ಸಂಗೀತದ ಸವಿರುಚಿ ಅದನ್ನು ಸವಿದವರಿಗೆ ಮಾತ್ರ ಗೊತ್ತು: ಶಾಸಕ ಹರೀಶ್

KannadaprabhaNewsNetwork |  
Published : Mar 06, 2026, 02:15 AM IST
01HRR. 02ಹರಿಹರದ ಜನನಿ ಜನ್ಮದಾತ ಸಾಂಸ್ಕೃತಿಕ ಕಲಾ ಟ್ರಸ್ಟ್ ವತಿಯಿಂದ, ಪುನಿತ್ ರಾಜ್‌ಕುಮಾರ್ ಸ್ಮರಣಾರ್ಥ ನಡೆದ, ವಾಯ್ಸ್ ಆಫ್ ಪವರ್ ರಾಜ್ಯಮಟ್ಟದ ಕರೋಕೆ ಗಾಯನ ಸ್ಪರ್ಧೆ ಸಮಾರೋಪ ಸಮಾರಂಭದಲ್ಲಿ, ಪ್ರಥಮ, ದ್ವೀತಿಯ, ತೃತೀಯ ಬಹುಮಾನ ಪಡೆದ ಹಾಗೂ ಸಾಧಕರನ್ನು ಸನ್ಮಾನಿಸಲಾಯಿತು. | Kannada Prabha

ಸಾರಾಂಶ

ನಾಡಿನ ಕಲೆ ಸಾಹಿತ್ಯ ಸಂಸ್ಕೃತಿಯ ಪ್ರತೀಕವಾಗಿರುವ ಜನಪದ ಗೀತೆ, ಭಾವ ಗೀತೆ, ಭಕ್ತಿಗೀತೆ, ಚಲನ ಚಿತ್ರ ಗೀತೆಗಳನ್ನು ಶಾಸ್ತ್ರೋಕ್ತವಾಗಿ ಹಾಡುವುದನ್ನು, ಹಾಗೂ ಅದರ ಸದುಪಯೋಗವನ್ನು ಜನರಿಗೆ ತಿಳಿಸುವ, ಆಸಕ್ತರಿಗೆ ತರಬೇತಿ ನೀಡುವುದರಲ್ಲಿ ನಮ್ಮೂರಿನ ಜನನಿ ಜನ್ಮದಾತ ಸಾಂಸ್ಕೃತಿಕ ಕಲಾ ಟ್ರಸ್ಟ್ ತನ್ನದೆ ಆದ ಖ್ಯಾತಿಯನ್ನು ಪಡೆದಿರುವುದು ಸಂತಸದ ಸಂಗತಿಯಾಗಿದೆ ಎಂದರು.

ಕನ್ನಡಪ್ರಭ ವಾರ್ತೆ ಹರಿಹರ

ಸಂಗೀತ ಸೋಮಾರಿಯ ಸ್ವತ್ತಲ್ಲ. ಸಾಧಕರ ಸ್ವತ್ತು. ಅದರ ಸವಿರುಚಿ ಸವಿದವರಿಗೆ ಗೊತ್ತು ಎಂದು ಶಾಸಕ ಬಿ.ಪಿ ಹರೀಶ್ ನುಡಿದರು.

ನಗರದ ಜನನಿ ಜನ್ಮದಾತ ಸಾಂಸ್ಕೃತಿಕ ಕಲಾ ಟ್ರಸ್ಟ್ ವತಿಯಿಂದ, ಕರ್ನಾಟಕ ರತ್ನ ಪವರ್ ಸ್ಟಾರ್ ಪುನಿತ್ ರಾಜ್‌ಕುಮಾರ್ ಸ್ಮರಣಾರ್ಥ ಗುರು ಭವನದಲ್ಲಿ ಶನಿವಾರ ಸಂಜೆ ನಡೆದ, ವಾಯ್ಸ್ ಆಫ್ ಪವರ್ ರಾಜ್ಯಮಟ್ಟದ ಕರೋಕೆ ಗಾಯನ ಸ್ಪರ್ಧೆ ಸಮಾರೋಪ ಸಮಾರಂಭದಲ್ಲಿ, ವಿವಿಧ ಕ್ಷೇತ್ರಗಳಲ್ಲಿ ಸಾಧನೆ, ಸೇವೆ ಮಾಡಿದ ಸಾಧಕರನ್ನು ಸನ್ಮಾನಿಸಿ, ವಿಜೇತರಿಗೆ ಬಹುಮಾನ ವಿತರಿಸಿದ ಮಾತನಾಡಿದರು.

