ಪಾಲಕರು ಮಕ್ಕಳಲ್ಲಿ ಸಕಾರಾತ್ಮಕ ಭಾವನೆ ಬಿತ್ತಲಿ: ಶ್ರೀಪಾದ ಕುಲಕರ್ಣಿ

KannadaprabhaNewsNetwork |  
Published : Jan 09, 2025, 12:46 AM IST
ಚಿಕ್ಕೋಡಿ ಸಿಟಿಇ ಶಿಕ್ಷಣ ಸಂಸ್ಥೆಯಲ್ಲಿ ಆಯೋಜಿಸಿದ ಡಿ.ಕೆ.ಶಹಾ ಪ್ರಾಥಮಿಕ ಶಾಲೆಯ ವಾರ್ಷಿಕೋತ್ಸವ ಇಂಚರ ಸಮಾರಂಭವನ್ನು ನಿರ್ದೇಶಕ, ವಕೀಲ ವಿ.ಪಿ. ಶೇಡಬಾಳ ಉದ್ಘಾಟಿಸಿದರು. ವಿಜಯ ಮಾಂಜರೇಕರ,ಓಂಕಾರ ಕುಲಕರ್ಣಿ,ವ.ಸಿ.ಕುಲಕರ್ಣಿ,ಸಂಕೇತ ಮಾಂಜರೇಕರ ಇದ್ದರು. | Kannada Prabha

ಸಾರಾಂಶ

ಪಾಲಕರು ಮಕ್ಕಳಲ್ಲಿ ಸಕಾರಾತ್ಮಕ ಭಾವನೆಗಳನ್ನು ಬಿತ್ತಬೇಕೆಂದು ಸಿಟಿಇ ಶಿಕ್ಷಣ ಸಂಸ್ಥೆಯ ಯುವ ನಿರ್ದೇಶಕ ಶ್ರೀಪಾದ (ಓಂಕಾರ) ಕುಲಕರ್ಣಿ ಹೇಳಿದರು.

ಕನ್ನಡಪ್ರಭ ವಾರ್ತೆ ಚಿಕ್ಕೋಡಿ

ಪಾಲಕರು ಮಕ್ಕಳಲ್ಲಿ ಸಕಾರಾತ್ಮಕ ಭಾವನೆಗಳನ್ನು ಬಿತ್ತಬೇಕೆಂದು ಸಿಟಿಇ ಶಿಕ್ಷಣ ಸಂಸ್ಥೆಯ ಯುವ ನಿರ್ದೇಶಕ ಶ್ರೀಪಾದ (ಓಂಕಾರ) ಕುಲಕರ್ಣಿ ಹೇಳಿದರು.

ಪಟ್ಟಣದ ಚಿಕ್ಕೋಡಿ ತಾಲೂಕು ಶಿಕ್ಷಣ ಸಂಸ್ಥೆಯ ಶ್ರೀಮತಿ ಧರಮಿಬಾಯಿ ಖೇಮಚಂದ ಶಹಾ ಪ್ರಾಥಮಿಕ ಶಾಲೆಯಲ್ಲಿ ವಾರ್ಷಿಕೋತ್ಸವ ’ಇಂಚರ’ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿ, ಶಿಕ್ಷಕರು ಶಿಕ್ಷಣದ ಜೊತೆಗೆ ಮಕ್ಕಳು ಪಠ್ಯೇತರ ಚಟುವಟಿಕೆಯಲ್ಲಿ ತೊಡಗುವಂತೆ ಪ್ರೋತ್ಸಾಹಿಸುವ ಮೂಲಕ ಅವರನ್ನು ಸದೃಢರನ್ನಾಗಿ ಮಾಡಲು ಪ್ರಯತ್ನಿಸಬೇಕೆಂದರು.

ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ನಿರ್ದೇಶಕ ವಿ.ಪಿ. ಶೇಡಬಾಳ ಮಾತನಾಡಿ, ಮಕ್ಕಳು ಪಠ್ಯದ ಜೊತೆಗೆ ಪತ್ಯೇತರ ಚಟುವಟಿಕೆಗಳಲ್ಲಿಯೂ ಹೆಚ್ಚಿನ ಆಸಕ್ತಿ ತೋರಬೇಕು ಎಂದು ಹೇಳಿದರು.

ಮುಖ್ಯಶಿಕ್ಷಕ ಆರ್.ಪಿ. ದೊಡಮನಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಂಸ್ಥೆಯ ಉಪಾಧ್ಯಕ್ಷ ವಿ.ಎಸ್. ಮಾಂಜರೇಕರ, ಸಂಸ್ಥೆಯ ನಿರ್ದೇಶಕರಾದ ವಿ.ಸಿ. ಕುಲಕರ್ಣಿ, ಎಸ್.ಬಿ. ಕುಲಕರ್ಣಿ, ಸಂಸ್ಥೆಯ ಸಹ ಕಾರ್ಯದರ್ಶಿ ಎಂ.ಎಸ್. ದೇಶಪಾಂಡೆ, ಸಿಟಿಇ ಸಂಸ್ಥೆಯ ಎಲ್ಲ ಅಂಗಸಂಸ್ಥೆಗಳ ಮುಖ್ಯಸ್ಥರು, ಪಾಲಕರು ಉಪಸ್ಥಿತರಿದ್ದರು. ನಿವೃತ್ತಿ ಹೊಂದಿದ ಶಿಕ್ಷಕರು ಹಾಗೂ ಪ್ರತಿಭಾವಂತ ಸಾಧಕ ವಿದ್ಯಾರ್ಥಿಗಳನ್ನು ಸಂಸ್ಥೆಯ ಪರವಾಗಿ ಸನ್ಮಾನಿಸಿ ಗೌರವಿಸಲಾಯಿತು.

ಬಿ.ಎ. ನೇಜೆ ಸ್ವಾಗತಿಸಿದರು. ಎಸ್.ಬಿ. ಕಾಂಬಳೆ ನಿರೂಪಿಸಿದರು. ವಿ.ಎಸ್.ಕಕಮರಿ ವಂದಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಭಗವಂತನ ಶಕ್ತಿ ಪಡೆದವರಿಂದ ಡಿಕೆಶಿ ಸಿಎಂ ಆಗುವ ದಿನಾಂಕ ನಿಗದಿ : ಇಕ್ಬಾಲ್
ಜನ ನಂಗೆ ಇನ್ನೊಂದು ಅವಕಾಶ ಕೊಡಲಿ : ಎಚ್ಡಿಕೆ