ಶೀಘ್ರದಲ್ಲೇ ಒಂದೇ ಭಾರತ ರೈಲು : ಸಂಸದ ಜಿಗಜಿಣಗಿ

KannadaprabhaNewsNetwork |  
Published : May 07, 2026, 03:15 AM ISTUpdated : May 07, 2026, 08:17 AM IST
Ramesh Jigajinagi

ಸಾರಾಂಶ

  ಒಂದೇ ಭಾರತ ರೈಲು ಸಂಚಾರ ವಿಜಯಪುರದಲ್ಲಿ ಸಂಚರಿಸಲು ಜಿಲ್ಲೆಯ ಸಾರ್ವಜನಿಕರ ಬಹುದಿನಗಳ ಬೇಡಿಕೆಯಾಗಿದ್ದು, ಕಲಬುರಗಿ, ಹುಬ್ಬಳ್ಳಿ, ಬೆಳಗಾವಿಯಲ್ಲಿ ಸದ್ಯ ರೈಲು ಸಂಚರಿಸುತ್ತಿದೆ ಎಂದು ಸಂಸದ ರಮೇಶ ಜಿಗಜಿಣಗಿ ಹೇಳಿದರು.

 ವಿಜಯಪುರ :  ಒಂದೇ ಭಾರತ ರೈಲು ಸಂಚಾರ ವಿಜಯಪುರದಲ್ಲಿ ಸಂಚರಿಸಲು ಜಿಲ್ಲೆಯ ಸಾರ್ವಜನಿಕರ ಬಹುದಿನಗಳ ಬೇಡಿಕೆಯಾಗಿದ್ದು, ಕಲಬುರಗಿ, ಹುಬ್ಬಳ್ಳಿ, ಬೆಳಗಾವಿಯಲ್ಲಿ ಸದ್ಯ ರೈಲು ಸಂಚರಿಸುತ್ತಿದೆ.  ಆದರೆ, ವಸ್ತುಸ್ಥಿತಿ ಸಾರ್ವಜನಿಕರು ಅರ್ಥ ಮಾಡಿಕೊಳ್ಳಬೇಕು.  

ಕಾಮಗಾರಿ ಪೂರ್ಣಗೊಂಡಿಲ್ಲ

ಸೊಲ್ಲಾಪುರ, ಬಿಜಾಪುರ, ಗದಗ, ಹುಬ್ಬಳ್ಳಿಯ ವರೆಗೆ ರೈಲು ಮಾರ್ಗ ಕಾಮಗಾರಿ ಪೂರ್ಣಗೊಂಡಿಲ್ಲ. ಸದ್ಯ ಓಡುತ್ತಿರುವ ರೈಲಿನ ವೇಗವು 92 ರಿಂದ 100ರ ವರೆಗೆ ಇರುತ್ತದೆ. ಆದರೆ, ಒಂದೇ ಭಾರತ ರೈಲಿನ ವೇಗ 110 ರಿಂದ 140ರ ವೇಗವಾಗಿದೆ. ಆದ ಕಾರಣ ರೈಲಿನ ಮಾರ್ಗ ಕಾಮಗಾರಿಯಲ್ಲಿದ್ದು, ಈ ರೈಲು ಚಾಲನೆಯಾದರೆ ಏನಾದರೂ ಸಮಸ್ಯೆ ಆಗಬಾರದೆಂಬ ಹಿನ್ನೆಲೆ ಒಂದೇ ಭಾರತ ರೈಲು ಸಂಚಾರ ಮಾಡುವುದು ವಿಳಂಬವಾಗುತ್ತಿದೆ. 

ಕಾಮಗಾರಿ ಮುಗಿದ ನಂತರ ಈ ರೈಲು ಸಂಚರಿಸಲು ಚಾಲನೆ

ರೈಲು ಮಾರ್ಗ 2-3 ತಿಂಗಳಲ್ಲಿ ಪೂರ್ಣ ಪ್ರಮಾಣದಲ್ಲಿ ಕಾಮಗಾರಿ ಮುಗಿದ ನಂತರ ಈ ರೈಲು ಸಂಚರಿಸಲು ಚಾಲನೆಯಾಗುತ್ತದೆ. ವಿದ್ಯಾವಂತರು ಇದನ್ನು ಅರಿತುಕೊಳ್ಳಬೇಕು. ಯಾವುದೇ ರೀತಿಯ ತಪ್ಪು ಗ್ರಹಿಕೆಗೆ ಅಂಟಿಕೊಳ್ಳದೇ ರೈಲಿನ ಕುರಿತ ಅಪಪ್ರಚಾರ ಮಾಡಬಾರದು ಎಂದು ಸಂಸದ ರಮೇಶ ಜಿಗಜಿಣಗಿ ಪ್ರಕಟಣೆ ಮೂಲಕ ತಿಳಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.
Read more Articles on

Recommended Stories

ಬೆಂಗಳೂರು : ಜು.1ರೊಳಗೆ ಫುಟ್ಪಾತ್‌ ಬಿಡದಿದ್ದರೆ ಜೆಸಿಬಿ ಬರಲಿದೆ
ಮಲ್ಲಟ ಜೆಸ್ಕಾಂ ಉಪ ಕಚೇರಿಗೆ ಬೆಂಕಿ: ಸಿಬ್ಬಂದಿಗೆ ಹಲ್ಲೆ, ದೂರು