ಪ್ರಾಮಾಣಿಕ ವ್ಯಾಪಾರ ಮಾಡಿದರೆ ಮಾತ್ರ ಲಾಭದಲ್ಲಿ ಪುಣ್ಯಗಳಿಸಲು ಸಾಧ್ಯ

KannadaprabhaNewsNetwork |  
Published : Mar 01, 2026, 03:00 AM IST
ಬ್ಯಾಡಗಿ ತಾಲೂಕಿನ ತೆರೇದಹಳ್ಳಿ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಿದ ಸುದರ್ಶನ ಕೋಲ್ಡ್ ಸ್ಟೋರೇಜ್ ನ್ನು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಶನಿವಾರ ಉದ್ಘಾಟಿಸಿದರು. | Kannada Prabha

ಸಾರಾಂಶ

ರೈತನ ಶ್ರೇಯೋಭಿವೃದ್ಧಿ ಬಯಸುವ ಏಕೈಕ ಮಾರುಕಟ್ಟೆ ಬ್ಯಾಡಗಿ ಎಪಿಎಂಸಿ ಆರಂಭದಿಂದಲೂ ನಡೆಯುತ್ತಿರುವ ಪ್ರಾಮಾಣಿಕ ಹಾಗೂ ಪಾರದರ್ಶಕ ವ್ಯಾಪಾರದಿಂದಲೇ ವರ್ತಕರಿಗೆ ಪುಣ್ಯ ಲಭಿಸಿದ್ದು, ಹೂಡಿದ ಬಂಡವಾಳ ವರ್ಷದಿಂದ ವರ್ಷಕ್ಕೆ ದ್ವಿಗುಣಗೊಳ್ಳುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಅಭಿಪ್ರಾಯ ವ್ಯಕ್ತಪಡಿಸಿದರು.

ಬ್ಯಾಡಗಿ: ರೈತನ ಶ್ರೇಯೋಭಿವೃದ್ಧಿ ಬಯಸುವ ಏಕೈಕ ಮಾರುಕಟ್ಟೆ ಬ್ಯಾಡಗಿ ಎಪಿಎಂಸಿ ಆರಂಭದಿಂದಲೂ ನಡೆಯುತ್ತಿರುವ ಪ್ರಾಮಾಣಿಕ ಹಾಗೂ ಪಾರದರ್ಶಕ ವ್ಯಾಪಾರದಿಂದಲೇ ವರ್ತಕರಿಗೆ ಪುಣ್ಯ ಲಭಿಸಿದ್ದು, ಹೂಡಿದ ಬಂಡವಾಳ ವರ್ಷದಿಂದ ವರ್ಷಕ್ಕೆ ದ್ವಿಗುಣಗೊಳ್ಳುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಅಭಿಪ್ರಾಯ ವ್ಯಕ್ತಪಡಿಸಿದರು.

ಶನಿವಾರ ತಾಲೂಕಿನ ತೆರೇದಹಳ್ಳಿ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಿದ ಸುದರ್ಶನ ಕೋಲ್ಡ್ ಸ್ಟೋರೇಜ್ ಉದ್ಘಾಟಿಸಿ ಮಾತನಾಡಿದರು.

ರೈತರ ಬೆಳೆಗೆ ಸ್ಪರ್ಧಾತ್ಮಕ ದರ, ತೂಕದಲ್ಲಿ ಪಾರದರ್ಶಕತೆ, ಮಾರಾಟ ಮಾಡಿದ ದಿನವೇ ಹಣ ಬಟವಡೆ ಸೇರಿದಂತೆ, ವಿಶ್ವಾಸವಿರುವ ರೈತರಿಗೆ ಹಂಗಾಮಿನಲ್ಲಿ ಕೈಸಾಲ ನೀಡುವಂತಹ ಪದ್ಧತಿ ಇಲ್ಲಿಯ ವರ್ತಕರು ರೂಢಿಸಿಕೊಂಡಿದ್ದು ಹೀಗಾಗಿ ರೈತರು ಮೆಣಸಿನಕಾಯಿ ಮಾರಾಟಕ್ಕೆಂದು ಸುಮಾರು 500 ಕಿ.ಮೀ. ದೂರದಿಂದ ಬ್ಯಾಡಗಿಗೆ ಬಂದು ಹೋಗುತ್ತಿದ್ದಾರೆ ಎಂದರು.

