ಕನ್ನಡಪ್ರಭ ವಾರ್ತೆ ನಾಗಮಂಗಲ
ಪಟ್ಟಣದ ಮಿನಿ ವಿಧಾನಸೌಧದ ಮುಂಭಾಗದಲ್ಲಿ ತಾಲೂಕು ಮಾಜಿ ಸೈನಿಕರ ಸಂಘದ ವತಿಯಿಂದ ಆಯೋಜಿಸಿದ್ದ ಆಪರೇಷನ್ ಸಿಂದೂರ್ನಲ್ಲಿ ಹುತಾತ್ಮರಾದ ವೀರ ಯೋಧರ ಭಾವಚಿತ್ರಗಳಿಗೆ ಪುಷ್ಪಾರ್ಚನೆ ಮಾಡಿ ಮಾತನಾಡಿದರು.
ಆಪರೇಷನ್ ಸಿಂದೂರ್ ಎನ್ನುವ ಹೆಸರೇ ಮೈ ರೋಮಾಂಚನವಾಗುತ್ತದೆ. ನಮ್ಮ ದೇಶ ಎಷ್ಟು ಸದೃಢವಾಗಿದೆ ಎಂದರೆ ಕೇವಲ ಮೂರೇ ದಿನದಲ್ಲಿ ಪಾಕಿಸ್ತಾನ ನಮ್ಮ ಮುಂದೆ ಮಂಡಿಯೂರುವಂತೆ ಮಾಡಿದೆ. ನಮ್ಮ ಶಕ್ತಿಯನ್ನು ಜಗತ್ತಿಗೆ ಸಾರಿದ ದಿನ ಇದಾಗಿದೆ ಎಂದರು.ದೇಶದ ವಾಯುಸೇನೆ, ಭೂಸೇನೆ ಹಾಗೂ ನೌಕಾ ಸೇನೆಯ ಅಗಾಧವಾದ ಶಕ್ತಿಯು ದೇಶವನ್ನು ಸೂಪರ್ ಪವರ್ ಎಂದು ಜಗತ್ತು ಒಪ್ಪಿಕೊಳ್ಳುವಂತೆ ಮಾಡಿದೆ. ನಮ್ಮ ಯೋಧರ ತ್ಯಾಗ, ಬಲಿದಾನವನ್ನು ಗೌರವಿಸುವ ಮೂಲಕ ನಾವೆಲ್ಲರೂ ಯೋಧರ ಜೊತೆಗೆ ನಿಲ್ಲಬೇಕಿದೆ ಎಂದು ಹೇಳಿದರು.
ದೇಶಕ್ಕಾಗಿ ತನ್ನ ಪ್ರಾಣವನ್ನೇ ತ್ಯಾಗ ಮಾಡುವ ಸೈನಿಕ ಎಲ್ಲವನ್ನೂ ತೊರೆಯುತ್ತಾನೆ. ಕುಟುಂಬ ಸಂಬಂಧ ಎಲ್ಲವನ್ನೂ ಮರೆತು ವೀರಮರಣ ಹೊಂದುತ್ತಾನೆ. ಆದ್ದರಿಂದ ಅಂತಹ ಯೋಧರಿಗೆ ನಾವು ಕೃತಜ್ಞರಾಗಿ ಗೌರವ ನಮನ ಸಲ್ಲಿಸಲಾಗುತ್ತಿದೆ ಎಂದು ತಿಳಿಸಿದರು.
ಇದಕ್ಕೂ ಮುನ್ನ ಹುತಾತ್ಮರಾದ ಎಂಟು ಮಂದಿ ಯೋಧರ ಭಾವಚಿತ್ರಗಳಿಗೆ ಪುಷ್ಪಾರ್ಚನೆ ಸಲ್ಲಿಸಿ ಜ್ಯೋತಿ ಬೆಳೆಗಿಸಿ ಭಾರತಾಂಬೆ ಮತ್ತು ಸೈನಿಕರಿಗೆ ಜೈಕಾರ ಹಾಕಿದ ನಂತರ ಮೌನಾಚರಣೆ ಮೂಲಕ ಶ್ರದ್ಧಾಂಜಲಿ ಸಲ್ಲಿಸಲಾಯಿತು.ಈ ವೇಳೆ ಮಾಜಿ ಸೈನಿಕರ ಸಂಘದ ಪದಾಧಿಕಾರಿಗಳಾದ ಬಿ.ನಾರಾಯಣ, ಟಿ.ಸಿ.ಕುಮಾರ್, ನಾಗರಾಜ್, ಮೋಹನ್ ಕುಮಾರ್, ಎಂ.ಡಿ.ಮೂಡಲಗಿರಿ, ಉದಯ್ ಕುಮಾರ್, ರಾಮಚಂದ್ರ ಸೇರಿ ನೂರಾರು ಮಂದಿ ಸಾರ್ವಜನಿಕರು ಇದ್ದರು.