ಕನ್ನಡಪ್ರಭ ವಾರ್ತೆ ಬಾಗಲಕೋಟೆ
ಬಿವಿವಿ ಸಂಘದ ಎಸ್.ನಿಜಲಿಂಗಪ್ಪ ಮೆಡಿಕಲ್ ಕಾಲೇಜಿನ ಆವರಣದಲ್ಲಿ ಫಿಜಿಯೋಥೆರಪಿ ಹಾಗೂ ಸ್ಪೀಚ್ ಆ್ಯಂಡ್ ಹಿಯರಿಂಗ್ ಕಾಲೇಜುಗಳ ಕಟ್ಟಡ ಉದ್ಘಾಟಿಸಿ ಮಾತನಾಡಿದರು. ಶಿಕ್ಷಣದ ಉದ್ದೇಶ ಜ್ಞಾನ ನೀಡುವುದಾಗಿದ್ದರೂ ಅದು ಮಾನವೀಯತೆ ತುಂಬಿದ ಜ್ಞಾನವಾಗಿರಬೇಕು. ಭಾವಿಸುವ ಹೃದಯ, ಆಲೋಚಿಸುವ ತಲೆ ಮತ್ತು ಕ್ರಿಯಾಶಕ್ತಿಯಿಂದ ಮನುಷ್ಯ ಅದ್ಭುತವಾದದ್ದನ್ನು ಸಾಧಿಸಬಹುದು. ಈ ನಿಟ್ಟಿನಲ್ಲಿ ಶಿಕ್ಷಣ ಮೂಲಕ ವಿದ್ಯಾರ್ಥಿಗಳಲ್ಲಿ ಉತ್ತಮ ಗುಣ ಬೆಳೆಸಬೇಕು. ಡಾ.ವೀರಣ್ಣ ಚರಂತಿಮಠ ಅವರು ಬಿವಿವಿ ಸಂಘದ ಮೂಲಕ ಶಿಕ್ಷಣ, ಸಾಮಾಜಿಕ ಮತ್ತು ಧಾರ್ಮಿಕ ಕ್ಷೇತ್ರಗಳಿಗೆ ವಿಶಿಷ್ಠ ಕೊಡುಗೆ ನೀಡುತ್ತಿರುವುದು ಶ್ಲಾಘನೀಯ ಎಂದು ಹೇಳಿದರು.
ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದ ಕೊಪ್ಪಳದ ಅಭಿನವ ಗವಿಸಿದ್ಧೇಶ್ವರ ಸ್ವಾಮೀಜಿ, ಲೋಕಕ್ಕೆ ಉಪಯೋಗವಾಗುವವನೇ ನಿಜವಾದ ಯೋಗಿಗಳಾಗಿದ್ದು, ಅಂಥ ಚಿಂತಕರು ಚಿಂತಿಸಿದ ಬಹುಮುಖ್ಯ ಸಂಗತಿ ಬದುಕು ಕುರಿತಾಗಿದೆ. ದೇವರು ನೀಡಿದ ಬದುಕು ಸಾರ್ಥಕವಾಗಬೇಕು. ಅಂಥ ಸಾರ್ಥಕತೆ ಉತ್ತಮ ಕೆಲಸಗಳಿಂದ ಪ್ರಾಪ್ತವಾಗುತ್ತದೆ. ಬಿವಿವಿ ಸಂಘ ಮಕ್ಕಳ ಎದೆಯಲ್ಲಿ ಅಕ್ಷರದೀಪ ಬೆಳಗುವ ಮಹೋನ್ನತ ಕಾರ್ಯ ಮಾಡುತ್ತಿದೆ. ಒಂದರ್ಥದಲ್ಲಿ ಬಿವಿವಿ ಸಂಘ ಈ ನೆಲದ ನಳಂದವಾಗಿದೆ ಎಂದು ಹೇಳಿದರು.ಅಧ್ಯಕ್ಷತೆ ವಹಿಸಿದ್ದ ಬಿವಿವಿ ಸಂಘದ ಕಾರ್ಯಾಧ್ಯಕ್ಷ ಡಾ.ವೀರಣ್ಣ ಚರಂತಿಮಠ ಅವರು ಬಾಗಲಕೋಟೆ ಜಿಲ್ಲೆಯಲ್ಲಿ ಫಿಜಿಯೋಥೆರಪಿ ಹಾಗೂ ಸ್ಪೀಚ್ ಆ್ಯಂಡ್ ಹಿಯರಿಂಗ್ ಕಾಲೇಜು ಸ್ಥಾಪಿಸಬೇಕೆನ್ನುವ ಕನಸು ನನಸಾಗಿದೆ. ಉದ್ಘಾಟನೆಗೊಂಡ ಮಹಾವಿದ್ಯಾಲಯಗಳಲ್ಲಿ ವಿದ್ಯಾರ್ಥಿಗಳ ಅಧ್ಯಯನಕ್ಕೆ ಅಗತ್ಯವಾದ ಎಲ್ಲ ಮೂಲ ಸೌಲಭ್ಯ ಒದಗಿಸಲಾಗಿದೆ ಎಂದು ಹೇಳಿದರು.
ಮಕ್ಕಳ ಎದೆಯಲ್ಲಿ ಅಕ್ಷರದೀಪ ಬೆಳಗುವ ಮಹೋನ್ನತ ಕಾರ್ಯದ ಮೂಲಕ ಬಿವಿವಿ ಸಂಘ ಈ ನೆಲದ ನಳಂದಾ ವಿವಿಯಂತೆ ಕೆಲಸ ಮಾಡಿದೆ.
- ಅಭಿನವ ಗವಿಸಿದ್ಧೇಶ್ವರ ಸ್ವಾಮೀಜಿ ಗವಿಮಠ ಕೊಪ್ಪಳ