ.ವಿ.ಯಿಂದ ಗೌರವ ಡಾಕ್ಟೇರೇಟ್ ಪದವಿ ಪಡೆದ ಹಿನ್ನಲೆಯಲ್ಲಿ ಅವರ  ಹುಟ್ಟೂರು ಕುಂದೂರು ಗ್ರಾಮಪಂಚಾಯಿತಿವತಿಯಿಂದ ಸನ್ಮಾನಿಸಲಾಯಿತು.   | Kannada Prabha

ಸಾರಾಂಶ

ಹುಟ್ಟಿನಿಂದ ಯಾರು ಕೂಡ ಬುದ್ಧಿವಂತ ಅಥವಾ ದಡ್ಡರಾಗಿ ಇರುವುದಿಲ್ಲ. ಬೆಳೆಯುತ್ತ ತನ್ನ ಸುತ್ತಮುತ್ತಲಿನ ಅವಕಾಶಗಳನ್ನು ಸಮರ್ಪಕವಾಗಿ ಬಳಸಿಕೊಂಡು ಉತ್ತಮ ಶಿಕ್ಷಣ ಪಡೆದರೆ ಜೀವನದಲ್ಲಿ ಆ ವ್ಯಕ್ತಿ ಏನನ್ನಾದರೂ ವಿಶೇಷವಾಗಿ ಸಾಧಿಸಬಹುದು ಎಂದು ಶಿಕ್ಷಣಪ್ರೇಮಿ, ಪ್ರೊ. ಸಿ.ಎಚ್. ಮುರಿಗೇಂದ್ರಪ್ಪ ಹೇಳಿದ್ದಾರೆ.

- ಕುಂದೂರಲ್ಲಿ ದಾವಿವಿ ಗೌರವ ಡಾಕ್ಟರೇಟ್‌ ಪುರಸ್ಕೃತ ಪ್ರೊ.ಮುರಿಗೇಂದ್ರಪ್ಪ ಅಭಿಮತ

- - -

ಕನ್ನಡಪ್ರಭ ವಾರ್ತೆ ಹೊನ್ನಾಳಿ

ಹುಟ್ಟಿನಿಂದ ಯಾರು ಕೂಡ ಬುದ್ಧಿವಂತ ಅಥವಾ ದಡ್ಡರಾಗಿ ಇರುವುದಿಲ್ಲ. ಬೆಳೆಯುತ್ತ ತನ್ನ ಸುತ್ತಮುತ್ತಲಿನ ಅವಕಾಶಗಳನ್ನು ಸಮರ್ಪಕವಾಗಿ ಬಳಸಿಕೊಂಡು ಉತ್ತಮ ಶಿಕ್ಷಣ ಪಡೆದರೆ ಜೀವನದಲ್ಲಿ ಆ ವ್ಯಕ್ತಿ ಏನನ್ನಾದರೂ ವಿಶೇಷವಾಗಿ ಸಾಧಿಸಬಹುದು ಎಂದು ಶಿಕ್ಷಣಪ್ರೇಮಿ, ಪ್ರೊ. ಸಿ.ಎಚ್. ಮುರಿಗೇಂದ್ರಪ್ಪ ಹೇಳಿದರು.

ದಾವಣಗೆರೆ ವಿಶ್ವವಿದ್ಯಾನಿಲಯದಿಂದ ಶೈಕ್ಷಣಿಕ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸಿದ್ದನ್ನು ಪರಿಗಣಿಸಿ ದಾವಣಗೆರೆ ವಿವಿ ಗೌರವ ಡಾಕ್ಟೇರೆಟ್ ಪದವಿಗೆ ಭಾಜನರಾದ ಹೊನ್ನಾಳಿ ತಾಲೂಕಿನ ಕುಂದೂರು ಗ್ರಾಮದ ಸಿ.ಎಚ್. ಮುರಿಗೇಂದ್ರಪ್ಪ ಅವರಿಗೆ ಹುಟ್ಟೂರಾದ ತಾಲೂಕಿನ ಕುಂದೂರು ಗ್ರಾಮ ಪಂಚಾಯಿತಿಯಲ್ಲಿ ಮಂಗಳವಾರ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.

