ನರೇಗಾ ಬೆಂಬಲ: ಪರಿಸರ ರಕ್ಷಣೆಯತ್ತ ಹಳ್ಳಿಗರ ಹೆಜ್ಜೆ

KannadaprabhaNewsNetwork |  
Published : Jun 22, 2025, 11:48 PM IST
ಪರಿಸರ ಸಂರಕ್ಷಣೆಯತ್ತ ಹಳ್ಳಿಗರ ಹೆಜ್ಜೆ  | Kannada Prabha

ಸಾರಾಂಶ

ಕಾರ್ಕಳದ ಸಾಮಾಜಿಕ ಅರಣ್ಯ ಇಲಾಖೆ ಸಹಕಾರದೊಂದಿಗೆ ಗ್ರಾಮಸ್ಥರು ಶ್ರಮದಾನದಲ್ಲಿ ತೊಡಗಿದ್ದು, 150ಕ್ಕೂ ಹೆಚ್ಚು ಸಸಿಗಳನ್ನು ನೆಡುವ ಉದ್ದೇಶದೊಂದಿಗೆ ಕಾರ್ಯಾರಂಭವಾಗಿದೆ. ಅರಣ್ಯ ಇಲಾಖೆಯ ಸಸ್ಯಕ್ಷೇತ್ರ, ಕೂಡುಬೆಟ್ಟುನಿಂದ ಗುಣಮಟ್ಟದ ಸಸಿಗಳನ್ನು ಆರಿಸಿ ತರಲಾಗುತ್ತಿದ್ದು, ಸಾರ್ವಜನಿಕ ಸ್ಥಳದಲ್ಲಿ ನೆಡುವ ಕಾರ್ಯ ಪ್ರಗತಿಯಲ್ಲಿದೆ.

ಚತುಷ್ಪಥ ಕಾಮಗಾರಿಗೆ ಸಾವಿರಕ್ಕೂ ಹೆಚ್ಚು ಪಾರಂಪರಿಕ ಮರಗಳು ಬಲಿ । ಮತ್ತೆ ಹಸಿರು ಚಿಗುರಿಸುವ ಪ್ರಯತ್ನ

ರಾಂ ಅಜೆಕಾರು

ಕನ್ನಡಪ್ರಭ ವಾರ್ತೆ ಕಾರ್ಕಳ

ಕಾರ್ಕಳ ತಾಲೂಕಿನಲ್ಲಿ ಮುಂಗಾರು ಚುರುಕಾಗಿದ್ದು, ಎಲ್ಲೆಡೆ ಹಸಿರು ಹೊಳೆಯುತ್ತಿದೆ. ಆದರೆ ಈ ಹಸಿರಿನ ಮಧ್ಯೆ ಮರಗಳ ಕಡಿತದ ಚಟುವಟಿಕೆಗಳು ಕೆಲವೆಡೆ ಅತಿಯಾಗಿದ್ದು, ಪರಿಸರ ಪ್ರೇಮಿಗಳನ್ನು ಚಿಂತೆಗೆ ಗುರಿಯಾಗಿಸುತ್ತಿವೆ. ಇಂತಹ ಸಂದರ್ಭದಲ್ಲಿಯೇ ಮಾಳ ಗ್ರಾಮದ ಆರತಿ ಅಶೋಕ್ ನೇತೃತ್ವದ ಗ್ರಾಮಸ್ಥರ ತಂಡ ಪರಿಸರ ಉಳಿವಿಗೆ ವಿಶಿಷ್ಟ ಪ್ರಯತ್ನ ಮಾಡುತ್ತಿದೆ.

ಇಲಾಖೆಯ ಸಹಕಾರ: ಕಾರ್ಕಳದ ಸಾಮಾಜಿಕ ಅರಣ್ಯ ಇಲಾಖೆ ಸಹಕಾರದೊಂದಿಗೆ ಗ್ರಾಮಸ್ಥರು ಶ್ರಮದಾನದಲ್ಲಿ ತೊಡಗಿದ್ದು, 150ಕ್ಕೂ ಹೆಚ್ಚು ಸಸಿಗಳನ್ನು ನೆಡುವ ಉದ್ದೇಶದೊಂದಿಗೆ ಕಾರ್ಯಾರಂಭವಾಗಿದೆ. ಅರಣ್ಯ ಇಲಾಖೆಯ ಸಸ್ಯಕ್ಷೇತ್ರ, ಕೂಡುಬೆಟ್ಟುನಿಂದ ಗುಣಮಟ್ಟದ ಸಸಿಗಳನ್ನು ಆರಿಸಿ ತರಲಾಗುತ್ತಿದ್ದು, ಸಾರ್ವಜನಿಕ ಸ್ಥಳದಲ್ಲಿ ನೆಡುವ ಕಾರ್ಯ ಪ್ರಗತಿಯಲ್ಲಿದೆ.ನರೆಗಾ ಬಳಕೆ: ಈ ಯೋಜನೆಗೆ ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ (ನರೆಗಾ) ಯ ಅನುದಾನ ಸಮರ್ಪಕವಾಗಿ ಉಪಯೋಗಿಸಲಾಗುತ್ತಿದೆ. ಯೋಜನೆಯಡಿ ಸ್ಥಳೀಯರೇ ಈ ಕಾರ್ಯದಲ್ಲಿ ಭಾಗಿಯಾಗಿದ್ದು, ಇದರಿಂದ ಗ್ರಾಮಸ್ಥರಿಗೆ ಉದ್ಯೋಗವೂ ದೊರಕಿದೆ.

