ಪ್ರಭಾವಶಾಲಿ ಶೈಕ್ಷಣಿಕ ಬರವಣಿಗೆ ಕಾರ್ಯಾಗಾರ

KannadaprabhaNewsNetwork |  
Published : Apr 18, 2026, 01:15 AM IST
46 | Kannada Prabha

ಸಾರಾಂಶ

ಟೂಲ್- ಅಸಿಸ್ಟೆಡ್ ಇಂಪ್ಯಾಕ್ಟ್ ಫುಲ್ ಅಕಾಡೆಮಿಕ್ ರೈಟಿಂಗ್: ಕ್ರಾಫ್ಟಿಂಗ್ ಮಲ್ಟಿಡಿಸಿಪ್ಲಿನರಿ

ಕನ್ನಡಪ್ರಭ ವಾರ್ತೆ ಮೈಸೂರು

ಓಕ್ ಜುಬಿಲಿ ವರ್ಷದ ಸಂಭ್ರಮದಲ್ಲಿರುವ ಮೈಸೂರಿನ ಸೇಂಟ್ ಫಿಲೋಮಿನಾ ಕಾಲೇಜು ಭೌತಶಾಸ್ತ್ರ ವಿಭಾಗ ಮತ್ತು ಆಂತರಿಕ ಗುಣಮಟ್ಟ ಭರವಸೆ ಕೋಶವು ಬೆಂಗಳೂರಿನ ಜ್ಯೋತಿ ನಿವಾಸ್ ಕಾಲೇಜು ಸಹಯೋಗದಲ್ಲಿ ಎರಡು ದಿನಗಳ ರಾಷ್ಟ್ರಮಟ್ಟದ ಕಾರ್ಯಾಗಾರ ಆಯೋಜಿಸಲಾಗಿತ್ತು.

ಟೂಲ್- ಅಸಿಸ್ಟೆಡ್ ಇಂಪ್ಯಾಕ್ಟ್ ಫುಲ್ ಅಕಾಡೆಮಿಕ್ ರೈಟಿಂಗ್: ಕ್ರಾಫ್ಟಿಂಗ್ ಮಲ್ಟಿಡಿಸಿಪ್ಲಿನರಿ, ಪಬ್ಲಿಶ್-ರೆಡಿ ಪೇಪರ್ಸ್ ಫಾರ್ ಇಂಡೆಕ್ಸ್ಡ್ ಜರ್ನಲ್ಸ್ ಶೀರ್ಷಿಕೆಯಡಿ ಈ ಕಾರ್ಯಾಗಾರ ಯಶಸ್ವಿಯಾಗಿ ಉದ್ಘಾಟನೆಗೊಂಡಿತು.

ನಗರದ ಎಸ್‌.ಡಿ.ಎಂ ಐಎಂಡಿ ಕಾರ್ಯಾಚರಣೆ ವಿಭಾಗದ ಮಾಜಿ ಪ್ರಾಧ್ಯಾಪಕ ಪ್ರೊ.ಆರ್‌. ಜಗದೀಶ್‌ ಕಾರ್ಯಕ್ರಮ ಉದ್ಘಾಟಿಸಿ, ಸಂಶೋಧನಾ ಭೂದೃಶ್ಯದ ನಕ್ಷೆ ವಿಷಯ ಕುರಿತು ದಿಕ್ಸೂಚಿ ಭಾಷಣ ಮಾಡಿದರು. ರೆವರೆಂಡ್‌ ಡಾ. ಲೂರ್ದು ಪ್ರಸಾದ್‌ ಜೋಸೆಫ್‌ ಅಧ್ಯಕ್ಷತೆ ವಹಿಸಿದ್ದರು. ಕಾಲೇಜಿನ ಪ್ರಾಂಶುಪಾಲ ಡಾ.ಎಸ್‌. ಮೇರಿ ಲೂಯಿಸಾ ವಿಶೇಷ ಆಶೀರ್ವಚನ ನೀಡಿದರು.

ಸೇಂಟ್ ಫಿಲೋಮಿನಾ ಕಾಲೇಜಿನ ಪ್ರಾಂಶುಪಾಲ ಡಾ. ರವಿ ಜೆ. ಡಿ. ಸಲ್ಡಾನ್ಹಾ, ಉಪ ಪ್ರಾಂಶುಪಾಲ ರೊನಾಲ್ಡ್ ಪ್ರಕಾಶ್ ಕುಟಿನ್ಹಾ, ಐಕ್ಯೂಎಸಿ ಸಂಯೋಜಕರು ಹಾಗೂ ಭೌತಶಾಸ್ತ್ರ ವಿಭಾಗದ ಮುಖ್ಯಸ್ಥ ಎ. ಥಾಮಸ್ ಗುಣಶೀಲನ್, ಪಿಜಿ ನಿರ್ದೇಶಕ ಡಾ.ಸಿ.ಎ. ನೂರ್ ಮುಬಶೀರ್ ಮತ್ತು ಕಾರ್ಯಾಗಾರದ ಸಂಯೋಜಕಿ ಡಾ.ವಿ. ದೀಪಾ ಇದ್ದರು.

ಈ ಕಾರ್ಯಾಗಾರದಲ್ಲಿ ಒಟ್ಟು 88 ಪ್ರತಿನಿಧಿಗಳು ಭಾಗವಹಿಸಿದ್ದಾರೆ. ಇದರಲ್ಲಿ ಅಧ್ಯಾಪಕರು, ಸಂಶೋಧನಾ ವಿದ್ಯಾರ್ಥಿಗಳು ಮತ್ತು ಕೈಗಾರಿಕಾ ಕ್ಷೇತ್ರದ ಸಿಬ್ಬಂದಿಗಳು ಸೇರಿದ್ದಾರೆ. ಕರ್ನಾಟಕ, ತಮಿಳುನಾಡು, ಕೇರಳ ಮತ್ತು ಆಂಧ್ರಪ್ರದೇಶದಿಂದ ಮಾತ್ರವಲ್ಲದೆ, ಅಮೆರಿಕಾದಿಂದಲೂ ಓರ್ವ ಅಭ್ಯರ್ಥಿ ಭಾಗವಹಿಸುವ ಮೂಲಕ ಕಾರ್ಯಾಗಾರವು ಯಶಸ್ವಿಯಾಯಿತು.

ಐಕ್ಯೂಎಸಿ ಸಹ-ಸಂಯೋಜಕಿ ಡಾ.ವಿ. ದೀಪಾ ಸ್ವಾಗತಿಸಿದರು. ಬಿಬಿಎ ವಿಭಾಗದ ಪ್ರಿಯಾಂಕಾ ಒಲಿವೆರಾ ಮತ್ತು ಬಿಕಾಂ ವಿಭಾಗದ ಬಿ. ಕವಿತಾ ನಿರೂಪಿಸಿದರು. ಸಿಸ್ಟಮ್ ಅಡ್ಮಿನಿಸ್ಟ್ರೇಟರ್ ಜಾನ್ ಜೋಸೆಫ್ ಮತ್ತು ಬಿ.ಕಾಂ ವಿಭಾಗದ ಡಾ. ಸುನಿಲ್ ಡಿ''''''''ಸೋಜಾ ಅವರು ನೇರ ಪ್ರಸಾರವನ್ನು ನಿರ್ವಹಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಚಳ್ಳಕೆರೆಯಲ್ಲಿ 18ರಿಂದ ಬಸವೇಶ್ವರ ಜಯಂತಿ
ವೇತನ ಹೆಚ್ಚಳಕ್ಕೆ ಆಗ್ರಹಿಸಿ ಪ್ರತಿಭಟನೆ