- 22ರಂದು ಶ್ರೀ ಗುರು ಬಸವರಾಜೇಂದ್ರ ಸ್ವಾಮಿಗಳ ಜಾತ್ರೆ ಹಿನ್ನೆಲೆ ಆಯೋಜನೆ । 46ನೇ ವರ್ಷದ ಸಮಗ್ರ ಪಾದಯಾತ್ರೆ
- - - ಕನ್ನಡಪ್ರಭ ವಾರ್ತೆ ದಾವಣಗೆರೆಶ್ರೀಕ್ಷೇತ್ರ ಕೊಟ್ಟೂರು ಶ್ರೀ ಗುರು ಬಸವೇಶ್ವರ ಸ್ವಾಮಿ ಜಾತ್ರೆ ಫೆ.22ರಂದು ನಡೆಯಲಿದೆ. ಇದರ ಅಂಗವಾಗಿ ಕೊಟ್ಟೂರು ಗುರುಬಸವರಾಜೇಂದ್ರ ಸ್ವಾಮಿ ಪಾದಯಾತ್ರೆ ಟ್ರಸ್ಟ್ನಿಂದ ಫೆ.19ರಂದು 46ನೇ ವರ್ಷದ ಸಮಗ್ರ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ. ನಗರದ ಚೌಕಿಪೇಟೆ ಶ್ರೀ ಗುರು ಬಕ್ಕೇಶ್ವರ ಮಹಾಸ್ವಾಮಿ ದೇವಸ್ಥಾನ ಆವರಣದಿಂದ ಯಾತ್ರೆ ಆರಂಭವಾಗಲಿದೆ ಎಂದು ಟ್ರಸ್ಟ್ ಅಧ್ಯಕ್ಷ ಕಣಕುಪ್ಪಿ ಮುರುಗೇಶಪ್ಪ ಹೇಳಿದರು.
ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಫೆ.19ರ ಸಂಜೆ 5 ಗಂಟೆಗೆ ಹೆಬ್ಬಾಳ್ ವಿರಕ್ತ ಮಠದ ಶ್ರೀ ಮಹಾಂತ ರುದ್ರೇಶ್ವರ ಸ್ವಾಮೀಜಿ, ವಿರಕ್ತ ಮಠದ ಶ್ರೀ ಬಸವಪ್ರಭು ಸ್ವಾಮೀಜಿ, ಅಯ್ಯನಹಳ್ಳಿ ಶ್ರೀ ಮಹೇಶ್ವರ ಶಿವಾಚಾರ್ಯ ಸ್ವಾಮೀಜಿ, ಕೊಟ್ಟೂರು ಹಿರೇಮಠದ ಶ್ರೀ ಶಿವಪ್ರಕಾಶ ಸ್ವಾಮೀಜಿ, ಕೋಣಂದೂರು ಶ್ರೀ ಶ್ರೀಪತಿ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಸಾನಿಧ್ಯದಲ್ಲಿ ಟ್ರಸ್ಟ್ ಗೌರವಾಧ್ಯಕ್ಷ, ಹಿರಿಯ ಕೈಗಾರಿಕೋದ್ಯಮಿ ಅಥಣಿ ಎಸ್.ವೀರಣ್ಣ ಅಧ್ಯಕ್ಷತೆಯಲ್ಲಿ ಪಾದಯಾತ್ರಿಗಳಿಗೆ ಬೀಳ್ಕೊಡುಗೆ ಸಮಾರಂಭ ನಡೆಯಲಿದೆ ಎಂದರು.ಶಾಸಕ ಡಾ.ಶಾಮನೂರು ಶಿವಶಂಕರಪ್ಪ, ಸಚಿವ ಎಸ್.ಎಸ್.ಮಲ್ಲಿಕಾರ್ಜುನ, ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ ದೀಪ ಬೆಳಗುವ ಮೂಲಕ ಸಮಾರಂಭ ಉದ್ಘಾಟಿಸುವರು. ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರ ಸ್ವಾಮಿ, ದೂಡಾ ಅಧ್ಯಕ್ಷ ದಿನೇಶ ಕೆ. ಶೆಟ್ಟಿ, ಮೇಯರ್ ಕೆ.ಚಮನ್ ಸಾಬ್ ಮುಖ್ಯ ಅತಿಥಿಯಾಗಿ ಭಾಗವಹಿಸುವರು. ಇದೇ ವೇಳೆ ಕೊಟ್ಟೂರಿನ ಲೇಖಕ, ಕನ್ನಡ ಪಂಡಿತ ಶ್ರೀ ರುದ್ರಮುನಿ ಸ್ವಾಮಿಗಳ ಆಶಯದಂತೆ ಶ್ರೀ ಗುರು ಕೊಟ್ಟೂರೇಶ್ವರರ ಪ್ರವಚನ ಕಾರ್ಯಕ್ರಮ ನಡೆದಿದ್ದು, ಅದರ ಮರೋಳದ ಗಾನಸಭಾ ಭೂಷಣ ವೇದಮೂರ್ತಿ ಮುದಕಯ್ಯ ಸ್ವಾಮಿಗಳು ಪ್ರವಚನ ಮಂಗಲ ನೆರವೇರಿಸಿಕೊಡುವರು ಎಂದು ತಿಳಿಸಿದರು.
