)
ಕನ್ನಡಪ್ರಭ ವಾರ್ತೆ ಬೆಂಗಳೂರು
ಕಮಲಾನಗರದ ನಿವಾಸಿ ಕುಮಾರ್ (43) ಮೃತ ದುರ್ದೈವಿ. ಈ ಹತ್ಯೆ ಕೃತ್ಯ ಎಸಗಿದ ಬಳಿಕ ತಪ್ಪಿಸಿಕೊಂಡಿರುವ ಅಪರಿಚಿತನ ಪತ್ತೆಗೆ ಪೊಲೀಸರು ಹುಡುಕಾಟ ನಡೆಸಿದ್ದಾರೆ. ಲಗ್ಗೆರೆ ಸಮೀಪ ಬುಧವಾರ ರಾತ್ರಿ ಮದ್ಯ ಸೇವಿಸಿ ಕುಮಾರ್ ಮನೆಗೆ ಮರಳುವಾಗ ಮಾರ್ಗ ಮಧ್ಯೆ ಘಟನೆ ನಡೆದಿದೆ.
ತನ್ನ ಕುಟುಂಬದ ಜತೆ ಕುಣಿಗಲ್ ತಾಲೂಕಿನಲ್ಲಿ ಕುಮಾರ್ ನೆಲೆಸಿದ್ದರು. ಅಡುಗೆ ಕೆಲಸ ಮಾಡಿಕೊಂಡು ಅವರು ಜೀವನ ಸಾಗಿಸುತ್ತಿದ್ದರು. ಕೆಲಸದ ನಿಮಿತ್ತ ನಗರದಿಂದ ಹೊರಗೆ ಹೋಗಿದ್ದ ಆತ, ರಾತ್ರಿ ಮರಳಿದ ಬಳಿಕ ಸೋದರ ಸಂಬಂಧಿಗಳ ಜತೆ ಮದ್ಯ ಸೇವಿಸಿ ತೆರಳಿದ್ದರು.ಮಹಾಲಕ್ಷ್ಮೀ ಲೇಔಟ್ ಬಳಿ ಮದ್ಯ ಸೇವಿಸಿದ ಬಳಿಕ ಲಗ್ಗೆರೆಗೆ ಮಾಂಸದೂಟಕ್ಕೆ ಅವರು ಹೋಗಿದ್ದರು. ಆಗ ತನ್ನ ಸಂಬಂಧಿಯನ್ನು ಮನೆಗೆ ಬಿಡಲು ಬೈಕ್ನಲ್ಲಿ ಕುಮಾರ್ ಚಿಕ್ಕಪ್ಪ ನರಸಿಂಹಮೂರ್ತಿ ಬರುವವರಿದ್ದರು. ಹಾಗಾಗಿ ಲಗ್ಗೆರೆ ಸೇತುವೆಯಿಂದ ರಸ್ತೆಯಲ್ಲಿ ನಡೆದುಕೊಂಡು ಕುಮಾರ್ ಹೋಗುತ್ತಿದ್ದ. ಆಗ ಆತನನ್ನು ಅಡ್ಡಗಟ್ಟಿದ ಅಪರಿಚಿತ ವ್ಯಕ್ತಿ, ಯಾಕೋ ರಸ್ತೆಯಲ್ಲಿ ಮೂತ್ರ ವಿಸರ್ಜನೆ ಮಾಡುತ್ತೀಯಾ ಎಂದು ಗಲಾಟೆ ಮಾಡಿದ್ದಾನೆ. ಈ ವೇಳೆ ಮಾತಿಗೆ ಮಾತು ಬೆಳೆದು ಇಬ್ಬರು ಕೈ-ಕೈ ಮಿಲಾಯಿಸಿದ್ದಾರೆ.