ಗ್ರಾಮೀಣ ಪ್ರದೇಶದಲ್ಲಿ ಆರೋಗ್ಯ ಜಾಗೃತಿ ಮೂಡಿಸುವುದೇ ಉದ್ದೇಶ: ವಿಭಾ ವರ್ಗೀಸ್

KannadaprabhaNewsNetwork | Updated : Jul 25 2024, 01:23 AM IST

ಸಾರಾಂಶ

ಕಡೂರು, ಗ್ರಾಮೀಣ ಪ್ರದೇಶದಲ್ಲಿ ಆರೋಗ್ಯದ ಬಗ್ಗೆ ಅರಿವು ಮೂಡಿಸುವ ಜೊತೆಗೆ ತಜ್ಞ ವೈದ್ಯರಿಂದ ತಪಾಸಣೆ ಮಾಡಿಸಿ ಸೂಕ್ತ ಚಿಕಿತ್ಸೆ ಪಡೆದು ಆರೋಗ್ಯವಂತ ಜೀವನ ನಡೆಸುವಂತೆ ಮಾಡುವುದು ನಮ್ಮ ಸಂಸ್ಥೆಯ ಮುಖ್ಯ ಉದ್ದೇಶ ಎಂದು ವಿಕಸನ ಸಂಸ್ಥೆ ಸಂಯೋಜಕಿ ವಿಭಾ ವರ್ಗೀಸ್ ಹೇಳಿದರು.

ಬೆಂಗಳೂರಿನ ಸಪ್ತಗಿರಿ, ಶರತ್ ಕಣ್ಣಿನ ಆಸ್ಪತ್ರೆ ಸಹಯೋಗದಲ್ಲಿ ಉಚಿತ ಆರೋಗ್ಯ ತಪಾಸಣೆ ಶಿಬಿರ ಉದ್ಘಾಟನೆ

ಕನ್ನಡಪ್ರಭ ವಾರ್ತೆ, ಕಡೂರು

ಗ್ರಾಮೀಣ ಪ್ರದೇಶದಲ್ಲಿ ಆರೋಗ್ಯದ ಬಗ್ಗೆ ಅರಿವು ಮೂಡಿಸುವ ಜೊತೆಗೆ ತಜ್ಞ ವೈದ್ಯರಿಂದ ತಪಾಸಣೆ ಮಾಡಿಸಿ ಸೂಕ್ತ ಚಿಕಿತ್ಸೆ ಪಡೆದು ಆರೋಗ್ಯವಂತ ಜೀವನ ನಡೆಸುವಂತೆ ಮಾಡುವುದು ನಮ್ಮ ಸಂಸ್ಥೆಯ ಮುಖ್ಯ ಉದ್ದೇಶ ಎಂದು ವಿಕಸನ ಸಂಸ್ಥೆ ಸಂಯೋಜಕಿ ವಿಭಾ ವರ್ಗೀಸ್

ಕಡೂರು ತಾಲೂಕಿನ ಯಗಟೀಪುರ ಗ್ರಾಮದಲ್ಲಿ ಶ್ರೀ ಪ್ರಸನ್ನ ಮಲ್ಲಿಕಾರ್ಜುನ ದೇವಾಲಯದ ಅಭಿವೃದ್ಧಿ ಸಮಿತಿ, ತರೀಕೆರೆ ವಿಕಸನ ಸಂಸ್ಥೆ, ಬೆಂಗಳೂರಿನ ಸಪ್ತಗಿರಿ ಆಸ್ಪತ್ರೆ, ಶರತ್ ಕಣ್ಣಿನ ಆಸ್ಪತ್ರೆ ಸಹಯೋಗದಲ್ಲಿ ಉಚಿತ ಆರೋಗ್ಯ ತಪಾಸಣೆ ಮತ್ತು ಮಾಹಿತಿ ಶಿಬಿರ ಉದ್ಘಾಟಿಸಿ ಮಾತನಾಡಿದರು.

ಎಷ್ಟೋ ಬಡ ಕುಟುಂಬಗಳಲ್ಲಿರುವವರು ಹಣಕಾಸಿನ ಸಮಸ್ಯೆಯಿಂದ ಸೂಕ್ತ ಚಿಕಿತ್ಸೆ ಮಾಡಿಸಿಕೊಳ್ಳಲು ಹಿಂಜರಿಯುತ್ತಾರೆ. ಆದ ಕಾರಣ ಬೆಂಗಳೂರಿನ ಸಪ್ತಗಿರಿ ಆಸ್ಪತ್ರೆಯವರು ಇಂತಹ ಶಿಬಿರಗಳಲ್ಲಿ ಕಂಡು ಬರುವ ಬಡ ಕುಟುಂಬದವರಿಗೆ ಅಗತ್ಯ ವಿರುವ ಸೂಕ್ತ ಚಿಕಿತ್ಸೆಯನ್ನು ಉಚಿತವಾಗಿ ಮಾಡಿಕೊಡುತ್ತಾರೆ. ಇದರ ಸದುಪಯೋಗವನ್ನು ಗ್ರಾಮೀಣ ಜನರು ಮಾಡಿ ಕೊಳ್ಳಬೇಕು ಎಂದು ಕೋರಿದರು.

