ವಿದ್ಯಾರ್ಥಿಗಳು ಕ್ರೀಡೆ, ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿ: ಮೃತ್ಯುಂಜಯ ಪೂಜಾರ

KannadaprabhaNewsNetwork |  
Published : Mar 01, 2026, 03:00 AM IST
ಪೋಟೊ ಕ್ಯಾಪ್ಸನ್:ಡಂಬಳ ಗ್ರಾಮದ ಸರಕಾರಿ ಮಾದರಿ ಕೇಂದ್ರ ಶಾಲೆಯ  ವಾರ್ಷಿಕೋತ್ಸವ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟಿಸಿದ ಎಸ್ ಡಿ ಎಮ್ ಸಿ ಅಧ್ಯಕ್ಷ ಸೋಮಪ್ಪ ತಳಗೇರಿ. ಶಾಂತಯ್ಯ ಗುರುವಿನ, ಶೇಖರಯ್ಯ ಗುರುವಿನ, ಮುಖ್ಯೋಪಾಧ್ಯಾಯ ವಾಯ್. ಎಸ್.ಚಲವಾದಿ ಇದ್ದರು.ಪೋಟೊ ಕ್ಯಾಪ್ಸನ್:ಡಂಬಳ ಗ್ರಾಮದ ಸರಕಾರಿ ಮಾದರಿ ಕೇಂದ್ರ ಶಾಲೆಯ  ವಾರ್ಷಿಕೋತ್ಸವದಲ್ಲಿ  ವಿದ್ಯಾರ್ಥಿಗಳಿಙದ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿದವು. | Kannada Prabha

ಸಾರಾಂಶ

ವಿದ್ಯಾರ್ಥಿಗಳು ಕೇವಲ ಪಠ್ಯಪುಸ್ತಕಗಳಿಗೆ ಸೀಮಿತವಾಗದೆ ಕ್ರೀಡೆ, ಸಾಂಸ್ಕೃತಿಕ ಹಾಗೂ ನೈತಿಕ ಮೌಲ್ಯಗಳನ್ನೂ ಅಳವಡಿಸಿಕೊಳ್ಳಬೇಕು ಎಂದು ಸಿಆರ್‌ಪಿ ಮೃತ್ಯುಂಜಯ ಪೂಜಾರ ಹೇಳಿದರು.

ಡಂಬಳ: ವಿದ್ಯಾರ್ಥಿಗಳು ಕೇವಲ ಪಠ್ಯಪುಸ್ತಕಗಳಿಗೆ ಸೀಮಿತವಾಗದೆ ಕ್ರೀಡೆ, ಸಾಂಸ್ಕೃತಿಕ ಹಾಗೂ ನೈತಿಕ ಮೌಲ್ಯಗಳನ್ನೂ ಅಳವಡಿಸಿಕೊಳ್ಳಬೇಕು ಎಂದು ಸಿಆರ್‌ಪಿ ಮೃತ್ಯುಂಜಯ ಪೂಜಾರ ಹೇಳಿದರು.

ಡಂಬಳ ಗ್ರಾಮದ ಸರಕಾರಿ ಮಾದರಿ ಕೇಂದ್ರ ಶಾಲೆಯ ಶಾಲಾ ವಾರ್ಷಿಕೋತ್ಸವ ಮತ್ತು ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಮಾತನಾಡಿದರು.ಶಿಕ್ಷಕರ ಜೊತೆಗೆ ಪಾಲಕರೂ ಮಕ್ಕಳ ಬಗೆಗೆ ಕಾಳಜಿ ವಹಿಸಿದಾಗ ಉತ್ತಮ ಫಲಿತಾಂಶ ಸಾಧ್ಯವಾಗುತ್ತದೆ ಎಂದು ಹೇಳಿದರು.

ಮುಖ್ಯೋಪಾಧ್ಯಾಯ ವೈ.ಎಸ್. ಚಲವಾದಿ, ಎಸ್‌ಡಿಎಂಸಿ ಅಧ್ಯಕ್ಷ ಸೋಮಪ್ಪ ತಳಗೇರಿ ಮಾತನಾಡಿ, ವಿದ್ಯೆ ಮತ್ತು ಸಂಸ್ಕಾರ ಮುಖ್ಯ. ಸಮಾಜದಲ್ಲಿ ಒಳ್ಳೆಯ ನಾಗರಿಕರಾಗಲು ಶಿಕ್ಷಣದ ಜೊತೆಗೆ ಮಾನವೀಯ ಮೌಲ್ಯಗಳೂ ಅಗತ್ಯ ಎಂದು ಹೇಳಿದರು.

ಹಿರಿಯ ಶಿಕ್ಷಕ ಎಂ.ಎಂ. ಬಂಡಿ ಮಾತನಾಡಿ, ವಿದ್ಯೆ ಮಾತ್ರವೇ ಜೀವನವನ್ನು ಉಜ್ವಲಗೊಳಿಸುವ ಏಕೈಕ ಶಕ್ತಿ ಎಂದು ಹೇಳಿದರು.

