ಕನ್ನಡಪ್ರಭ ವಾರ್ತೆ ಬೆಳಗಾವಿ
ಅಲತಗಾ ಗ್ರಾಮದಲ್ಲಿ 2.0 ಯೋಜನೆಯಡಿಯಲ್ಲಿ ಬೆಳಗಾವಿ ನಗರದ ಕಟ್ಟಡ ನಿರ್ಮಾಣದ ಅವಶೇಷಗಳನ್ನು ಹಾಕಲು ಅಲತಗಾ ಗ್ರಾಮದ ಸರ್ವೇ ನಂ.55 ರಲ್ಲಿ 5 ಎಕರೆ ಜಮೀನನ್ನು ಉಪಯೋಗಿಸಲು ಆದೇಶ ಮಾಡಲಾಗಿದೆ. ಆದರೆ, ನಿಯೋಜಿತ ಜಮೀನು ಗಾಯರಾಣವಾಗಿರುವುದರಿಂದ ಅಲತಗಾ, ಜಾಫರವಾಡಿ, ಕಡೋಲಿ, ಕಂಗ್ರಾಳಿ.ಕೆ.ಎಚ್. ಗ್ರಾಮದ ಸುಮಾರು 3 ಸಾವಿರ ಜಾನುವಾರುಗಳು ಮೆಯುವುದಕ್ಕೆ ಹೋಗುತ್ತವೆ. ವಾಯುವಿವಾಹರಕ್ಕೆ ಹೋಗುವವರಿಗೆ ಆದ್ದರಿಂದ ಕಟ್ಟಡ ನಿರ್ಮಾಣದ ಅವೇಶಷಗಳನ್ನು ಅಲ್ಲಿ ಹಾಕಿದರೆ ಸಮಸ್ಯೆಯಾಗಲಿದೆ. ವಾಯು ಮಾಲಿನ್ಯಯುಂಟಾಗಿ, ಜನ, ಜಾನುವಾರುಗಳಿಗೆ ಅನಾನುಕೂಲವಾಗಲಿದೆ. ಆದ್ದರಿಂದ ಈ ಪ್ರದೇಶದಲ್ಲಿ ಕಟ್ಟಡ ಅವಶೇಷಗಳನ್ನು ಹಾಕುವುದನ್ನು ಕೈಬಿಡಬೇಕು ಎಂದು ಆಗ್ರಹಿಸಿದ್ದಾರೆ.
ಈ ಸಂದರ್ಭದಲ್ಲಿ ಪರಶುರಾಮ ಚಿಸಲಕರ, ಸೋಮೇಶ ಪವಾರ, ರಾಜು ಕಾಂಬಳೆ ಸೇರಿದಂತೆ ಮೊದಲಾದವರು ಇದ್ದರು.