ನಾಡಿನ ಕಲೆ ಸಾಹಿತ್ಯ ಸಂಸ್ಕೃತಿಯ ಪ್ರತೀಕವಾಗಿರುವ ಜನಪದ ಗೀತೆ, ಭಾವ ಗೀತೆ, ಭಕ್ತಿಗೀತೆ, ಚಲನ ಚಿತ್ರ ಗೀತೆಗಳನ್ನು ಶಾಸ್ತ್ರೋಕ್ತವಾಗಿ ಹಾಡುವುದನ್ನು, ಹಾಗೂ ಅದರ ಸದುಪಯೋಗವನ್ನು ಜನರಿಗೆ ತಿಳಿಸುವ, ಆಸಕ್ತರಿಗೆ ತರಬೇತಿ ನೀಡುವುದರಲ್ಲಿ ನಮ್ಮೂರಿನ ಜನನಿ ಜನ್ಮದಾತ ಸಾಂಸ್ಕೃತಿಕ ಕಲಾ ಟ್ರಸ್ಟ್ ತನ್ನದೆ ಆದ ಖ್ಯಾತಿಯನ್ನು ಪಡೆದಿರುವುದು ಸಂತಸದ ಸಂಗತಿಯಾಗಿದೆ ಎಂದರು.

ಜನಪದ ಕಲೆಯನ್ನು ಶ್ರೀಮಂತಗೊಳಿಸಲು ಆಸಕ್ತರಿಗೆ ತರಬೇತಿ ಅವಶ್ಯ. ಜನರಿಂದ ಜನರ ಮೂಲಕ ಹಾಡುತ್ತಾ-ಹಾಡುತ್ತಾ ಬಂದಿರುವ ಕಲೆಯೇ ಜನಪದ ಕಲೆ ಎಂದರು.

ನಿವೃತ್ತ ಸೈನಿಕ ಪರಶುರಾಮ ಎಚ್,ಪತ್ರಕರ್ತ ಸಾಬ್ಜನ್ ಇಟಗಿ, ಹೋರಾಟಗಾರ ಹನುಮಂತಪ್ಪ ಐರಣಿ, ಹನಗವಾಡಿ ಗ್ರಾಮದ ನಾಟಿ ವೈದ್ಯ ಫಕ್ಕಿರಪ್ಪ ಮಡಿವಾಳರ, ಬಸವರಾಜ ಕೆ.ಜಿ,ಅಣ್ಣಪ್ಪ ಗುಡಿಮುಂದ್ಲರ ಅವರನ್ನು ಗೌರವಿಸಲಾಯಿತು.

