ಸಿಂಗಟಾಲೂರು ಏತ ನೀರಾವರಿ ಕಚೇರಿ ಜಪ್ತಿಗೆ ಆದೇಶ

KannadaprabhaNewsNetwork |  
Published : Feb 13, 2026, 02:30 AM IST
12ಎಂಡಿಜಿ3. ಮುಂಡರಗಿ ತಾಲೂಕಿನ ಸಿಂಗಟಾಲೂರು ಏತ ನೀರಾವರಿ ಯೋಜನೆಯ ಕಾಲುವೆ ಕಾಮಗಾರಿಗೆ ಜಮಿನು ಕಳೆದುಕೊಂಡ ರೈತರಿಗೆ ಪರಿಹಾರ ವಿಳಂಬದಿಂದ ಕರ್ನಾಟಕ ನೀರಾವರಿ ನಿಗಮ ನಿಯಮಿತದ ಸಿಂಗಟಾಲೂರು ಏತ ನೀರಾವರಿ ಕಚೇರಿಯನ್ನು ನ್ಯಾಯಾಲಯದ ಆದೇಶದ ಮೇರೆಗೆ ಜಪ್ತಿ ಮಾಡಲು ಬಂದಿದ್ದ ನ್ಯಾಯಾಲಯ ಸಿಬ್ಬಂದಿಗಳು, ರೈತರು ಜತೆಗೆ ನ್ಯಾಯವಾದಿಗಳು.  | Kannada Prabha

ಸಾರಾಂಶ

ರೈತರು 2023- 24ರಲ್ಲಿ ಸೂಕ್ತ ಪರಿಹಾರಕ್ಕಾಗಿ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿದ್ದರು. ಪ್ರಕರಣದಲ್ಲಿ ರೈತರಿಗೆ ಪ್ರತಿ ಎಕರೆಗೆ ₹6 ಲಕ್ಷ ಪರಿಹಾರ ನೀಡುವಂತೆ ಆದೇಶಿಸಲಾಗಿತ್ತು. ಈವರೆಗೆ ಶೇ. 15ರಷ್ಟು ಬಡ್ಡಿ ಹಣ ಹಾಕಿ ಒಟ್ಟು ಪ್ರತಿ ಎಕರೆಗೆ ₹45ರಿಂದ ₹50 ಲಕ್ಷದವರೆಗೆ ಪರಿಹಾರ ನೀಡಬೇಕು ಎಂದು ಆದೇಶಿಸಲಾಗಿತ್ತು. ಆದರೂ ಪರಿಹಾರ ಕೊಡದ ಹಿನ್ನೆಲೆ ನ್ಯಾಯಾಲಯವು ಕಳೆದ ಜ. 22ರಂದು ಕಚೇರಿ ಜಪ್ತಿ ಮಾಡಲು ಆದೇಶ ನೀಡಿತ್ತು.

ಮುಂಡರಗಿ: ತಾಲೂಕಿನ ಸಿಂಗಟಾಲೂರು ಏತ ನೀರಾವರಿ ಯೋಜನೆಗೆ ಜಮೀನು ನೀಡಿದ್ದರೂ ಪರಿಹಾರ ಕೊಡದಿದ್ದಕ್ಕೆ ಸಿಂಗಟಾಲೂರು ಏತ ನೀರಾವರಿ ಯೋಜನೆಯ ಕಚೇರಿಯನ್ನೇ ಜಪ್ತಿ ಮಾಡುವಂತೆ ಜಿಲ್ಲಾ ನ್ಯಾಯಾಲಯ ಆದೇಶಿಸಿದೆ.

ತಾಲೂಕಿನ ಸಿಂಗಟಾಲೂರು ಏತ ನೀರಾವರಿ ಯೋಜನೆ ಕಾಮಗಾರಿಗಾಗಿ ಜಮೀನು ಕಳೆದುಕೊಂಡ ಬರದೂರ, ಮೇವುಂಡಿ, ಎಕಲಾಸಪುರ, ಹೈತಾಪುರ ಗ್ರಾಮದ ಸುಮಾರು 35ಕ್ಕೂ ಹೆಚ್ಚು ರೈತರಿಗೆ(ಸುಮಾರು 150 ಎಕರೆ ಜಮೀನು) ನಿಗದಿತ ಅವಧಿಯಲ್ಲಿ ಪರಿಹಾರ ನೀಡಿರಲಿಲ್ಲ. ಈ ಹಿನ್ನೆಲೆ ರೈತರು ನ್ಯಾಯಾಲಯದಲ್ಲಿ ದಾವೆ ಹೂಡಿದ್ದರು. ವಿಚಾರಣೆ ನಡೆಸಿದ ಜಿಲ್ಲಾ ನ್ಯಾಯಾಲಯ ಕಚೇರಿ ಜಪ್ತಿ ಮಾಡಲು ಆದೇಶಿಸಿದೆ. ಗುರುವಾರ ನ್ಯಾಯಾಲಯದ ಸಿಬ್ಬಂದಿ, ನ್ಯಾಯವಾದಿಗಳು, ರೈತರೊಂದಿಗೆ ಕಚೇರಿ ಜಪ್ತಿಗೆ ಆಗಮಿಸಿದ್ದರು.