ಈ ಪ್ರಗತಿಯ ಹೆಜ್ಜೆಗಳು ಕೇವಲ ಗಿಡ ನೆಡುವ ಕಾರ್ಯವಲ್ಲ, ಇದು ಗ್ರಾಮೀಣ ಪರಿಸರದ ಹಚ್ಚ ಹಸಿರು ಪುನರ್ ಸ್ಥಾಪಿಸುವ ಕಾರ್ಯವಾಗಿದೆ. ಹವಾಮಾನ ಬದಲಾವಣೆಯ ಪರಿಣಾಮಗಳನ್ನು ತಡೆಯಲು ಈ ರೀತಿಯ ಸಮೂಹ ಚಟುವಟಿಕೆಗಳು ಅತ್ಯಂತ ಅಗತ್ಯ.ಗ್ರಾಮಸ್ಥರ ಸಹಭಾಗಿತ್ವ: ಆರತಿ ಅಶೋಕ್ ನೇತೃತ್ವದಲ್ಲಿ ಹೂಮರ ಗುಂಡಿಪಲ್ಕೆಯ ರಸ್ತೆಗಳ ನೆಡುತೋಪು ನಿರ್ಮಾಣ ಮಾಡಲಾಗುತ್ತಿದೆ. ಅದಕ್ಕಾಗಿ ಸಕ್ರಿಯವಾಗಿ ಕೆಲಸ ಮಾಡುತ್ತಿರುವ ಸ್ಥಳೀಯರ ಸಂಕಲ್ಪ, ಪರಿಸರ ಪ್ರೇಮ ಮತ್ತು ನರೆಗಾ ಯೋಜನೆಯ ಸಮರ್ಥ ಬಳಕೆಯು ಇತರ ಗ್ರಾಮಗಳಿಗೆ ಮಾದರಿಯಾಗಲಿದೆ.

.................ಮಾಳದಿಂದ ಕಾರ್ಕಳ ಕಡೆಗೆ ಹಾದು ಹೋದುವ ರಾಷ್ಟ್ರೀಯ ಹೆದ್ದಾರಿ 169 ಎ ಚತುಷ್ಪತ ಕಾಮಗಾರಿ ಸಮಯದಲ್ಲಿ ಸಾವಿರಕ್ಕೂ ಹೆಚ್ಚು ಪಾರಂಪರಿಕ ಮರಗಳು ಬಲಿಯಾಗಿದ್ದವು. ಕೆಲವು ಮರಗಳನ್ನು ಸ್ಥಳಾಂತರಿಸಿ ಬದುಕಿಸಲಾಗಿದೆ. ಆದರೆ ಈ ಬಾರಿ ಅರಣ್ಯ ಇಲಾಖೆ ಸಹಾಯದಿಂದ ಗಿಡಗಳನ್ನು ನೆಟ್ಟು ಗ್ರಾಮಾಭಿವೃದ್ದಿಗೆ ಸಹಕಾರ ನೀಡುತಿದ್ದೆವೆ. ಈ ಗಿಡಗಳನ್ನು ನೆಡಲು ಹಾಗು ಪೋಷಿಸಲು 443 ಮಾನವ ದಿನಗಳನ್ನು ನಿಗದಿಪಡಿಸಿದೆ. ಅದಕ್ಕಾಗಿ 2 ಲಕ್ಷ ಏಳು ಸಾವಿರ ರು. ಹಣವನ್ನು ಇಲಾಖೆ ಮೀಸಲಿಟ್ಟಿದೆ.

-ಆರತಿ ಅಶೋಕ್, ಸಾಮಾಜಿಕ ಕಾರ್ಯಕರ್ತರು.

...................ಗಿಡಗಳನ್ನು ನೆಡಲು ಸರ್ಕಾರ ಪ್ರೋತ್ಸಾಹ ನೀಡುತ್ತದೆ. ಸರ್ಕಾರದ ಅನುದಾನ ಬಳಸಿಕೊಂಡು ಗಿಡಗಳನ್ನು ನೆಟ್ಟು ಪೋಷಣೆ ಯನ್ನು ಮಾಡಬೇಕು. ಅದಕ್ಕೆ ನರೆಗಾ ಯೋಜನೆಯು ಸಹಕಾರ ನೀಡುವ ಮೂಲಕ ಸ್ಥಳೀಯರಿಗೆ ಉದ್ಯೋಗ ನೀಡಲಾಗುತ್ತದೆ.

-ರವೀಂದ್ರ ಆಚಾರ್ಯ, ವಲಯ ಅರಣ್ಯಾಧಿಕಾರಿ, ಸಾಮಾಜಿಕ ಅರಣ್ಯ ಕಾರ್ಕಳ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪಲ್ಸ್‌ ಪೋಲಿಯೋ ಹಾಕಿಸಿ, ಅಂಗವಿಕತೆ ತಪ್ಪಿಸಿ
ಪುಷ್ಪಗಿರಿ ಜೇಸಿಗೆ 50 ವರ್ಷ: ಸಂಭ್ರಮ ಆಚರಣೆ