ಏಕಮುಖ ಚಿಂತನೆಗಳು ಅಪಾಯಕಾರಿ: ಮಂಜುನಾಥ ಅದ್ದೆ

KannadaprabhaNewsNetwork |  
Published : Feb 27, 2024, 01:35 AM IST
ದೊಡ್ಡಬಳ್ಳಾಪುರ ತಾಲೂಕು 13ನೇ ಕನ್ನಡ ಸಾಹಿತ್ಯ ಸಮ್ಮೇಳನದ ಮಕ್ಕಳ ಗೋಷ್ಠಿಯಲ್ಲಿ ಸುಧೀಂದ್ರ ವಸ್ತಾರೆ, ಬಾಲನಟಿ ಭೈರವಿ ಮತ್ತಿತರರು ಭಾಗವಹಿಸಿದ್ದರು. | Kannada Prabha

ಸಾರಾಂಶ

ದೊಡ್ಡಬಳ್ಳಾಪುರ: ಏಕಮುಖ ಚಿಂತನೆಗಳು ಅತ್ಯಂತ ಅಪಾಯಕಾರಿಯಾಗಿದ್ದು, ಮಾತು ಮತ್ತು ಕ್ರಿಯೆಯ ನಡುವೆ ಬೆಸುಗೆ ಇಲ್ಲವಾದರೆ ಕಾಯಕ ವ್ಯರ್ಥವಾಗುತ್ತದೆ ಎಂದು ಲೇಖಕ ಮಂಜುನಾಥ ಅದ್ದೆ ಅಭಿಪ್ರಾಯಪಟ್ಟರು.

ದೊಡ್ಡಬಳ್ಳಾಪುರ: ಏಕಮುಖ ಚಿಂತನೆಗಳು ಅತ್ಯಂತ ಅಪಾಯಕಾರಿಯಾಗಿದ್ದು, ಮಾತು ಮತ್ತು ಕ್ರಿಯೆಯ ನಡುವೆ ಬೆಸುಗೆ ಇಲ್ಲವಾದರೆ ಕಾಯಕ ವ್ಯರ್ಥವಾಗುತ್ತದೆ ಎಂದು ಲೇಖಕ ಮಂಜುನಾಥ ಅದ್ದೆ ಅಭಿಪ್ರಾಯಪಟ್ಟರು.

ಮಕ್ಕಳ ಗೋಷ್ಠಿಯಲ್ಲಿ ಮಾತನಾಡಿದ ಅವರು, ಸಾಮಾಜೀಕರಣ ಕ್ರಿಯೆಯ ವಿನ್ಯಾಸದ ಅರಿವು ಅಗತ್ಯ, ಇಂದು ಜ್ಞಾನ ಮಾರಾಟದ ಸರಕಾಗಿದೆ. ಸರಕು ಲಾಭ-ನಷ್ಟದ ಲೆಕ್ಕಾಚಾರಕ್ಕಷ್ಟೇ ಸೀಮಿತವಾದರೆ ಸಂಕುಚಿತಗೊಳ್ಳುತ್ತದೆ. ಸರ್ಕಾರಿ ಶಾಲಾ-ಕಾಲೇಜುಗಳನ್ನು ಸಮಕಾಲೀನ ಅಗತ್ಯಗಳಿಗೆ ಪೂರಕವಾಗಿ ಸಜ್ಜುಗೊಳಿಸಬೇಕಾದ ಕೆಲಸವನ್ನು ಸರ್ಕಾರಗಳು ಹೊಣೆಯಾಧಾರಿತವಾಗಿ ನಿಭಾಯಿಸದ ಕಾರಣ ಅನೇಕ ಸಮಸ್ಯೆಗಳಾಗುತ್ತಿವೆ ಎಂದರು.

ಭಾಷೆಯೇ ಮನುಷ್ಯನ ಸರ್ವಸ್ವ ಅಲ್ಲ. ಮನುಷ್ಯ ಸಂವೇದನೆಯ ವಿವಿಧ ಪದರಗಳಲ್ಲಿ ಭಾಷೆಯೂ ಒಂದು. ದೂರದೃಷ್ಟಿ ಇಲ್ಲದಿದ್ದರೆ ಸಮಾಜದ ಮುನ್ನಡೆ ಅಸಾಧ್ಯ. ಭಾವನಾತ್ಮಕ ವಿಚಾರಗಳ ಜೊತೆಗೆ ವಿವೇಕವಂತಿಕೆಯೂ ಅಗತ್ಯ ಎಂಬುದನ್ನು ಮರೆಯಬಾರದು ಎಂದು ತಿಳಿಸಿದರು.