ತೀರ್ಪುಗಾರರಾಗಿ ಆಗಮಿಸಿದ್ದ ಜೀ ಕನ್ನಡ ಸರಿಗಮಪ 11ನೇ ರನ್ನರ್ ಆಪ್ ಡಾ,ಶ್ರೀರಾಮ ಕಾಸರ, ತೋರಣಗಲ್ ಚಲನಚಿತ್ರ ಗಾಯಕಿ ಕಲಾವತಿ ವಿಶ್ವನಾಥ, ಹರಿಹರ ಸುಗಮ ಸಂಗೀತ ಗಾಯಕ ಶಾಂತಿನಾಥ ಭೊನಿ, ರಾಜ್ಯದ ನಾನಾ ಊರುಗಳಿಂದ ಆಗಮಿಸಿ, ಸ್ಪಧೇಯಲ್ಲಿ ಭಾಗವಹಿಸಿ ತಮ್ಮ ಹಾಡುಗಾರಿಕೆಯನ್ನು ಪ್ರದರ್ಶಿಸಿದ ಎಲ್ಲಾ ಸ್ಪಧಿಗಳನ್ನು ಪರೀಕ್ಷಿಸಿ ಅಂತಿಮವಾಗಿ, ಬಿಜಾಪುರ ಜಿಲ್ಲೆಯ ತಾಳಿಕೋಟೆಯ ನಿಂಗಣ್ಣ ಪಡಶೆಟ್ಟಿ ಪ್ರಥಮ, ಹಾವೇರಿ ಜಿಲ್ಲೆ ರಾಣಿಬೆನ್ನೂರಿನ ಕುಮಾರ ಬಿ.ಹೆಚ್ ದ್ವೀತಿಯ, ಹರಿಹರ ಕು. ಮಧುಮಿತ ಚಲವಾದಿ ತೃತೀಯ ಎಂದು ಫಲಿತಾಂಶ ಘೋಷಿಸಿದರು.

ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಎ.ಗೋವಿಂದರೆಡ್ಡಿ, ಸಂಘಟಿಕ ಜನನಿ ಜನ್ಮದಾತ ಸಾಂಸ್ಕೃತಿಕ ಟ್ರಸ್ಟ್ ಸಂಸ್ಥಾಪಕ ಅಧ್ಯಕ್ಷ ಅಣ್ಣಪ್ಪ ಅಜ್ಜೇರ, ನಗರಸಭೆ ಮಾಜಿ ಅಧ್ಯಕ್ಷ ರೇವಣಸಿದ್ದಪ್ಪ, ಮಾಜಿ ಪ್ರಧಾನರಾದ ಅಮರಾವತಿ ಪರಮೇಶ್ವರಪ್ಪ, ಜಿಲ್ಲಾ ಕಲಾವಿಧರ ಸಂಘದ ಅಧ್ಯಕ್ಷ ಪರಮೇಶ್, ಜಗಳೂರು ಶುಕ್ರದೇಸೆ ಪತ್ರಿಕೆ ಸಂಪಾದಕ ರಾಜಪ್ಪ, ಬಿಜೆಪಿ ನಗರ ಘಟಕದ ಅಧ್ಯಕ್ಷೆ ರೂಪಾ ಶಶಿಕಾಂತ, ಕಾಂಗ್ರೆಸ್ ಮುಖಂಡ ನಾಗರಾಜ, ಬಿಜೆಪಿ ಎಸ್ಟಿ ಮೋರ್ಛಾ ಅಧ್ಯಕ್ಷ ರವಿ ತ್ಯಾವರಿಗಿ, ಸಂತೋಷ ಗುಡಿಮನಿ, ಅಣ್ಣಪ್ಪ ಲೋಕಿಕೆರಿ, ಗಾಯಕ ಮಂಜುನಾಥ್ ದುಗ್ಗತ್ತಿ, ಹಾಲಿವಾಣದ ಪಕ್ಕೀರೇಶ ಯಾದವ, ಮಾಲಾ ಬಿ, ಅರ್ಚನಾ, ಕರಿಬಸವ, ವಿಕ್ರಮ್, ರಾಜು, ಶಿವು ಇದ್ದರು,

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಂಗೀತ ಜೀವನದ ಅವಿಭಾಜ್ಯ ಅಂಗ : ರಂಭಾಪುರಿ ಶ್ರೀ
ಹೆಣ್ಣು ಮಕ್ಕಳನ್ನು ಗೌರವದಿಂದ ಕಾಣಿ: ಡಾ.ನಾಗಲಕ್ಷ್ಮಿ ಚೌಧರಿ