- ಹೆಬ್ಬಾಳ್ ಟೋಲ್ ಸಮೀಪದ ರಾ.ಹೆ.48ರಲ್ಲಿ ಘಟನೆ । ರಾಮಪ್ಪ ಮೃತ ವ್ಯಕ್ತಿ - ಲೈನ್ ಡಿಸಿಪ್ಲೀನ್ಗಾಗಿ ಪೊಲೀಸರು ವಾಹನಗಳ ತಪಾಸಣೆ ನಡೆಸುತ್ತಿದ್ದ ವೇಳೆ ದುರಂತ
- - -
ಕನ್ನಡಪ್ರಭ ವಾರ್ತೆ ದಾವಣಗೆರೆಚಾಲಕನ ದುರ್ವರ್ತನೆಯಿಂದ ಡಿಎಆರ್ ಪೊಲೀಸ್ ಕಾನ್ಸ್ಟೇಬಲ್ ಮೇಲೆ ಲಾರಿ ಹರಿದು ಆತ ಮೃತಪಟ್ಟ ಘಟನೆ ದಾವಣಗೆರೆ ತಾಲೂಕಿನ ಹೆಬ್ಬಾಳ್ ಗ್ರಾಮದ ರಾಷ್ಟ್ರೀಯ ಹೆದ್ದಾರಿ-48ರಲ್ಲಿರುವ ಟೋಲ್ ಬಳಿ ಮಂಗಳವಾರ ನಡೆದಿದೆ.
ಪೇದೆ ರಾಮಪ್ಪ ಪೂಜಾರಿ ಹಾಗೂ ಅಧಿಕಾರಿ, ಸಿಬ್ಬಂದಿ ಹೆಬ್ಬಾಳ್ ಟೋಲ್ ಬಳಿ ಲೈನ್ ಡಿಸಿಪ್ಲೀನ್ಗಾಗಿ ವಾಹನಗಳನ್ನು ತಪಾಸಣೆ ನಡೆಸುತ್ತಿದ್ದರು. ಹೆದ್ದಾರಿಯಲ್ಲಿ ಅತಿ ವೇಗವಾಗಿ ವಾಹನಗಳು ಸಾಗುತ್ತಿದ್ದುದನ್ನು ತಡೆದು, ಚಾಲಕರಿಂದ ವಾಹನ ಚಾಲನಾ ಪರವಾನಗಿ, ಸೀಟ್ ಬೆಲ್ಟ್ ಸೇರಿದಂತೆ ಇತರೆ ದಾಖಲೆಗಳನ್ನು ಪರಿಶೀಲಿಸುತ್ತಿದ್ದರು. ಆಗ ಲಾರಿಯೊಂದು ಬಂದಿದ್ದರಿಂದ ಲಾರಿ ನಿಲ್ಲಿಸುವಂತೆ ಪೇದೆ ರಾಮಪ್ಪ ಪೂಜಾರಿ ಕೈ ಮೂಲಕ ಸನ್ನೆ ಮಾಡಿದ್ದಾರೆ.
ಪೇದೆ ಮೇಲೆ ನುಗ್ಗಿಸಿದ ಲಾರಿಯನ್ನು ಸಂಚಾರ ಪೊಲೀಸರು ಸುಮಾರು ಅರ್ಧ ಕಿ.ಮೀ. ದೂರದವರೆಗೂ ಬೆನ್ನುಹತ್ತಿ ವಾಹನ ಸಮೇತ ಚಾಲಕನನ್ನು ಬಂಧಿಸಿದ್ದಾರೆ. ಚೆನ್ನೈ ಟು ಗೋವಾ ಎಕ್ಸ್ಪ್ರೆಸ್ ಎಂಬ ಫಲಕವಿದ್ದ ಕರ್ನಾಟಕ ನೋಂದಣಿಯ ಲಾರಿ ಇದಾಗಿದೆ. ಲಾರಿಯ ಮೇಲೆ ಶತ್ರುಗಳ ಆಶೀರ್ವಾದ ಎಂಬುದಾಗಿಯೂ ಬರೆಸಲಾಗಿದೆ. ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
-13ಕೆಡಿವಿಜಿ7:
- - -
ಪೇದೆ ಸಾವಿಗೆ ಕಾರಣವಾದ ಲಾರಿಯನ್ನು ಪೊಲೀಸರು ಜಪ್ತಿ ಮಾಡಿರುವುದು.