ಸ್ವಗ್ರಾಮದಲ್ಲಿ ಸನ್ಮಾನ ಸ್ವೀಕಾರ ತಮಗೆ ಎಲ್ಲ ಪ್ರಶಸ್ತಿಗಳಿಗಿಂತ ದೊಡ್ಡ ಸಂತೋಷ ತಂದಿದೆ. ಸಾಮಾನ್ಯವಾಗಿ ಹಳ್ಳಿಗಳಲ್ಲಿ ಕನ್ನಡ ಮಾಧ್ಯಮದಲ್ಲಿಯೇ ಶಿಕ್ಷಣ ಪಡೆದವರೇ ಜೀವನದಲ್ಲಿ ಹೆಚ್ಚಿನ ಸಾಧನೆ ಮಾಡಿದ ಅನೇಕ ಉದಾಹರಣೆಗಳಿವೆ. ತಾನು ದಾವಣಗೆರೆಯ ಎ.ವಿ.ಕೆ. ಕಾಲೇಜಿನಲ್ಲಿ ಸುದೀರ್ಘವಾಗಿ 32 ವರ್ಷಗಳ ಕಾಲ ರಾಜ್ಯಶಾಸ್ತ್ರ ಉಪನ್ಯಾಸಕನಾಗಿ ಸೇವೆ ಸಲ್ಲಿಸಿ 2015ರಲ್ಲಿ ನಿವೃತ್ತಿಯಾಗಿದ್ದೇನೆ. ನಂತರದಲ್ಲಿ ಶಿಕ್ಷಣ ಕ್ಷೇತ್ರದ ಅಭಿವೃದ್ಧಿ, ಉಪನ್ಯಾಸಕ ಸಮೂಹದ ಶ್ರೇಯೋಭಿವೃದ್ಧಿಗೆ ಕೆಲಸ ಮಾಡಿದ್ದೇನೆ ಎಂದು ಹೇಳಿದರು.

ಮುಖಂಡ ಹಾಲೇಶಪ್ಪ ಮೂಡಾಳ್ ಮಾತನಾಡಿ, ಸಿ.ಎಚ್. ಮುರಿಗೇಂದ್ರಪ್ಪ ಅವರು ರಾಷ್ಟ್ರ ಮತ್ತು ರಾಜ್ಯಮಟ್ಟದ ಶಿಕ್ಷಕರ ಸಂಘಗಳ ಅಧ್ಯಕ್ಷರು, ಉಪಾಧ್ಯಕ್ಷರು, ಕಾರ್ಯದರ್ಶಿಯಾಗಿ ಉತ್ತಮ ಸೇವೆ ಸಲ್ಲಿಸಿದ್ದಾರೆ. ಕುವೆಂಪು ವಿ.ವಿ. ಮತ್ತು ದಾವಣಗೆರೆ ವಿ.ವಿ.ಗಳ ಸೆನೆಟ್ ಮತ್ತು ಸಿಂಡಿಕೇಟ್ ಸದಸ್ಯರಾಗಿ ವಿಶ್ವವಿದ್ಯಾನಿಯಲಗಳ ಅಭಿವೃದ್ಧಿಗೆ ವಿಶೇಷ ಸೇವೆ ಸಲ್ಲಿಸಿದ್ದಾರೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಕುಂದೂರು ಗ್ರಾಪಂ ಅಧ್ಯಕ್ಷೆ ಬಿ.ಎಂ. ಲತಾ ಹಾಲೇಶಪ್ಪ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಉಪಾಧ್ಯಕ್ಷ ಕೆ.ಬಿ.ಯೋಗಾಚಾರಿ ಹಾಗೂ ಗ್ರಾಮ ಪಂಚಾಯಿತಿ ಸದಸ್ಯರು ಗ್ರಾಪಂ ಕಾರ್ಯದರ್ಶಿ ವೀರೇಂದ್ರ, ಸಿಬ್ಬಂದಿ ಸುಮಲತಾ, ಬಸವಲಿಂಗಪ್ಪ ಹಾಗೂ ಗ್ರಾಮದ ಕೆಲ ಮುಖಂಡರು ಇದ್ದರು. ಗ್ರಾಮ ಪಂಚಾಯಿತಿ ಪಿಡಿಒ ವಿಜಯ ಗೌಡ ಸ್ವಾಗತಿಸಿ, ಸದಸ್ಯ ಸಿ.ಆಂಜನೇಯ ವಂದಿಸಿದರು.

- - -

-3ಎಚ್.ಎಲ್.ಐ1.ಜೆಪಿಜಿ:

ಹೊನ್ನಾಳಿ ತಾಲೂಕಿನ ಕುಂದೂರು ಗ್ರಾಮದ ಸಿ.ಎಚ್. ಮುರಿಗೇಂದ್ರಪ್ಪ ಅವರಿಗೆ ದಾವಣಗೆರೆ ವಿ.ವಿ. ಗೌರವ ಡಾಕ್ಟೇರೇಟ್ ಲಭಿಸಿದ ಹಿನ್ನೆಲೆ ಹುಟ್ಟೂರು ಕುಂದೂರು ಗ್ರಾಪಂ ವತಿಯಿಂದ ಅವರನ್ನು ಗೌರವಿಸಲಾಯಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕರಗಕ್ಕೆ ವಿಶ್ವಪ್ರಸಿದ್ಧಿ ಪಡೆದ ಧರ್ಮರಾಯ ದೇಗುಲ ಚಿನ್ನ ಕಳವು
ಸಿ.ಟಿ.ರವಿ ‘ಪಾಕ್‌ ನಾಲಿಗೆ’ ಹೇಳಿಕೆಗೆ ಸದನವೇ ಬಲಿ