ನರಗುಂದ:
ಪಟ್ಟಣದ ಲಯನ್ಸ್ ಶಿಕ್ಷಣ ಸಂಸ್ಥೆಯ ಲಯನ್ಸ್ ಇಂಗ್ಲಿಷ್ ಮಾಧ್ಯಮ ಶಾಲೆಯಲ್ಲಿ 2025-26ನೇ ಸಾಲಿನ ಎಸ್ಎಸ್ಎಲ್ಸಿ ವಾರ್ಷಿಕ ಪರೀಕ್ಷೆಯಲ್ಲಿ ಶೇ.95ಕ್ಕೂ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಮಾತನಾಡಿ, ಪಾಲಕರು ಮಕ್ಕಳಿಗೆ ಎಂಜಿನಿಯರ್ ಆಗಿ, ಡಾಕ್ಟರ್ ಆಗಿ ಎಂದು ಒತ್ತಡ ಹೇರದೇ ಅವರ ಮನದಾಳ ಅರಿಯಬೇಕು ಎಂದರು.
ಒತ್ತಡದಿಂದ ಗುರಿ ಮುಟ್ಟಲು ಅಸಾಧ್ಯ ಎಂದ ಅವರು, ಎಸ್ಎಸ್ಎಲ್ಸಿ ಆರಂಭಿಕ ಹಂತವಾಗಿದ್ದು ಪಿಯುಸಿ ಜೀವನದ ಮುಖ್ಯ ಘಟ್ಟವಾಗಿದೆ. ಅದನ್ನು ಶ್ರಮ ಪಟ್ಟು ಮುಗಿಸಿ ಜೀವನ ರೂಪಿಸಿಕೊಳ್ಳಬೇಕು. ಲಯನ್ಸ್ ಶಿಕ್ಷಣ ಸಂಸ್ಥೆ ನಾಲ್ಕು ದಶಕಗಳಿಂದ ಗುಣಾತ್ಮಕ ಶಿಕ್ಷಣ ನೀಡಿದೆ. ಅದಕ್ಕೆ ಸಾಕ್ಷಿಯಾಗಿ ವಿದ್ಯಾರ್ಥಿನಿ ಮೇಘಾ ಜೈನ ಐಎಎಸ್ ಪಾಸಾಗಿ ತ್ರಿಪುರಾ ಜಿಲ್ಲಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಮಕ್ಕಳಿಗೆ ಪಾಲಕರು, ಶಿಕ್ಷಕರು ಉತ್ತಮ ಶಿಕ್ಷಣ, ಸಂಸ್ಕಾರ ನೀಡಿ ಉತ್ತಮ ಪ್ರಜೆಗಳನ್ನಾಗಿಸಬೇಕೆಂದರು.ಈ ವೇಳೆ ತಾಲೂಕಿಗೆ ಪ್ರಥಮ ಸ್ಥಾನ ಫಡೆದ ಲಿಖಿತಾ ಹಿರೇಮಠ, ದ್ವಿತೀಯ ಸ್ಥಾನ ಪಡೆದ ಕೇತನ ರಾಮಣ್ಣವರ, ಶಾಲೆಗೆ ತೃತೀಯ ಸ್ಥಾನ ಪಡೆದ ಮಣಿಕಂಠ ಆನೇಗುಂದಿ, ಶೇ.95ಕ್ಕೂ ಹೆಚ್ಚು ಅಂಕ ಪಡೆದ ರಿಜವಾನಾ ನದಾಫ್, ತನಿಷಾ ಪುರೋಹಿತ , ಚಂದನ ಕವಲೂರು , ಪ್ರೀತಂ ಪಟ್ಟಣಶೆಟ್ಟಿ , ಶಾರದಾ ಸವದಿ , ಶ್ರೇಯಾ ಬೇಲೇರಿ, ಶ್ರೇಯಾ ಕುರುಬಗಟ್ಟಿ, ಪಿಯುಸಿಯಲ್ಲಿ ರಾಜ್ಯಕ್ಕೆ 9ನೇ ರ್ಯಾಂಕ್ ಪಡೆದ ಹಳೆಯ ವಿದ್ಯಾರ್ಥಿ ಶ್ರೀನಿಕಾ ಗುಡಿಸಾಗರವರ ತಂದೆ ವೆಂಕಟೇಶ ಗುಡಿಸಾಗರ ಅವರನ್ನು ಸನ್ಮಾನಿಸಲಾಯಿತು.
ಮುಖ್ಯೋಪಾಧ್ಯಾಯ ಜಿ.ಬಿ. ಹಿರೇಮಠ ಸ್ವಾಗತಿಸಿದರು. ಡಾ. ಬಸವರಾಜ ಹಲಕುರ್ಕಿ ನಿರೂಪಿಸಿ ವಂದಿಸಿದರು.