ಶಿಸ್ತು, ಸೇವಾ ಮನೋಭಾವ ಬೆಳೆಸಲು ಎನ್ಎಸ್ಎಸ್ ಸಹಕಾರಿ: ಟಿ.ವೈ. ದಾಸನಕೊಪ್ಪ

KannadaprabhaNewsNetwork |  
Published : Dec 03, 2025, 02:30 AM IST
ಮುಂಡಗೋಡ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಎನ್.ಎಸ್.ಎಸ್ ಘಟಕ-೧ ಮತ್ತು ಘಟಕ-೨ ಸಂಯುಕ್ತ ಆಶ್ರಯದಲ್ಲಿ ಇಂದೂರ ನಲ್ಲಿ ವಾರ್ಷಿಕ ವಿಶೇಷ ಶಿಬಿರ ನಡೆಯಿತು  | Kannada Prabha

ಸಾರಾಂಶ

ಎನ್ಎಸ್ಎಸ್ ಚಟುವಟಿಕೆಗಳು ವಿದ್ಯಾರ್ಥಿಗಳಲ್ಲಿ ಶಿಸ್ತು, ಸೇವಾ ಮನೋಭಾವ ಮತ್ತು ಸಮಯಪಾಲನೆ ಬೆಳೆಸುವ ಪ್ರಮುಖ ವೇದಿಕೆಯಾಗಿದೆ.

ಎನ್.ಎಸ್.ಎಸ್ ವಾರ್ಷಿಕ ವಿಶೇಷ ಶಿಬಿರದಲ್ಲಿ ತಾಪಂ ಕಾರ್ಯನಿರ್ವಹಣಾಧಿಕಾರಿಕನ್ನಡಪ್ರಭ ವಾರ್ತೆ ಮುಂಡಗೋಡ

ಎನ್ಎಸ್ಎಸ್ ಚಟುವಟಿಕೆಗಳು ವಿದ್ಯಾರ್ಥಿಗಳಲ್ಲಿ ಶಿಸ್ತು, ಸೇವಾ ಮನೋಭಾವ ಮತ್ತು ಸಮಯಪಾಲನೆ ಬೆಳೆಸುವ ಪ್ರಮುಖ ವೇದಿಕೆಯಾಗಿದೆ ಎಂದು ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಟಿ.ವೈ. ದಾಸನಕೊಪ್ಪ ಹೇಳಿದರು.

ಇಲ್ಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಎನ್ಎಸ್ಎಸ್ ಘಟಕ-೧ ಮತ್ತು ಘಟಕ-೨ ಸಂಯುಕ್ತ ಆಶ್ರಯದಲ್ಲಿ ಇಂದೂರನಲ್ಲಿ ನಡೆದ ವಾರ್ಷಿಕ ವಿಶೇಷ ಶಿಬಿರದಲ್ಲಿ ಮಾತನಾಡಿದರು. ಸ್ವರ್ಗದ ದಾರಿ ಮೊದಲಿಗೆ ನರಕದ ಅನುಭವ ನೀಡುತ್ತದೆ. ನರಕದ ದಾರಿ ಮೊದಲಿಗೆ ಸ್ವರ್ಗದ ಅನುಭವ ನೀಡಿದರೂ ಕೊನೆಯಲ್ಲಿ ನರಕದತ್ತ ಕರೆದೊಯ್ಯುತ್ತದೆ. ಕಾಯಕವೇ ಕೈಲಾಸ ಎಂದು ತತ್ತ್ವಜ್ಞಾನದ ನುಡಿಗಳನ್ನು ಹಂಚಿಕೊಂಡರು. ಜೊತೆಗೆ ಐಎಎಸ್ ಅಧಿಕಾರಿ ಮಹಾಂತೇಶ್ ಬೀಳಗಿ ಅವರ ಜೀವನಪಥವನ್ನು ವಿದ್ಯಾರ್ಥಿಗಳಿಗೆ ಮಾದರಿಯಾಗಿ ಪರಿಚಯಿಸಿ, ಶ್ರಮ ಹಾಗೂ ಸಂಯಮದ ಮಹತ್ವವನ್ನು ಒತ್ತಿ ಹೇಳಿದರು.

ಕಾಲೇಜಿನ ಪ್ರಾಂಶುಪಾಲ ಪ್ರಸನ್ನಸಿಂಗ್ ಹಜೇರಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಎನ್ಎಸ್ಎಸ್ ಚಟುವಟಿಕೆಗಳು ವಿದ್ಯಾರ್ಥಿಗಳಲ್ಲಿ ನಾಯಕತ್ವ, ಸಮಾಜ ಸೇವಾ ಮನೋಭಾವ, ದೇಶಭಕ್ತಿ ಮತ್ತು ವ್ಯಕ್ತಿತ್ವಾಭಿವೃದ್ಧಿ ಬೆಳೆಸುವ ಅಮೂಲ್ಯ ವೇದಿಕೆಯಾಗಿದೆ. ಕಾಲೇಜು ಶಿಕ್ಷಣ ಎಂದರೆ ಕೇವಲ ಅಂಕಪಟ್ಟಿ ಮಾತ್ರವಲ್ಲ ಅದು ಜೀವನ ರೂಪಿಸುವ ಶಿಕ್ಷಣ ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು.

ಎನ್ಎಸ್ಎಸ್ ಘಟಕ-೨ರ ಕಾರ್ಯಕ್ರಮಾಧಿಕಾರಿ ಮತ್ತು ಸಹಾಯಕ ಪ್ರಾಧ್ಯಾಪಕ ಮಲ್ಲಿಕಾರ್ಜುನ ಕನ್ನವಳ್ಳಿ ಪ್ರಸ್ತಾವಿಕ ನುಡಿ ಆಡಿದರು.

ಕಾರ್ಯಕ್ರಮಕ್ಕೆ ಗ್ರಾಪಂ ಅಧ್ಯಕ್ಷ ಫಕೀರಪ್ಪ ನಿಂಗಪ್ಪ ತಾವರಕೇರಿ, ಘಟಕ–೧ರ ಕಾರ್ಯಕ್ರಮಾಧಿಕಾರಿ ರಮೇಶ್, ಸಹಾಯಕ ಪ್ರಾಧ್ಯಾಪಕರಾದ ಬಲರಾಮ ಪಿ.ಜಿ., ಅತಿಥಿ ಉಪನ್ಯಾಸಕ ಶ್ರೀಧರ್, ಕಲಾವತಿ ಮತ್ತು ಪಾರ್ವತಿ ಹಿರೇಮಠ್ ಮುಂತಾದವರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬಿಪಿಎಲ್‌ ಮಾನದಂಡ ಬದಲಿಗೆ ಮುಂದಾದ ರಾಜ್ಯ
ಸರ್ಕಾರಿ ಶಾಲೆಗೆ ಶೀಘ್ರ 11000 ಶಿಕ್ಷಕರ ನೇಮಕ : ಮಧು