ರೈತರು 2023- 24ರಲ್ಲಿ ಸೂಕ್ತ ಪರಿಹಾರಕ್ಕಾಗಿ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿದ್ದರು. ಪ್ರಕರಣದಲ್ಲಿ ರೈತರಿಗೆ ಪ್ರತಿ ಎಕರೆಗೆ ₹6 ಲಕ್ಷ ಪರಿಹಾರ ನೀಡುವಂತೆ ಆದೇಶಿಸಲಾಗಿತ್ತು. ಈವರೆಗೆ ಶೇ. 15ರಷ್ಟು ಬಡ್ಡಿ ಹಣ ಹಾಕಿ ಒಟ್ಟು ಪ್ರತಿ ಎಕರೆಗೆ ₹45ರಿಂದ ₹50 ಲಕ್ಷದವರೆಗೆ ಪರಿಹಾರ ನೀಡಬೇಕು ಎಂದು ಆದೇಶಿಸಲಾಗಿತ್ತು. ಆದರೂ ಪರಿಹಾರ ಕೊಡದ ಹಿನ್ನೆಲೆ ನ್ಯಾಯಾಲಯವು ಕಳೆದ ಜ. 22ರಂದು ಕಚೇರಿ ಜಪ್ತಿ ಮಾಡಲು ಆದೇಶ ನೀಡಿತ್ತು.

ಆದೇಶದನ್ವಯ ಗುರುವಾರ ಕಚೇರಿ ಜಪ್ತಿಗೆ ನ್ಯಾಯಾಲಯದ ಸಿಬ್ಬಂದಿ, ನ್ಯಾಯವಾದಿಗಳು ಮತ್ತು ರೈತರೊಂದಿಗೆ ಆಗಮಿಸಿದ್ದರು. ಆಗ ಅಧಿಕಾರಿಗಳು ದೂರವಾಣಿ ಮೂಲಕ ನ್ಯಾಯಾಲಯ ಸಿಬ್ಬಂದಿ ಜತೆ ಮಾತನಾಡಿ, 15 ದಿನಗಳೊಳಗೆ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ. ಹೀಗಾಗಿ ಜಪ್ತಿ ಕಾರ್ಯ ಕೈಬಿಡಲಾಯಿತು. 15 ದಿನದೊಳಗೆ ಪರಿಹಾರ ನೀಡದಿದ್ದರೆ ಮತ್ತೆ ಜಪ್ತಿ ಕಾರ್ಯ ಮಾಡಲಾಗುವುದು ಎಂದು ನ್ಯಾಯವಾದಿಗಳು ಮತ್ತು ಮತ್ತು ರೈತರು ಎಚ್ಚರಿಸಿದರು.

ನ್ಯಾಯವಾದಿಗಳಾದ ಜೆ.ಎಸ್. ಇಟಗಿ, ಎಂ.ಬಿ. ನಾಡಗೌಡ್ರ, ಎಂ.ಎಸ್. ಸೂಡಿ ಹಾಗೂ ರೈತರಾದ ದೇವೇಂದ್ರಪ್ಪ ಪಾಟೀಲ ಮಾತನಾಡಿದರು. ರೈತರಾದ ಸಿದ್ದಪ್ಪ ಬರದೂರ, ಶಾರುಖ ದೋಟಿಹಾಳ, ರಮೇಶ ಲಕ್ಕುಂಡಿ, ವೀರಣ್ಣ ಸಜ್ಜನರ, ನ್ಯಾಯಾಲಯ ಸಿಬ್ಬಂದಿ ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ವಿದ್ಯುತ್ ಸುಧಾರಣೆ ಕಾಯ್ದೆ ವಿರೋಧಿಸಿ ನೌಕರರ ಪ್ರತಿಭಟನೆ
ತೋಟಗಾರಿಕೆಯಲ್ಲಿ ಕೊಪ್ಪಳ ಜಿಲ್ಲೆ ಅತ್ಯಮೂಲ್ಯ ಬದಲಾವಣೆ