ಕನ್ನಡಪ್ರಭ ವಾರ್ತೆ ಶಿವಮೊಗ್ಗ
ಇಂತಹ ಸಂದರ್ಭದಲ್ಲಿ ತುಂಗಾ ಜಲಾಶಯದಲ್ಲಿ ಇಂತಹದ್ದೆ ಅನಾಹುತ ಎಂಜಿನಿಯರ್ಗಳು ಮತ್ತು ಸಿಬ್ಬಂದಿಯ ಮುನ್ನೆಚ್ಚರಿಕೆಯಿಂದ ತಪ್ಪಿರುವುದು ಪ್ರಶಂಸೆಗೆ ಕಾರಣವಾಗಿದೆ.
ತುಂಗಾ ಜಲಾಶಯದಲ್ಲಿ ಒಟ್ಟು 22 ರೇಡಿಯಲ್ ಗೇಟ್ಗಳ ಪೈಕಿ ಒಂದು ಕ್ರಸ್ಟ್ ಗೇಟ್ ಕೆಲಸ ಮಾಡುತ್ತಿರಲಿಲ್ಲ. ಮಳೆಗಾಲದ ಆರಂಭದಲ್ಲಿ ಜಲಾಶಯದ 8ನೇ ಗೇಟ್ನ ವೈಯರ್ರೋಪ್ ಹಾಳಾಗಿರುವುದನ್ನು ಗಮನಿಸಿದ ಎಂಜಿನಿಯರ್ಗಳು ಇದನ್ನು ಓಪನ್ ಮಾಡದೆ ಜಾಣ್ಮೆಯಿಂದ ಪರಿಸ್ಥಿತಿ ನಿಭಾಯಿಸಿದ್ದಾರೆಆಗೊಂದು ವೇಳೆ ಒತ್ತಡ ಹಾಕಿ ಗೇಟ್ ಎತ್ತಲು ಹೋಗಿ ಹಾಳಾದರೆ ಮಳೆಗಾಲ ಮುಗಿಯುವವರೆಗೂ ದುರಸ್ತಿ ಮಾಡಲು ಸಾಧ್ಯವಿಲ್ಲ. ಹೀಗಾಗಿ ಮಳೆಗಾಲ ಮುಗಿಯುವರೆಗೂ ಯಾವುದೇ ರಿಸ್ಕ್ ತೆಗೆದುಕೊಳ್ಳುವುದು ಬೇಡ ಎಂದು ಸುಮ್ಮನಾದರು. ಜುಲೈನಲ್ಲಿ 85 ಸಾವಿರ ಕ್ಯೂಸೆಕ್ಗೂ ಅಧಿಕ ಒಳಹರಿವು ಇದ್ದಾಗ ಜಲಾಶಯದ ಎಲ್ಲ 22 ಗೇಟ್ಗಳನ್ನು ಓಪನ್ ಮಾಡಲೇಬೇಕಾಗುತ್ತದೆ. ಆದರೆ, ಈ ಬಾರಿ 8ನೇ ಗೇಟ್ ಅನ್ನು ಓಪನ್ ಮಾಡದೆ 21 ಗೇಟ್ ಮೂಲಕವೇ ಎಲ್ಲ ನೀರನ್ನು ಹೊರಬಿಟ್ಟಿದ್ದಾರೆ.
ಒಳಹರಿವು ಏರಿದಂತೆ, ಇಳಿದಂತೆ ಗೇಟ್ ಎತ್ತರ ಇಳಿಸಿಬೇಕಾದ, ಏರಿಸಬೇಕಾದ ಅನಿವಾರ್ಯತೆ ಎದುರಾಗಿತ್ತು. ಇಂತಹ ಕಷ್ಟಕರ ಸಂದರ್ಭದಲ್ಲೂ ಒಂದು ಗೇಟ್ ಅನ್ನು ಓಪನ್ ಮಾಡದೆ ಪರಿಸ್ಥಿತಿ ನಿಭಾಯಿಸಿದ್ದಾರೆ. ತುಂಗಾ ಜಲಾಶಯದ ಎಂಜಿನಿಯರ್, ಅಧಿಕಾರಿ, ಸಿಬ್ಬಂದಿ ಮುನ್ನೆಚ್ಚರಿಕಾ ಕ್ರಮವಾಗಿ ದೊಡ್ಡ ಪ್ರಮಾಣದ ಸಂಭಾವ್ಯ ದುರಂತ, ನಷ್ಟವೊಂದು ತಪ್ಪಿದೆ.
ಇನ್ನು, ಜಲಾಶಯದಿಂದ ನೀರು ನದಿಗೆ ಬಿಡುವ ವೇಳೆ 8ನೇ ಗೇಟ್ದಾರದ ಎಳೆಯಂತಿರುವ ವೈಯರ್ ರೋಪ್ ಸ್ವಲ್ಪ ಭಾಗ ತುಂಡಾಗಿದ್ದನ್ನು ಗಮನಿಸಲಾಗಿತ್ತು. ಒಂದು ವೇಳೆ ಗೇಟ್ ತೆಗೆದಿದ್ದರೂ ಅಂತಹ ಗಂಭೀರ ಸಮಸ್ಯೆ ಆಗುತ್ತಿರಲಿಲ್ಲ. ಆದರೆ, ಯಾವುದಕ್ಕೂ ಸುರಕ್ಷಿತ ಕ್ರಮವಾಗಿ ಮುನ್ನೆಚ್ಚರಿಕೆ ವಹಿಸಿ ಗೇಟ್ ತೆರೆಯಲಿಲ್ಲ. ವೈಯರ್ ರೋಪ್ ಸಮಸ್ಯೆ ಕಂಡು ಬಂದ ನಂತರ ಮೇಲಾಧಿಕಾರಿಗಳಿಗೆ ಪತ್ರ ಬರೆದು ವೈಯರ್ ರೋಪ್ ದುರಸ್ತಿಗೆ ಬೇಕಾದ ಸಾಮಗ್ರಿಗಳನ್ನು ಬೆಂಗಳೂರಿನಿಂದ ತರಿಸುವ ವ್ಯವಸ್ಥೆಯಾಗಿದೆ. ಮುಂದಿನ ಎರಡು ಮೂರು ದಿನಗಳಲ್ಲಿ ವೈಯರ್ ರೋಪ್ ಸಮಸ್ಯೆ ಸರಿಪಡಿಸಲಾಗುವುದು ಎಂದು ತುಂಗಾ ಜಲಾಶಯದ ಎಂಜಿನಿಯರ್ ತಿಪ್ಪಾನಾಯ್ಕ್ ಹೇಳಿದರು.