ಪಂಚಮಸಾಲಿ ಸಮಾಜ ಸಂಘಟಿತರಾಗಬೇಕು-ಶೋಭಾ ಹೊಟ್ಟಿನ

KannadaprabhaNewsNetwork |  
Published : Mar 03, 2025, 01:47 AM IST
1ಜಿಡಿಜಿ14 | Kannada Prabha

ಸಾರಾಂಶ

ಸಮಾಜ ನಮಗೇನು ಕೊಟ್ಟಿದೆ ಎನ್ನುವದಕ್ಕಿಂತಲೂ ಸಮಾಜಕ್ಕೆ ನಾವೇನು ಕೊಟ್ಟಿದ್ದೇವೆ ಅನ್ನುವುದು ಮುಖ್ಯವಾಗುತ್ತದೆ. ಸಮಾಜ ಸಂಘಟಿತರಾದಷ್ಟು ಬಲ ಹೆಚ್ಚುತ್ತದೆ. ಆದ್ದರಿಂದ ಪಂಚಮಸಾಲಿ ಸಮಾಜ ಬಾಂಧವರು ಹೆಚ್ಚು-ಹೆಚ್ಚು ಸಂಘಟಿತರಾಗಿ ನಮಗೆ ಸಿಗುವ ಸೌಲಭ್ಯಗಳನ್ನು ಪಡೆಯುವುದರೊಂದಿಗೆ ಸಮಾಜ ಕೆಲಸ ಕಾರ್ಯಗಳನ್ನು ತ್ವರಿತಗತಿಯಲ್ಲಿ ಮಾಡೋಣ ಎಂದು ಪಂಚಮಸಾಲಿ ಮಹಿಳಾ ಶಹರ ಘಟಕದ ಅಧ್ಯಕ್ಷೆ ಶೋಭಾ ಹೊಟ್ಟಿನ ಹೇಳಿದರು.

ಮುಂಡರಗಿ: ಸಮಾಜ ನಮಗೇನು ಕೊಟ್ಟಿದೆ ಎನ್ನುವದಕ್ಕಿಂತಲೂ ಸಮಾಜಕ್ಕೆ ನಾವೇನು ಕೊಟ್ಟಿದ್ದೇವೆ ಅನ್ನುವುದು ಮುಖ್ಯವಾಗುತ್ತದೆ. ಸಮಾಜ ಸಂಘಟಿತರಾದಷ್ಟು ಬಲ ಹೆಚ್ಚುತ್ತದೆ. ಆದ್ದರಿಂದ ಪಂಚಮಸಾಲಿ ಸಮಾಜ ಬಾಂಧವರು ಹೆಚ್ಚು-ಹೆಚ್ಚು ಸಂಘಟಿತರಾಗಿ ನಮಗೆ ಸಿಗುವ ಸೌಲಭ್ಯಗಳನ್ನು ಪಡೆಯುವುದರೊಂದಿಗೆ ಸಮಾಜ ಕೆಲಸ ಕಾರ್ಯಗಳನ್ನು ತ್ವರಿತಗತಿಯಲ್ಲಿ ಮಾಡೋಣ ಎಂದು ಪಂಚಮಸಾಲಿ ಮಹಿಳಾ ಶಹರ ಘಟಕದ ಅಧ್ಯಕ್ಷೆ ಶೋಭಾ ಹೊಟ್ಟಿನ ಹೇಳಿದರು.ಅವರು ಶಕುಂತಲಾ ಗುಡದಪ್ಪನವರ ಮನೆಯಲ್ಲಿ ಪಂಚಮಸಾಲಿ ಮಹಿಳಾ ಶಹರ ಘಟಕದ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಮನೆ-ಮನದಲ್ಲಿ ಚೆನ್ನಮ್ಮ ಮತ್ತು ಚೆನ್ನಮ್ಮಾಜಿಯವರ 196ನೇ ಪುಣ್ಯಸ್ಮರಣೆ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು.

ಮನೆ-ಮನೆಗಳಲ್ಲಿ ಮತ್ತು ಮನಮನಗಳಲ್ಲಿ ಚೆನ್ನಮ್ಮಾಜಿಯವರ ಸ್ಮರಣೆ ನಡೆಯಬೇಕು ಮತ್ತು ಅವರ ಆದರ್ಶಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವ ಕೆಲಸ ನಡೆಯಬೇಕು ಎಂದರು. ಕಾರ್ಯಕ್ರಮ ಉದ್ಘಾಟಿಸಿದ ಸಲಹಾ ಸಮಿತಿಯ ಹಿರಿಯ ಸದಸ್ಯ ವೀರನಗೌಡ ಗುಡದಪ್ಪನವರ ಮಾತನಾಡಿ, ಮನೆ-ಮನಗಳಲ್ಲಿ ಚೆನ್ನಮ್ಮಾಜಿ ಕಾರ್ಯಕ್ರಮದಲ್ಲಿ ಕೃಷಿ, ಪರಿಸರ, ಉದ್ಯೋಗ ಮುಂತಾದ ಮಾಹಿತಿ ಮತ್ತು ಜಾಗೃತಿವುಳ್ಳ ಕಾರ್ಯಕ್ರಮಗಳನ್ನು ಮುಂದಿನ ದಿನಗಳಲ್ಲಿ ಹಾಕಿಕೊಳ್ಳಬೇಕು. ಪಂಚಮಸಾಲಿ ಸಮಾಜದ ವತಿಯಿಂದ ನಿರ್ಮಾಣವಾಗುತ್ತಿರುವ ಸಮುದಾಯ ಭವನಕ್ಕೆ ಎಲ್ಲರೂ ತನು-ಮನ-ಧನದಿಂದ ಸಹಾಯಮಾಡಬೇಕು ಎಂದರು.

