ಪ್ರತಿವಾದಿಗಳು ಸಾಬೀತಿಗೆ ಉತ್ತರಿಸದೇ ಪಲಾಯನ ಮಾಡಿರುವುದು ನಾಚಿಕೆಗೇಡಿನ ಸಂಗತಿ ಎಂದು ಸೀಗೇಹಳ್ಳಿ ಪಿಎಸಿಎಸ್ ನ ಮಾಜಿ ನಿರ್ದೇಶಕ ಹರಳಕೆರೆ ಪುಟ್ಟೇಗೌಡ ಕಿಡಿ
ತುರುವೇಕೆರೆ: ತಾಲೂಕಿನ ಸೀಗೇಹಳ್ಳಿಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಆಗಿದೆ ಎನ್ನಲಾದ ಅವ್ಯವಹಾರಗಳ ಕುರಿತು ತಾವು ದಾಖಲೆ ಸಹಿತ ಸಾಬೀತು ಪಡಿಸಲು ಸಿದ್ಧವಿರುವಾಗ ಪ್ರತಿವಾದಿಗಳು ಸಾಬೀತಿಗೆ ಉತ್ತರಿಸದೇ ಪಲಾಯನ ಮಾಡಿರುವುದು ನಾಚಿಕೆಗೇಡಿನ ಸಂಗತಿ ಎಂದು ಸೀಗೇಹಳ್ಳಿ ಪಿಎಸಿಎಸ್ ನ ಮಾಜಿ ನಿರ್ದೇಶಕ ಹರಳಕೆರೆ ಪುಟ್ಟೇಗೌಡ ಕಿಡಿಕಾರಿದ್ದಾರೆ.
ಶೆಟ್ಟಿಗೊಂಡನಹಳ್ಳಿಯಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು ಸೀಗೇಹಳ್ಳಿಯ ಸೊಸೈಟಿಯಲ್ಲಿ ಆಗಿರುವ ಬ್ರಹ್ಮಾಂಡ ಭ್ರಷ್ಠಾಚಾರವನ್ನು ಸಾಕ್ಷಿ ಸಹಿತ ಸಾಬೀತುಪಡಿಸಲು ಸೋಮವಾರ ಸಿದ್ಧವಿರುವುದಾಗಿ ತಾವು ಬಹಿರಂಗ ಹೇಳಿಕೆ ನೀಡಿದ್ದೆವು. ಈ ಸವಾಲನ್ನು ಸ್ವೀಕರಿಸಬೇಕಿತ್ತು. ಅಲ್ಲದೇ ಈ ಸೊಸೈಟಿಯಲ್ಲಿ ಯಾವುದೇ ಅವ್ಯವಹಾರ ಆಗಿಲ್ಲ ಎಂಬುದನ್ನು ಪ್ರತಿವಾದಿಗಳೂ ಸಹ ಸಾಬೀತುಪಡಿಸಬೇಕಿತ್ತು. ಆದರೆ ಈ ಬಹಿರಂಗ ಸವಾಲನ್ನು ಸ್ವೀಕರಿಸದೇ ಸೊಸೈಟಿ ಮುಂಭಾಗ ಯಾವುದೇ ವೇದಿಕೆ ಸೃಷ್ಠಿ ಮಾಡಬಾರದೆಂದು ಪೋಲಿಸ್ ಮೂಲಕ ಹೇಳಿಸಿ ಪಲಾಯನ ಮಾಡಿದ್ದಾರೆಂದು ಆಪಾದಿಸಿದರು. ಈ ಸಂದರ್ಭದಲ್ಲಿ ಸಂಘದ ಹಿರಿಯ ಸದಸ್ಯ ಎಂ.ಬಿ. ಬೆಟ್ಟಸ್ವಾಮಿಗೌಡ , ಸದಸ್ಯರಾದ ಅಭಿಕುಮಾರ್, ಸಿ.ವಿ.ತಮ್ಮಯ್ಯ(ಗುಂಡಣ್ಣ), ತಿಮ್ಮೇಗೌಡ, ಸುರೇಶ್, ಮಗ್ಗನಪಾಳ್ಯದ ಎಂ.ಆರ್.ಕೃಷ್ಣ, ವೀರಭದ್ರಯ್ಯ, ಸಿದ್ದನಹಟ್ಟಿಯ ಶಿವರಾಜು, ಹಾಲೇಗೌಡ, ಗುಡ್ಡೇನಹಳ್ಳಿಯ ಗೋವಿಂದಯ್ಯ, ಮಲ್ಲೂರು ರಾಜಣ್ಣ, ಸೀಗೇಹಳ್ಳಿಯ ಕೃಷ್ಣಣ್ಣ ಉಪಸ್ಥಿತರಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.