ಶಿಕ್ಷಕ ಮಹೇಶ ವಾರ್ಷಿಕ ವರದಿ ಮಂಡಿಸಿದರು. ವಿದ್ಯಾರ್ಥಿಗಳಿಂದ ದೇಶಭಕ್ತಿ ಗೀತೆ, ಜನಪದ ನೃತ್ಯ, ನಾಟಕ ಪ್ರದರ್ಶನ ಸೇರಿದಂತೆ ಹಲವು ಮನರಂಜನಾ ಕಾರ್ಯಕ್ರಮಗಳು ನಡೆದವು. ವಿದ್ಯಾರ್ಥಿಗಳ ನೃತ್ಯ ವಿಶೇಷ ಆಕರ್ಷಣೆಯಾಗಿತ್ತು. ಪಾಲಕರು ಹಾಗೂ ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಮಕ್ಕಳಿಗೆ ಉತ್ತೇಜನ ನೀಡಿದರು.

ಎಸ್‌ಡಿಎಂಸಿ ಉಪಾಧ್ಯಕ್ಷೆ ಕಸ್ತೂರಿ ಗುರುವಿನ, ಶಾಂತಯ್ಯ ಗುರುವಿನ, ಶೇಖರಯ್ಯ ಗುರುವಿನ, ಮಾರುತಿ ಕೊಳ್ಳಾರ, ಮಾರುತಿ ಹೊಂಬಳ, ಬಸವರಾಜ ಬೇವಿನಮರದ, ಮರಿಯಪ್ಪ ಸಿದ್ದಣ್ಣವರ, ಮಾಜಿ ಸೈನಿಕ ವಾಸಪ್ಪ ಕಾಶಭೋವಿ, ನೀಲವ್ವ ಹೊಂಬಳ, ಕಸ್ತೂರಿ ಗುರುವಿನ, ಕೌಸರ ಚಾಂದಖಾನ್‌, ಶಾಂತಮ್ಮ ಸಾಳೇರ, ಬಸವರಾಜ ಹಮ್ಮಗಿ, ಹನಮವ್ವ ಜಂತ್ರಿ, ಲಕ್ಷ್ಮವ್ವ ಮಾದರ, ಮಹೇಶ ರಾಯರಡ್ಡಿ, ದುರಗಪ್ಪ ಮಾದರ, ಶಿವಾನಂದ ಬಂಡಿ, ಶಕುಂತಲಾ ಪಲ್ಲೇದ, ಶಿವಮೂರ್ತಯ್ಯ ಅಮೋಘಮಠ, ಎಲ್.ಎಂ. ಚಿಕ್ಕರಡ್ಡಿ, ಅಬ್ದುಲ್ ರಜಾಕ ತಾಂಬೋಟಿ, ಎಸ್.ಎಸ್. ಬಾರಕೇರ, ದೇವೇಂದ್ರಪ್ಪ ಗೌಡನ್ನವರ, ಶಾಂತಾ ಚ. ಗುಡ್ಡದ, ಜಿ.ಎನ್. ನೀರಲಗಿ, ಜಯಶ್ರೀ ದಂಡಿನ, ಶೋಭಾ ಕರಿಗಾರ, ಹನುಮಂತ ಮುರ್ಖಾನಿ, ಶಿಕ್ಷಕರಾದ ಜಿ.ಎನ್. ನೀರಲಗಿ, ಎಲ್.ವಿ. ಕಂಟಿಗೊಣ್ಣವರ, ಸುರೇಖಾ ಜಾಲಿಹಾಳ, ಕೆ.ವೈ. ಬಡಿಗೇರ, ಎಸ್.ಕೆ. ಮಠದ, ನೀಲಮ್ಮ ಇಂಗಳಳ್ಳಿ, ಶರಣಪ್ಪ ಆನಿ, ಆನಂದ ಆರ್, ಲಕ್ಷ್ಮೀಬಾಯಿ ನಿಟ್ಟೂರ ಗ್ರಾಮದ ಹಿರಿಯರು, ಮಹಿಳೆಯರು, ವಿದ್ಯಾರ್ಥಿಗಳು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಜಿಲ್ಲೆಯ ೪ ಪ್ರಾಥಮಿಕ ಆರೋಗ್ಯ ಕೇಂದ್ರಗಳು ಮೇಲ್ದರ್ಜೆಗೆ: ದಿನೇಶ ಗುಂಡೂರಾವ್
ರಾಜ್ಯದಲ್ಲಿ ಜನರು ಆತಂಕದಲ್ಲೇ ಬದುಕುವಂತಾಗಿದೆ: ಕಾಗೇರಿ