ಸಮಾಜದ ತಾಲೂಕು ಅಧ್ಯಕ್ಷ ಎಸ್.ವಿ.ಪಾಟೀಲ ಮಾತನಾಡಿ, ಸಮಾಜದ ಸಮುದಾಯ ಭವನ ನಿರ್ಮಾಣಕ್ಕೆ ಸಹಾಯ ನೀಡಿದ ಎಲ್ಲ ಮಹನೀಯರಿಗೆ ಕೃತಜ್ಞತೆಯನ್ನು ಸಲ್ಲಿಸಿ ಸಂಸದ ಬಸವರಾಜ ಬೊಮ್ಮಾಯಿ ಮತ್ತು ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮದಿಂದ ಅನುದಾನವನ್ನು ನೀಡುವಂತೆ ಮನವಿ ಸಲ್ಲಿಸಲಾಗಿದೆ ಎಂದರು. ಪುರಸಭೆಯ ಉಪಾಧ್ಯಕ್ಷ ನಾಗೇಶ ಹುಬ್ಬಳ್ಳಿ ಮತ್ತು ಸದಸ್ಯ ನಾಗರಾಜ ಹೊಂಬಳಗಟ್ಟಿ ಸಮಾಜದ ಸಂಘಟನೆ ಕುರಿತು ಮಾತನಾಡಿದರು. ದೀಪುಶ್ರೀ ಕಣವಿ ಚೆನ್ನಮ್ಮಾಜಿ ಅವರ ಕುರಿತು ಉಪನ್ಯಾಸ ನೀಡಿದರು. ಆರ್.ವೈ.ಪಾಟೀಲ, ರಾಜೇಶ ಅರಕಲ್, ಎನ್.ಎಂ. ಕುಕನೂರ, ಪ್ರಮೋದ ಇನಾಮತಿ, ಎ.ವೈ.ನವಲಗುಂದ, ಎಂ.ಎಸ್. ಹೊಟ್ಟಿನ, ಎಸ್.ಎಸ್. ಇನಾಮತಿ, ಡಾ. ಎ.ಎಂ. ಮೇಟಿ, ಡಾ.ವಿ.ಕೆ. ಸಂಕನಗೌಡ್ರ, ಅಶೋಕ ಹಂದ್ರಾಳ, ಸೋಮಣ್ಣ ದೇಸಾಯಿ, ಎನ್.ಎಫ್. ಅಕ್ಕೂರ, ಶಕುಂತಲಾ ಗುಡದಪ್ಪನವರ, ಮಂಜುನಾಥ ಮುಧೋಳ, ನಾಗರಾಜ ಉಳ್ಳಾಗಡ್ಡಿ, ರಜನಿಕಾಂತ ದೇಸಾಯಿ, ಪ್ರಶಾಂತ ಗುಡದಪ್ಪನವರ, ಪ್ರದೀಪ ಗುಡದಪ್ಪನವರ ಮುಂತಾದವರಿದ್ದರು. ಆರ್.ಎಲ್. ಪೊಲೀಸಪಾಟೀಲ ಪ್ರಾಸ್ತಾವಿಕವಾಗಿ ಮಾತನಾಡಿದರು. ಲೀಲಾ ಅಕ್ಕೂರ ಪ್ರಾರ್ಥಿಸಿದರು. ಶ್ರೀದೇವಿ ಗುಡದಪ್ಪನವರ ಸ್ವಾಗತಿದರು. ನೇತ್ರಾ ಭಾವಿಹಳ್ಳಿ ನಿರೂಪಿಸಿದರು. ಶ್ರೀದೇವಿ ಗೋಡಿ ವಂದಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪತ್ರಕರ್ತ ತಗಡೂರಿಗೆ ಲೋಹಿಯಾ ಪ್ರಶಸ್ತಿ ಪ್ರದಾನ
ಕನ್ನಡದಲ್ಲಿ ರೈಲ್ವೆ ಪರೀಕ್ಷೆಗೆ ಇಲಾಖೆ : ಕರವೇ