ಹರಪನಹಳ್ಳಿ ತಾ. ಅರಸೀಕೆರೆ ಗ್ರಾಮದ ಶ್ರೀ ಕೋಲ ಶಾಂತೇಶ್ವರ ಮಠದಲ್ಲಿ ಫೆ.20ರಂದು 27ನೇ ವರ್ಷದ ಔಷಧೋಪಚಾರ ಸೇವೆ ಸಮಾರೋಪ ಶ್ರೀ ಶಾಂತಲಿಂಗ ದೇಶೀಕೇಂದ್ರ ಸ್ವಾಮೀಜಿ, ನಂದೀಪುರದ ಡಾ.ಶ್ರೀ ಮಹೇಶ್ವರ ಸ್ವಾಮೀಜಿ ಸಾನ್ನಿಧ್ಯದಲ್ಲಿ ಅಥಣಿ ಎಸ್.ವೀರಣ್ಣ ಅಧ್ಯಕ್ಷತೆಯಲ್ಲಿ ನಡೆಯಲಿದೆ. ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರಸ್ವಾಮಿ, ಪ್ರಾದೇಶಕ ಕಚೇರಿ ಉಪ ಔಷಧಿ ನಿಯಂತ್ರಕ ಜಿ.ಪಿ.ರವಿಪ್ರಸಾದ, ಫಿಜಿಷಿಯನ್ ಡಾ.ಕೆ.ಸಿದ್ದಪ್ಪ, ಸಹಾಯಕ ಔಷಧ ನಿಯಂತ್ರಕರಾದ ಎಂ.ಎಸ್.ಗೀತಾ, ಎಸ್.ಆರ್.ಪ್ರಸನ್ನಕುಮಾರ, ಜಿಲ್ಲಾ ಆಯುಷ್ ಅಧಿಕಾರಿ ಡಾ. ಬಿ.ಯು.ಯೋಗೇಂದ್ರ ಕುಮಾರ ಭಾಗವಹಿಸುವರು ಎಂದು ಹೇಳಿದರು.ಪಾದಯಾತ್ರೆ ಮಾರ್ಗ:
ಪಾದಯಾತ್ರೆಯು ಬಿ.ಕಲ್ಪನಹಳ್ಳಿ, ಬಿ.ಚಿತ್ತಾನಹಳ್ಳಿ, ಅಮೃತ ನಗರ, ಮಾಗಾನಹಳ್ಳಿ ಕೋಡಿ ಕ್ಯಾಂಪ್, ಜಂಬುಲಿಂಗನಹಳ್ಳಿ, ಸತ್ತೂರು, ಕಂಚಿಕೇರಿ, ಕ್ಯಾರಕಟ್ಟೆ ಕಾವನಹಳ್ಳಿ ಕ್ರಾಸ್, ತೌಡೂರು, ಅರಸೀಕೆರೆ, ಕಡಬಗೆರೆ, ಸಾಸ್ವಿಹಳ್ಳಿ, ಮತ್ತಿಹಳ್ಳಿ, ಕನ್ನಕಟ್ಟೆ, ಅಯ್ಯನಹಳ್ಳಿ ಮಾರ್ಗವಾಗಿ ಶ್ರೀಕ್ಷೇತ್ರ ಕೊಟ್ಟೂರು ತಲುಪಲಿದೆ. ಪಾದಯಾತ್ರಿಗಳು ಮಾರ್ಗವಾಗಿ ಸಾಗಲಿದೆ. ಎಲ್ಲಿಯೂ ಕರ್ಪೂರ ಹಚ್ಚಬಾರದು. ಸೇವಾಕರ್ತರು ನೀಡುವ ಪ್ರಸಾದ ದಾರಿಯಲ್ಲಿ ಚೆಲ್ಲಬಾರದು. ಪ್ಲಾಸ್ಟಿಕ್ ವಸ್ತುಗಳನ್ನ ಬಳಸಬಾರದು. ಪಾದಯಾತ್ರೆ ಬಗ್ಗೆ ಹೆಚ್ಚಿನ ಮಾಹಿತಿಗೆ ಮೊ: 96118-89151, 94483-56968, 98445-29449ಗೆ ಸಂಪರ್ಕಿಸುವಂತೆ ಕಣಕುಪ್ಪಿ ಮುರುಗೇಶಪ್ಪ ಮನವಿ ಮಾಡಿದರು.