ಬಾಕ್ಸೈಟ್ ಗಣಿಗಾರಿಕೆ ಸಮೀಕ್ಷೆಗೆ ಅವಕಾಶ ಬೇಡ

KannadaprabhaNewsNetwork |  
Published : Sep 23, 2025, 01:04 AM IST
ಸಮೀಕ್ಷೆಗೆ ಗೊತ್ತು ಪಡಿಸಿದ ಸ್ಥಳದಲ್ಲಿ ಭೂಕುಸಿತ ಆಗಿರುವುದು  | Kannada Prabha

ಸಾರಾಂಶ

ಹೊನ್ನಾವರ ಅಪ್ಸರಕೊಂಡ, ಕಾಸರಕೋಡ, ಇಡಗುಂಜಿ ಅರಣ್ಯ ಪ್ರದೇಶದಲ್ಲಿ ಬಾಕ್ಸೈಟ್ ಗಣಿಗಾರಿಕೆ ಸಮೀಕ್ಷೆಗೆ ಮುಂದಾಗಿದ್ದು, ಇದಕ್ಕೆ ಅವಕಾಶ ನೀಡಬಾರದು.

ಕನ್ನಡಪ್ರಭ ವಾರ್ತೆ ಕಾರವಾರ

ಹೊನ್ನಾವರ ಅಪ್ಸರಕೊಂಡ, ಕಾಸರಕೋಡ, ಇಡಗುಂಜಿ ಅರಣ್ಯ ಪ್ರದೇಶದಲ್ಲಿ ಬಾಕ್ಸೈಟ್ ಗಣಿಗಾರಿಕೆ ಸಮೀಕ್ಷೆಗೆ ಮುಂದಾಗಿದ್ದು, ಇದಕ್ಕೆ ಅವಕಾಶ ನೀಡಬಾರದು ಎಂದು ವೃಕ್ಷಲಕ್ಷ ಆಂದೋಲನದಿಂದ ಜಿಲ್ಲಾ ವಿಭಾಗ ಅರಣ್ಯ ಅಧಿಕಾರಿಗಳಿಗೆ ಪತ್ರ ಬರೆಯಲಾಗಿದೆ.

ಖಾಸಗಿ ಕಂಪನಿಗಳಿಗೆ 500 ಎಕರೆ ಪ್ರದೇಶದಲ್ಲಿ ಹೊನ್ನಾವರದ ಕರಾವಳಿ ಅರಣ್ಯದಲ್ಲಿ ಅವಕಾಶ ನೀಡಬಾರದು ಎಂದು ವೃಕ್ಷಲಕ್ಷ ಆಂದೋಲನ ಉ.ಕ. ಜಿಲ್ಲಾ ಮುಖ್ಯ ಅರಣ್ಯ ಸಂರಕ್ಷಣಾ ಅಧಿಕಾರಿಗಳಿಗೆ ಮನವಿ ಸಲ್ಲಿಸಿದೆ. ಹೊನ್ನಾವರ ಉಪ ಅರಣ್ಯ ಸಂರಕ್ಷಣಾ ಅಧಿಕಾರಿಗಳಿಗೆ ಪತ್ರ ಬರೆದಿದೆ.

2 ವರ್ಷ ಹಿಂದೆ ಭೂಕುಸಿತ ಆಗಿರುವ ಕಾಸರಕೋಡ ಅಪ್ಸರಕೊಂಡ ಪ್ರದೇಶದಲ್ಲಿ ಮೇಲಿನ ಇಡಗುಂಜಿ ಪ್ರದೇಶದಲ್ಲಿ ಬಾಕೈಟ್ ಗಣಿಗಾರಿಕೆಗೆ 440 ಹೆಕ್ಟೇರ್ ಪ್ರದೇಶದಲ್ಲಿ ಗಣಿಗಾರಿಕೆ ಸಮೀಕ್ಷೆಗೆ ಖಾಸಗಿ ಕಂಪನಿಗಳು ತಯಾರಿ ನಡೆಸಿವೆ. ಅರಣ್ಯ ಪರವಾನಿಗೆಯನ್ನು ನೀಡಬಾರದು ಎಂದು ವೃಕ್ಷಲಕ್ಷ ಆಂದೋಲನ, ಜಿಲ್ಲಾ ಪರಿಸರ ಸಮಿತಿಗಳು ಒತ್ತಾಯ ಮಾಡಿವೆ.

