ಕೂಡ್ಲಿಗಿ: ಕೃಷಿಕರ ಸಮಸ್ಯೆಗಳ ಪರಿಹಾರಕ್ಕಾಗಿ ಹೋರಾಡಲು ರೈತ ಸಂಘಟನೆಗಳ ಅಗತ್ಯವಾಗಿದ್ದು, ಸಂಘಟನೆಗಳು ಬಲಿಷ್ಠವಾದರೆ ರೈತರು ಸದೃಢರಾಗುತ್ತಾರೆ. ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಸಾಧ್ಯ ಎಂದು ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ರಾಜ್ಯಧ್ಯಕ್ಷ ಹುಚ್ಚವನಹಳ್ಳಿ ಮಂಜುನಾಥ್ ತಿಳಿಸಿದರು.ಅವರು ತಾೂಲಕಿನ ಕಾನಹೊಸಹಳ್ಳಿಯಲ್ಲಿ ನಡೆದ ರಾಜ್ಯ ರೈತಸಂಘ ಹಾಗೂ ಹಸಿರುಸೇನೆ (ಹುಚ್ಚವನಹಳ್ಳಿ ಮಂಜುನಾಥ್ ಬಣ) ಹೋಬಳಿ ಘಟಕಕ್ಕೆ ಚಾಲನೆ ನೀಡಿದ ನಂತರ ಮಾತನಾಡಿದರು.
ರಾಜ್ಯ ಪ್ರಧಾನ ಕಾರ್ಯದರ್ಶಿ ದೇವರಮನೆ ಮಹೇಶ್, ಜಿಲ್ಲಾ ಕಾರ್ಯಧ್ಯಕ್ಷ ಬಾಣದ ಕೃಷ್ಣ ಜಿಲ್ಲಾಧ್ಯಕ್ಷ ಬಣಕಾರ್ ಬಸವರಾಜ್ ಮಾತನಾಡಿದರು.
ಈ ಸಂದರ್ಭದಲ್ಲಿ ಗ್ರಾಪಂ ಅಧ್ಯಕ್ಷ ಕೆ.ಜಿ. ಸಿದ್ದನಗೌಡ, ತಾಲೂಕು ಅಧ್ಯಕ್ಷ ಬಾಣದ ಮಾರುತಿ, ಹೊಸಪೇಟೆ ತಾಲೂಕು ಅಧ್ಯಕ್ಷ ಬಿ.ಶೇಖಪ್ಪ, ಜಗಳೂರು ತಾಲೂಕು ಅಧ್ಯಕ್ಷ ಪಿ.ಚಿರಂಜೀವಿ, ರೈತ ಮುಖಂಡರಾದ ಕಾನಕಟ್ಟೆ ತಿಪ್ಪೇಸ್ವಾಮಿ, ಇಮ್ಮಡಾಪುರ ಸಂಗಣ್ಣ, ಚಿತ್ತವಾಡಗಿ ನಾಗೇಶ್, ದಾನೇಶ್, ಖಾದರ್, ಬಿ. ಕೃಷ್ಣ, ಪದಧಿಕಾರಿಗಳಾದ ಹುಲಿಕೆರೆ ಎಸ್.ಎಂ. ಸಿದ್ದಪ್ಪ, ಎಲ್.ಎಂ.ಓಬಳೇಶ್, ಜಿ.ಎಸ್.ಹರೀಶ್, ಮಹೇಂದ್ರ, ರಂಗನಾಥನಹಳ್ಳಿ ನಾಗರಾಜ್ ಇದ್ದರು.ಕಾನಹೊಸಹಳ್ಳಿಯಲ್ಲಿ ರಾಜ್ಯ ರೈತಸಂಘದ ಹೋಬಳಿ ಘಟಕಕ್ಕೆ ರಾಜ್ಯಧ್ಯಕ್ಷ ಹುಚ್ಚವನಹಳ್ಳಿ ಮಂಜುನಾಥ್ ಚಾಲನೆ ನೀಡಿದರು.