ಟ್ರಸ್ಟ್ನ ಕಾರ್ಯದರ್ಶಿ ಟಿ.ಜೆ.ಬಕ್ಕೇಶಪ್ಪ, ಸಹ ಕಾರ್ಯದರ್ಶಿ ಬಿ.ಚಿದಾನಂದ, ಖಜಾಂಚಿ ಮಲ್ಲಾಬಾದಿ ಗುರುಬಸವರಾಜ, ಸಿ.ಆರ್.ಜಯರಾಜ, ಸುಜಾತಮ್ಮ ಬೂಸ್ನೂರು, ಟಿಂಕರ್ ಮಂಜಣ್ಣ, ಕರಿಬಸಪ್ಪ, ಸಿವಿಲ್ ಇಂಜಿನಿಯರ್ ವೀರೇಶ, ವಿನುತಾ ರವಿ, ಕಂಬಿನೂರು ರುದ್ರಬಸವರಾಜ ಇತರರು ಇದ್ದರು.
- - -ಕೋಟ್ ದಾವಣಗೆರೆ-ಕಂಚಿಕೇರಿ ಮಾರ್ಗದಲ್ಲಿ ಮಾಗಾನಹಳ್ಳಿ ಕೋಡಿ ಕ್ಯಾಂಪ್ ಬಳಿ ಟ್ರಸ್ಟ್ನಿಂದ ಶ್ರೀ ಗುರು ಬಸವರಾಜೇಂದ್ರ ಸ್ವಾಮಿ ಸಮುದಾಯ ಭವನ ನಿರ್ಮಿಸಲಾಗಿದೆ. ಗರ್ಭಗುಡಿ, ದೇವಸ್ಥಾನ, ಸುಸಜ್ಜಿತ ಉದ್ಯಾನವನ, ಮಹಾದ್ವಾರ, ದಾಸೋಹ ಮನೆ, ಅರ್ಚಕರ ಮನೆ, ವಿಶ್ರಾಂತಿ ಗೃಹ, ಕಚೇರಿ ಹೀಗೆ ದಾನಿಗಳು, ಸಂಘ-ಸಂಸ್ಥೆಗಳ ಸಹಕಾರದಲ್ಲಿ ನಿರ್ಮಿಸಲಾಗುತ್ತಿದೆ. ಇನ್ನೂ ₹25 ಲಕ್ಷಗಳ ಅಗತ್ಯವಿದ್ದು, ಸಚಿವರು, ಸಂಸದರು, ಶಾಸಕರು ಜನಪ್ರತಿನಿಧಿಗಳು, ಭಕ್ತರು ಆರ್ಥಿಕವಾಗಿ ಸ್ಪಂದಿಸಬೇಕು
- ಕಣಕುಪ್ಪಿ ಮುರುಗೇಶಪ್ಪ, ಅಧ್ಯಕ್ಷ, ಕೊಟ್ಟೂರು ಶ್ರೀ ಗುರು ಬಸವರಾಜೇಂದ್ರ ಸ್ವಾಮಿ ಪಾದಯಾತ್ರೆ ಟ್ರಸ್ಟ್- - - -15ಕೆಡಿವಿಜಿ1:
ದಾವಣಗೆರೆಯಲ್ಲಿ ಶನಿವಾರ ಕೊಟ್ಟೂರು ಶ್ರೀ ಗುರು ಬಸವರಾಜೇಂದ್ರ ಸ್ವಾಮಿ ಪಾದಯಾತ್ರೆ ಟ್ರಸ್ಟ್ ಅಧ್ಯಕ್ಷ ಕಣಕುಪ್ಪಿ ಮುರುಗೇಶಪ್ಪ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.