ಶ್ರೀ ಮಲ್ಲಿಕಾರ್ಜುನ ಸ್ವಾಮಿ ದೇವಾಲಯದ ಅಭಿವೃದ್ಧಿ ಸಮಿತಿ ಟ್ರಸ್ಟ್ ನ ಕಾರ್ಯದರ್ಶಿ ಪಿ.ಎಂ. ಪ್ರಸನ್ನ ಕುಮಾರ್ ಮಾತನಾಡಿ, ನಮ್ಮ ಗ್ರಾಮದಲ್ಲಿ ವಿಕಸನ ಸಂಸ್ಥೆಯಿಂದ ಆರೋಗ್ಯ ಶಿಬಿರ ನಡೆಸುತ್ತಿರುವುದು ಸಂತಸದ ಸಂಗತಿ. ಅತ್ಯುತ್ತಮವಾದ ಇಂತಹ ಸಾಮಾಜಿಕ ಕಳಕಳಿಗೆ ನಮ್ಮ ಟ್ರಸ್ಟ್ ಸದಾ ಸಹಕಾರ ನೀಡುತ್ತದೆ. ಆರೋಗ್ಯದ ಬಗ್ಗೆ ಅರಿವು ಮೂಡಿಸುವ ತಪಾಸಣೆಗಾಗಿ ನಡೆಸಲು ಸೂಕ್ತವಾಗುವಂತೆ ಎಲ್ಲ ವೈದ್ಯರಿಗೆ ಕೊಠಡಿಗಳನ್ನು ವ್ಯವಸ್ಥಿತವಾಗಿ ಮಾಡಿ ಕೊಟ್ಟಿದ್ದೇವೆ. ಇಂತಹ ಉತ್ತಮ ಕಾರ್ಯಗಳಿಗೆ ಸದಾ ಸಹಕಾರವಿರುತ್ತದೆ ಎಂದರು.

ಶಿಬಿರದಲ್ಲಿ ದೇವಾಲಯ ಸಮಿತಿ ಸದಸ್ಯರಾದ ಜಿ.ಟಿ.ರಾಜಶೇಖರ್, ಪಿ.ಎಂ ಶಿವಕುಮಾರ್, ಮಾರ್ಗದ ಮಧು ಕುಮಾರ್, ದೇವಾಲಯದ ವ್ಯವಸ್ಥಾಪಕ ಸಮಿತಿ ಅಧ್ಯಕ್ಷ ಕೆ ವಿ. ಜಯಣ್ಣ, ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಎಚ್. ಈಶ್ವರಪ್ಪ ಮತ್ತು ವೈದ್ಯರಾದ ಡಾ. ಕೌಶಿಕ್, ಡಾ.ಶಿವರಂಜಿನಿ, ಡಾ.ದೀಪಿಕಾ ಮತ್ತು ಸಪ್ತಗಿರಿ ಆಸ್ಪತ್ರೆ ತಜ್ಞರಿಂದ ತಪಾಸಣೆ ನಡೆಯಿತು. ಶಿಬಿರದಲ್ಲಿ ಸುಮಾರು 300ಕ್ಕೂ ಹೆಚ್ಚಿನ ಜನರು ತಪಾಸಣೆಗೆ ಒಳಗಾದರು. ಯಗಟಿ ವೈದ್ಯಾಧಿಕಾರಿ ಡಾ.ಅಕ್ಷತಾ, ಆರೋಗ್ಯ ಇಲಾಖೆಯ ಶಿವಕುಮಾರ್,ಲತಾಮಣಿ ಮತ್ತು ಆಶಾ ಕಾರ್ಯಕರ್ತರು, ವಿಕಸನ ಸಂಸ್ಥೆಯ ಸಿಬ್ಬಂದಿ ಎಂ ಎಚ್. ಲಕ್ಷ್ಮಣ್, ಎಲ್. ಮುಕುಂದ್, ವಸಂತ ಕುಮಾರಿ ಮತ್ತು ಗ್ರಾಮಸ್ಥರಿದ್ದರು.24ಕೆಕೆಡಿಯು2.

ಕಡೂರು ತಾಲೂಕಿನ ಯಗಟೀಪುರ ಗ್ರಾಮದಲ್ಲಿ ಶ್ರೀ ಪ್ರಸನ್ನ ಮಲ್ಲಿಕಾರ್ಜುನ ದೇವಾಲಯದ ಆವರಣದಲ್ಲಿ ಉಚಿತ ಆರೋಗ್ಯ ತಪಾಸಣೆ ಮತ್ತು ಮಾಹಿತಿ ಶಿಬಿರ ನಡೆಯಿತು.

Share this article