ಕನ್ನಡಪ್ರಭ ವಾರ್ತೆ ಹರಪನಹಳ್ಳಿ
ಹರಿಹರ ವೃತ್ತದಿಂದ ಹೊಸಪೇಟೆ ರಸ್ತೆ ಮೂಲಕ ಮೆರವಣಿಗೆ ನಡೆಸಿ ಐಬಿ ವೃತ್ತದಲ್ಲಿ ಬಹಿರಂಗ ಸಭೆ ನಡೆಸಿದರು. ಪರಿಶಿಷ್ಟ ಜಾತಿಗಳ ಒಳಮೀಸಲಾತಿಯಲ್ಲಿ ಸೂಕ್ಷ್ಮ ಹಾಗೂ ಅತಿ ಸೂಕ್ಷ್ಮ ಅಲೆಮಾರಿಗಳಿಗೆ ಅನ್ಯಾಯವಾಗಿದ್ದು, ಒಳಮೀಸಲಾತಿ ಜಾರಿ ಮಾಡುವ ಒತ್ತಡವಿದ್ದ ಹಿನ್ನೆಲೆ 101 ಪರಿಶಿಷ್ಟ ಜಾತಿಗಳಿಗೆ ಸೂಕ್ತ ಪ್ರಾತಿನಿಧ್ಯ ಕಲ್ಪಿಸುವಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ ಎಂದು ದೂರಿದರು.
ಮೀಸಲಾತಿಯನ್ನು ಎಚ್ಚರಿಕೆಯಿಂದ ನಿಗದಿಪಡಿಸಬೇಕಿದ್ದ ಸರ್ಕಾರ ಧ್ವನಿ ಇಲ್ಲದ ಹೀನಾಯ ಸ್ಥಿತಿಯಲ್ಲಿರುವ ಅಲೆಮಾರಿ ಸಮುದಾಯದ ವಿಷಯದಲ್ಲಿ ಎಡವಿದ್ದು, ಮರಣ ಶಾಸನ ಬರೆದು ಬಿಟ್ಟಿದೆ ಎಂದು ಆರೋಪಿಸಿದರು.ಬಂಜಾರ, ಭೋವಿ, ಕೊರಮ, ಕೊರಚ ಸಮುದಾಯಗಳ ಜೊತೆ ಸೇರಿಸಿ ಶೇ.5 ಮೀಸಲಾತಿಯನ್ನು ಅಲೆಮಾರಿ ಸಮುದಾಯಕ್ಕೆ ನೀಡಿದ್ದು, ಅಲೆಮಾರಿ ಸಮುದಾಯಗಳ ಮೀಸಲಾತಿಯಿಂದ ಶಾಶ್ವತವಾಗಿ ವಂಚಿತವಾಗಲಿವೆ ಎಂದು ಹೇಳಿದರು.
ನ್ಯಾಯಮೂರ್ತಿ ಡಾ. ಎಚ್.ಎಸ್. ನಾಗಮೋಹನದಾಸ್ ಏಕಸದಸ್ಯ ಆಯೋಗದ ಶಿಪಾರಸ್ಸಿನಂತೆ 59 ಸೂಕ್ಷ್ಮ, ಅಲೆಮಾರಿ ಪರಿಶಿಷ್ಟ ಜಾತಿಗಳನ್ನು ಪ್ರವರ್ಗ ಎರಲ್ಲಿಯೇ ಇರಿಸಿ ಶೇ.1ರಷ್ಟು ಒಳ ಮೀಸಲಾತಿ ನೀಡಿದರೂ ಪ್ರಥಮ ಆದ್ಯತೆ ನೀಡಿದಂತಾಗುತ್ತಿತ್ತು,
ಎಸ್ಸಿ, ಎಷ್ಟಿ ಅಲೆ ಮಾರಿ ಬುಡಕಟ್ಟು ಮಹಾಸಭಾ ರಾಜ್ಯಾಧ್ಯಕ್ಷ ವಿ.ಸಣ್ಣಅಜ್ಜಯ್ಯ, ಸಿಂದೋಳ ಸಮುದಾಯದ ದುರುಗೇಶ, ಹಂಡಿ ಜೋಗಿ, ಮೇದಾರ, ಚೆನ್ನದಾಸ, ಸಿಳ್ಳೆಕ್ಯಾತ, ಗೋಸಂಗಿ, ಡೊಂಬರ, ಸುಡಗಾಡು ಸಿದ್ದರ ಸಮುದಾಯಗಳ ಮುಖಂಡರು, ಕಾರ್ಯಕರ್ತರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.