ಪರಂಪರೆ ಜೊತೆಗೆ ಆಧುನಿಕತೆ ಬೆರೆಯಲಿ:

ಸ್ಪೂರ್ತಿ ಫೌಂಡೇಶನ್‌ನ ಸುಧೀಂದ್ರ ವಸ್ತಾರೆ ಮಾತನಾಡಿ, ಮಕ್ಕಳ ವಿಚಾರ ಲಹರಿಯನ್ನು ಪ್ರಭಾವಿಸುವ ಸಾಹಿತ್ಯ ಕನ್ನಡದಲ್ಲಿ ವಿಫುಲವಾಗಿದೆ. ದೇಶ, ಭಾಷೆ, ಅಭಿಮಾನ ಇತ್ಯಾದಿಯ ಜೊತೆಗೆ ನಿತ್ಯದ ಆಗುಹೋಗುಗಳ ಜ್ಞಾನವನ್ನು ಸಾಹಿತ್ಯ ನೀಡಬೇಕು. ಮಕ್ಕಳ ಅಭಿರುಚಿಯನ್ನು ಪ್ರಭಾವಿಸುವ ಸಾಹಿತ್ಯಕ್ಕೆ ಹೆಚ್ಚು ಮನ್ನಣೆ ದೊರೆಯುತ್ತದೆ. ಕನ್ನಡದ ಮಕ್ಕಳು ಹಲವು ಕ್ಷೇತ್ರಗಳಲ್ಲಿ ಛಾಪು ಮೂಡಿಸಿದ್ದು, ಪಾರಂಪರಿಕ ಜ್ಞಾನದ ಜೊತೆಗೆ ಆಧುನಿಕ ಚಿಂತನೆ ಅಗತ್ಯ ಎಂದರು.

ಕಿರುತೆರೆ ಬಾಲಕಲಾವಿದೆ ಬೈರವಿ ಹುಲಿಕುಂಟೆ, ಜಿಲ್ಲಾ ಕಸಾಪ ಸಂಘಟನಾ ಕಾರ್ಯದರ್ಶಿ ರಾಜಘಟ್ಟ ರವಿ, ನಿಖಿಲಾ ಶಾಲೆಯ ಕೀರ್ತನ, ಎಂಎಬಿಎಲ್‌ ಶಾಲೆಯ ಸೇವಂತಿ ಹಾಗೂ ಬಾಶೆಟ್ಟಿಹಳ್ಳಿ ಸರ್ಕಾರಿ ಪ್ರೌಢಶಾಲೆಯ ಜಗನ್ನಾಥ್, ನವೋದಯ ವಿದ್ಯಾಲಯದ ನಂದಿನಿ, ಅಜಾಕ್ಸ್‌ ಶಾಲೆಯ ಶಶಿಕಿರಣ್ ಮತ್ತಿತರರಿದ್ದರು. 26ಕೆಡಿಬಿಪಿ2-

ದೊಡ್ಡಬಳ್ಳಾಪುರ ತಾಲೂಕು 13ನೇ ಕನ್ನಡ ಸಾಹಿತ್ಯ ಸಮ್ಮೇಳನದ ಮಕ್ಕಳ ಗೋಷ್ಠಿಯಲ್ಲಿ ಸುಧೀಂದ್ರ ವಸ್ತಾರೆ, ಬಾಲನಟಿ ಭೈರವಿ ಮತ್ತಿತರರಿದ್ದರು.

PREV

Recommended Stories

ಭವಿಷ್ಯದ ದೃಷ್ಟಿಯಿಂದ ಬೆಂಗ್ಳೂರು ಸಜ್ಜುಗೊಳಿಸಿ: ಮೋದಿ
ಕಾಯುವಿಕೆ ಅಂತ್ಯ । 19 ಕಿ.ಮೀ. ಎಲೆಕ್ಟ್ರಾನಿಕ್ ಸಿಟಿಗೆ ಹಳದಿ ಮಾರ್ಗ ಮೆಟ್ರೋ - 25 ನಿಮಿಷಕ್ಕೆ 1 ರೈಲು