ಪಡೆಕನೂರ ಜಾತ್ರೆ: ಉಚಿತ ಸಾಮೂಹಿಕ ವಿವಾಹ

KannadaprabhaNewsNetwork |  
Published : Feb 07, 2024, 01:48 AM ISTUpdated : Feb 07, 2024, 02:12 PM IST
Talokote Swami

ಸಾರಾಂಶ

ತಾಳಿಕೋಟೆ ತಾಲೂಕಿನ ಪಡೆಕನೂರ ಗ್ರಾಮದ ಶ್ರೀ ದಾಸೋಹ ವಿರಕ್ತಮಠದ ಜಾತ್ರಾ ಮಹೋತ್ಸವ ಅಂಗವಾಗಿ ಪ್ರತಿ ವರ್ಷದಂತೆ ಈ ಸಲವು ಉಚಿತ ಸಾಮೂಹಿಕ ವಿವಾಹವನ್ನು ಆಯೋಜಿಸಲಾಗಿದೆ ಎಂದು ಶ್ರೀಮಠದ ಪೀಠಾಧಿಪತಿ ಮಲ್ಲಿಕಾರ್ಜುನ ಮಹಾಸ್ವಾಮಿಗಳು ತಿಳಿಸಿದ್ದಾರೆ.

ತಾಳಿಕೋಟೆ: ತಾಲೂಕಿನ ಪಡೆಕನೂರ ಗ್ರಾಮದ ಶ್ರೀ ದಾಸೋಹ ವಿರಕ್ತಮಠದ ಜಾತ್ರಾ ಮಹೋತ್ಸವ ಅಂಗವಾಗಿ ಪ್ರತಿ ವರ್ಷದಂತೆ ಈ ಸಲವು ಉಚಿತ ಸಾಮೂಹಿಕ ವಿವಾಹವನ್ನು ಆಯೋಜಿಸಲಾಗಿದೆ ಎಂದು ಶ್ರೀಮಠದ ಪೀಠಾಧಿಪತಿ ಮಲ್ಲಿಕಾರ್ಜುನ ಮಹಾಸ್ವಾಮಿಗಳು ತಿಳಿಸಿದ್ದಾರೆ. 

ಮಾ.೯ರಂದು ಕರ್ತುಗದ್ದುಗೆಗೆ ಮಹಾಗಣಯಜ್ಞ ಹೋಮ ಕಾರ್ಯಕ್ರಮದ ನಂತರ ಮಾನವ ಏಕತಾ ಧರ್ಮಸಭೆ ಮತ್ತು ಉಚಿತ ಸಾಮೂಹಿಕ ವಿವಾಹವು ಜರುಗಲಿದೆ. ಈ ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ನಾಡಿನ ಅನೇಕ ಮಹಾ ಸಂತರು ಭಾಗವಹಿಸಿ ನೂತನ ವಧುವರರಿಗೆ ಆಶಿರ್ವದಿಸಲಿದ್ದಾರೆ.

ಸಾಮೂಹಿಕ ವಿವಾಹದಲ್ಲಿ ಭಾಗವಹಿಸುವ ನೂತನ ವಧು-ವರರಿಗೆ ತಾಳಿ, ಬಟ್ಟೆ, ಕಾಲುಂಗರವನ್ನು ಢವಳಗಿಯ ಗಣ್ಯ ಉದ್ದಿಮೆದಾರರಾದ ಸಿದ್ದನಗೌಡ ಬಿರಾದಾರ ನೀಡಲು ಮುಂದಾಗಿದ್ದಾರೆ. 

ಕಾರಣ ಈ ಉಚಿತ ಸಾಮೂಹಿಕ ವಿವಾಹದಲ್ಲಿ ಭಾಗವಹಿಸುವ ನೂತನ ವಧು-ವರರಿಗೆ ವಧುವಿಗೆ ೧೮ ವರ್ಷ, ವರನಿಗೆ ೨೧ ವರ್ಷ ತುಂಬಿರಬೇಕು ಇದಕ್ಕೆ ಸಂಬಂಧಿಸಿ ಶಾಲಾ ದಾಖಲಾತಿ ಎಲ್‌ಸಿ ಅಥವಾ ಆಧಾರ್‌ ಕಾರ್ಡ್‌, ಮತದಾರರ ಗುರುತಿನ ಚೀಟಿ, ಇತರೆ ದಾಖಲಾತಿಯೊಂದಿಗೆ ಮಾ.೫ ರೊಳಗಾಗಿ ಹೆಸರನ್ನು ನೋಂದಾಯಿಸಬೇಕು. 

ಮಾಹಿತಿಗೆ ಮೊ.೯೯೦೧೪೭೭೪೦೦, ೭೭೬೦೮೭೦೯೩೭ಗೆ ಸಂಪರ್ಕಿಸಬಹುದಾಗಿದೆ. ಈ ಜಾತ್ರಾ ಉತ್ಸವದ ಅಂಗವಾಗಿ ಜಂಗಮ ವಟುಗಳಿಗೆ ಅಯ್ಯಾಚಾರ ಹಾಗೂ ಭಕ್ತರಿಗೆ ಲಿಂಗ ದೀಕ್ಷಾ ಕಾರ್ಯಕ್ರಮವನ್ನು ಮಾ.೮ ರಂದು ಆಯೋಜಿಸಲಾಗಿದೆ. ಜಂಗಮ ವಟುಗಳು ಅಯ್ಯಾಚಾರ ಮತ್ತು ಲಿಂಗ ದೀಕ್ಷೆ ಕಾರ್ಯಕ್ರಮದಲ್ಲಿ ಭಾಗವಹಿಸುವವರು ಕೂಡಾ ಅಂದಿನ ಕಾರ್ಯಕ್ರಮದಲ್ಲಿ ಭಾಗವಹಿಸಬಹುದಾಗಿದೆ ಎಂದು ತಿಳಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!