ಪಶ್ಚಿಮ ಕರಾವಳಿಯ ಏಕೈಕ ಸಮುದ್ರ ವನ್ಯಜೀವಿತಾಣ ಇಲ್ಲಿದೆ. ಇತಿಹಾಸ ಪ್ರಸಿದ್ಧ ಅಪ್ಪರ ಕೊಂಡ ಜಲಪಾತ ಇದೆ. ಪ್ರಸಿದ್ಧ ಇಡಗುಂಜಿ ದೇವಾಲಯ, ಕೆರೆಮನೆ ಯಕ್ಷಗಾನ ಕೇಂದ್ರ. ಸುಂದರ ಕಡಲತೀರ ಹೊಂದಿರುವ ಕಾಸರಕೋಡ ಇಡಗುಂಜಿ ಪ್ರದೇಶದಲ್ಲಿ ಬೃಹತ್ ಗಣಿಗಾರಿಕೆಗೆ ಯಾವುದೇ ಆರಂಭಿಕ ಪರಿಕ್ಷೆಗೂ ಅವಕಾಶಸಲ್ಲದು.

ಸಿ.ಆರ್.ಜಡ್. ವನ್ಯಜೀವಿ ಅರಣ್ಯ ಕಾಯಿದೆಗಳ ಉಲ್ಲಂಘನೆ ಆಗಲಿದೆ. ರಾಷ್ಟ್ರೀಯ ಹೆದ್ದಾರಿ, ರೈಲು ಹೆದ್ದಾರಿ, ಬಂದರು ನಿರ್ಮಾಣಗಳ ಕಾಮಗಾರಿಗಳಿಂದ ಈಗಾಗಲೇ ಕಾಸರಕೋಡ ಪ್ರದೇಶದ ಅರಣ್ಯ ನಾಶವಾಗಿದೆ ಎನ್ನುವುದನ್ನು ಎತ್ತಿ ಹೇಳಲಾಗಿದೆ.

ಶರಾವತಿ ನದಿ ತೀರದ ಕರಾವಳಿ ಅರಣ್ಯ ರಕ್ಷಣೆಗೆ ಆಧ್ಯತೆ ನೀಡಬೇಕು. ವ್ಯಾಪಕ ವಾಣಿಜ್ಯೀಕರಣದಿಂದ ಕರಾವಳಿ ಅರಣ್ಯದ ವಿನಾಶದ ಅಂಚಿನ ಸಸ್ಯ ಜಲಚರು ಅಳಿವೆಗಳ ಉಳಿವಿಗೆ ಕ್ರಮ ಬೇಕು. ರಾಷ್ಟ್ರೀಯ ಹೆದ್ದಾರಿ ಅಗಲೀಕರಣದಿಂದ ಇಲ್ಲಿನ ಬೆಟ್ಟಗಳು ಸಾಕಷ್ಟು ಭೂಕುಸಿತ–ಆಕ್ರಮಣಕ್ಕೆ ಒಳಗಾಗಿವೆ ಎಂದು ಹೇಳಲಾಗಿದೆ.

ಹೊನ್ನಾವರ ಅರಣ್ಯ ವಿಭಾಗದ ಕಚೇರಿಯಲ್ಲಿ ಹಲವು ವೈಜ್ಞಾನಿಕ ಅಧ್ಯಯನ ವರದಿಗಳು ಇವೆ. ಕರಾವಳಿ ಹಸಿರು ಕವಚ ಯೋಜನೆ ಪುನಃ ಜಾರಿ ಮಾಡಬೇಕು.

ಯಾವದೇ ಕಾರಣಕ್ಕೆ ಗಣಿಗಾರಿಕೆ ಸಮೀಕ್ಷೆಗೆ ಅವಕಾಶ ನೀಡಬಾರದು ಎಂದು ಅನಂತ ಹೆಗಡೆ ಅಶೀಸರ, ಡಾ. ಬಾಲಚಂದ್ರ, ಡಾ. ಮಹಾಬಲೇಶ್ವರ, ಡಾ. ಪ್ರಕಾಶ್, ಡಾ. ಸುಭಾಸಚಂದ್ರನ್, ಡಾ. ವಿ.ಎನ್.ನಾಯ್ಕ ಮೊದಲಾದ ಕರಾವಳಿ ಪರಿಸರ ವಿಜ್ಞಾನಿಗಳು ಅಭಿಪ್ರಾಯ ಪಟ್ಟಿದ್ದಾರೆ.

PREV

Recommended Stories

ಅಕ್ರಮ ಶಸ್ತ್ರಾಸ್ತ್ರ: ನಿನ್ನೆಯೂ ವಿಚಾರಣೆಗೆ ತಿಮರೋಡಿ ಗೈರು
ಸಿದ್ದು ಆಳ್ವಿಕೆ ಟಿಪ್ಪು ಆಳ್ವಿಕೆ ನಾಚಿಸುವಂತಿದೆ : ಬಿವೈವಿ