ಮೆಣಸಿನಕಾಯಿ ಉದ್ದಿಮೆ: ಒಣ ಮೆಣಸಿನಕಾಯಿ ಬೆಳೆಯಲ್ಲಾದ ಕ್ರಾಂತಿಕಾರಿ ಬೆಳವಣಿಗೆಯಿಂದ ಬಹುದೊಡ್ಡ ಉದ್ದಿಮೆಯಾಗಿ ಪರಿವರ್ತನೆಗೊಂಡಿದೆ. ರೂಪಾಂತರಗೊಂಡ ಮೆಣಸಿನಕಾಯಿ ಆಹಾರ ಪದಾರ್ಥ ಸೇರಿದಂತೆ ಔಷಧಿ, ಲಿಫಸ್ಟಿಕ್ ಕಲರ್, ಪೇಯನ್ ಬಾಮ್ಸ್ ಇನ್ನಿತರ ಕೆಲಸಗಳಿಗೆ ಉಪಯೋಗವಾಗುತ್ತಿದೆ, ಇದರ ಪರಿಣಾಮ ಮೆಣಸಿನಕಾಯಿ ಬಹುದೊಡ್ಡ ಉದ್ದಿಮೆಯಾಗಿ ರೂಪುಗೊಂಡಿದ್ದು ಬ್ಯಾಡಗಿ ಸುತ್ತಮುತ್ತ ಸುಮಾರು 40 ಕೋಲ್ಡ್ ಸ್ಟೋರೆಜ್ ಸೇರಿದಂತೆ ನೂರಾರು ಪೌಡರ ಫ್ಯಾಕ್ಟರಿಗಳು ತಲೆ ಎತ್ತುವ ಮೂಲಕ ಉತ್ತಮ ಅಡಿಪಾಯ ಹಾಕಿಕೊಟ್ಟಿದೆ, ತಳಿ ಸಂಶೋಧನಾ ಕೇಂದ್ರಕ್ಕೆ ಹಲವು ವರ್ಷದಿಂದ ಬೇಡಿಕೆಯಿದೆ. ನಮ್ಮ ಅಧಿಕಾರದ ಅವಧಿಯಲ್ಲಿ ಬಜೆಟ್‌ನಲ್ಲಿ ಅನುಮೋದನೆ ಮಾಡಲಾಗಿತ್ತು, ಇದೀಗ ಅದನ್ನು ಅಳವಡಿಸಿಕೊಳ್ಳುವ ಭರವಸೆ ಇದೆ ಎಂದರು.

ಲಾಭಕ್ಕಾಗಿ ಬಡಿದಾಡಿ: ಸಾನಿಧ್ಯ ವಹಿಸಿದ್ದ ಕೊಪ್ಪಳ ಗವಿಮಠದ ಅಭಿನವ ಗವಿ ಶ್ರೀಗಳು ಮಾತನಾಡಿ, ರೈತರನ್ನೇ ದೇವರೆಂದು ಒಪ್ಪಿಕೊಂಡಂತಹ ದೇಶ ನಮ್ಮದು, ಆತನಿಗೆ ಮೋಸವೆಸಗಿದರೇ ದೇವರಿಗೆ ಮೋಸ ಮಾಡಿದಂತೆ. ವ್ಯಾಪಾರಸ್ಥರು ಲಾಭಕ್ಕಾಗಿ ಬಡಿದಾಡುವುದರಲ್ಲಿ ಧರ್ಮವಿದೆ. ಆದರೆ ಮೋಸ ಮಾಡಲೆಂದೇ ವ್ಯಾಪಾರ ಮಾಡಿದರೇ ಅದರ ಪರಿಣಾಮ ಬಹಳಷ್ಟು ಕೆಟ್ಟದಾಗಿರಲಿದೆ. ಇದಕ್ಕೆ ಅಧ್ಯಾತ್ಮ ಮತ್ತು ಅರ್ಥಶಾಸ್ತ್ರ ಅಧ್ಯಯನ ಮಾಡಿದರೇ ಎಲ್ಲವೂ ಅರ್ಥವಾಗುತ್ತದೆ ಎಂದರು.

ಲಾಭ ನಷ್ಟ ಪಾಪ ಪುಣ್ಯ: ಚಿಕ್ಕವರಿದ್ದಾಗ ಪಠ್ಯಪುಸ್ತಕದಲ್ಲಿದ್ದ ಬಂಗಾರದ ಕೊಡಲಿ ಎನ್ನುವ ಪಾಠ ಎಂದಿಗೂ ಮರೆಯಲು ಸಾಧ್ಯವಿಲ್ಲ. ಆಧ್ಯಾತ್ಮದಲ್ಲಿ ಪಾಪ ಪುಣ್ಯದ ಲೆಕ್ಕಾಚಾರವಿದ್ದಂತೆ. ಆರ್ಥಿಕತೆಯಲ್ಲಿ ಲಾಭ ನಷ್ಟವಿರುತ್ತದೆ, ಯುವಕರು ಒಳ್ಳೆಯ ರೀತಿಯಿಂದ ಪ್ರಾಮಾಣಿಕವಾಗಿ ವ್ಯಾಪಾರ ಮಾಡಿದರೆ ಪುಣ್ಯದ ಜೊತೆಗೆ ಲಾಭವು ಸಿಗಲಿದೆ ಎಂದರು.

ಈ ವೇಳೆ ಮಾಜಿ ಸಂಸದರಾದ ಸಂಗಣ್ಣ ಕರಡಿ, ಮಾಜಿ ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ, ಮುಖಂಡರಾದ ಭರತ ಬೊಮ್ಮಾಯಿ, ಸಂತೋಷ ಪಾಟೀಲ್, ಮಾಲೀಕರಾದ ಅವಿನಾಷ ಪಾಟೀಲ, ವಿನಾಯಕ ಮಾಳೇನಹಳ್ಳಿ ಸೇರಿದಂತೆ ಹಲವಾರು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಜಿಲ್ಲೆಯ ೪ ಪ್ರಾಥಮಿಕ ಆರೋಗ್ಯ ಕೇಂದ್ರಗಳು ಮೇಲ್ದರ್ಜೆಗೆ: ದಿನೇಶ ಗುಂಡೂರಾವ್
ರಾಜ್ಯದಲ್ಲಿ ಜನರು ಆತಂಕದಲ್ಲೇ ಬದುಕುವಂತಾಗಿದೆ: ಕಾಗೇರಿ