ಶ್ರೀ ಅಮೃತೇಶ್ವರ ಪ್ರೌಢಶಾಲೆಯಲ್ಲಿ ಸಂಸತ್ ಚುನಾವಣೆ

KannadaprabhaNewsNetwork | Published : Jun 27, 2025 12:48 AM

ತರೀಕೆರೆ, ನೇರಲಕೆರೆಯ ಶ್ರೀ ಅಮೃತೇಶ್ವರ ಪ್ರೌಢಶಾಲೆಯಲ್ಲಿ 2025-26ನೇ ಸಾಲಿನ ಶಾಲಾ ಸಂಸತ್ ಚುನಾವಣೆಯನ್ನು ಬ್ಯಾಲೆಟ್ ಮತಪತ್ರ ಬಳಸುವ ಮೂಲಕ ನ್ಯಾಯ ಸಮ್ಮತ ಮತ್ತು ಪಾರದರ್ಶಕವಾಗಿ ನಡೆಸಲಾಯಿತು.

ನ್ಯಾಯ ಸಮ್ಮತ ಮತ್ತು ಪಾರದರ್ಶಕ ಪ್ರಕ್ರಿಯೆ

ಕನ್ನಡಪ್ರಭ ವಾರ್ತೆ, ತರೀಕೆರೆ

ನೇರಲಕೆರೆಯ ಶ್ರೀ ಅಮೃತೇಶ್ವರ ಪ್ರೌಢಶಾಲೆಯಲ್ಲಿ 2025-26ನೇ ಸಾಲಿನ ಶಾಲಾ ಸಂಸತ್ ಚುನಾವಣೆಯನ್ನು ಬ್ಯಾಲೆಟ್ ಮತಪತ್ರ ಬಳಸುವ ಮೂಲಕ ನ್ಯಾಯ ಸಮ್ಮತ ಮತ್ತು ಪಾರದರ್ಶಕವಾಗಿ ನಡೆಸಲಾಯಿತು. ಈ ಚುನಾವಣೆಯಲ್ಲಿ ಮಕ್ಕಳು ನಿಷ್ಪಕ್ಷಪಾತವಾಗಿ ತಮ್ಮ ಮತ ಚಲಾಯಿಸುವ ಮೂಲಕ ಅರ್ಹ ಅಭ್ಯರ್ಥಿಗಳನ್ನು ಆಯ್ಕೆ ಮಾಡಲು ತಿಳಿಸಲಾಗಿತ್ತು. ಈ ಸಂಸತ್ ಚುನಾವಣೆಯಲ್ಲಿ ಪ್ರಧಾನ ಮಂತ್ರಿಯಾಗಿ ಆಶಾ ಎನ್. ಜೆ, ಉಪಪ್ರಧಾನಿಯಾಗಿ ಶರತ್ ನೀರಲಗಿ, ಶಿಕ್ಷಣ ಮತ್ತು ವಾರ್ತಾ ಮಂತ್ರಿಯಾಗಿ ಸ್ನೇಹ ಎಂ. ಕೆ, ಶಿಸ್ತು ಮತ್ತು ಸ್ವಚ್ಛತಾ ಮಂತ್ರಿಯಾಗಿ ಸ್ಪೂರ್ತಿ ಎಚ್ . ಎಸ್, ಕ್ರೀಡಾ ಮಂತ್ರಿಯಾಗಿ ಕಲ್ಪನಾ .ಜೆ, ಸಾಂಸ್ಕೃತಿಕ ಮಂತ್ರಿಯಾಗಿ ಅಪೂರ್ವ, ಗ್ರಂಥಾಲಯ ಮತ್ತು ಪ್ರಯೋಗಾಲಯ ಮಂತ್ರಿಯಾಗಿ ಭೂಮಿಕಾ ಡಿ. ಎಂ, ಆಹಾರ ಮತ್ತು ಆರೋಗ್ಯ ಮಂತ್ರಿಯಾಗಿ ವಿನಯ್, ನೀರಾವರಿ ಮತ್ತು ತೋಟಗಾರಿಕಾ ಮಂತ್ರಿಯಾಗಿ ತರುಣ್ ಎನ್. ಎಂ, ಪ್ರವಾಸ ಮಂತ್ರಿಯಾಗಿ ಮೌನೇಶ್ವರಿ ಆಯ್ಕೆಯಾಗಿದ್ದಾರೆ.

8, 9 ಮತ್ತು 10ನೇ ತರಗತಿಯ ಒಟ್ಟು 20 ಮಕ್ಕಳು ಚುನಾವಣೆಯಲ್ಲಿ ಅತ್ಯಂತ ಉತ್ಸಾಹದಿಂದ ಪಾಲ್ಗೊಂಡರು. ನಮ್ಮ ಪ್ರಜಾಪ್ರಭುತ್ವ ವ್ಯವಸ್ಥೆ ಭಾಗವಾಗಿ ಈ ಮತದಾನದ ಪ್ರಕ್ರಿಯೆ ಕುರಿತು ಮಾಹಿತಿ ತಿಳಿಸಲಾಯಿತು.

ವಿದ್ಯಾರ್ಥಿಗಳಿಗೆ ಅವರ ಸಾಮರ್ಥ್ಯಕ್ಕೆ ತಕ್ಕಂತೆ ವಿವಿಧ ಖಾತೆಗಳನ್ನು ನೀಡಿ, ಅವರು ನಿರ್ವಹಿಸಬೇಕಾದ ಕೆಲಸ-ಕಾರ್ಯ ಗಳ ಬಗ್ಗೆ ಮನವರಿಕೆ ಮಾಡಿಕೊಡಲಾಯಿತು. ಈ ಚುನಾವಣೆ ಮುಖ್ಯ ಅಧಿಕಾರಿಯಾಗಿ ಮುಖ್ಯ ಶಿಕ್ಷಕ ಹಾಲೇಶ್ ಕೆ. ಟಿ, ಮತದಾರರ ಸಾಕ್ಷರತಾ ಕ್ಲಬ್‌ನ ಸಂಚಾಲಕರಾಗಿ ಮಂಜುಳ ಮಲ್ಲಿಗವಾಡ, ಮತದಾನ ಪ್ರಕ್ರಿಯೆ ವಿವಿಧ ಅಧಿಕಾರಿಗಳಾಗಿ ಶಿಕ್ಷಕರಾದ ಖಿಜರ್‌ಖಾನ್, ರಮಾಕಾಂತ್, ಸವಿತಮ್ಮ. ಬಿ, ಸತೀಶ್ ನಂದಿಹಳ್ಳಿ, ಪಂಚಾಕ್ಷರಪ್ಪ, ಪ್ರಭಾಕರ್ ಎ. ಎಚ್, ಹಾಸ್ಟೆಲ್ ವಾರ್ಡನ್ ಆದ ಸುಕನ್ಯಾ ಚುನಾವಣಾ ಕರ್ತವ್ಯ ನಿರ್ವಹಿಸಿದರು.-

26ಕೆಟಿಆರ್.ಕೆ.20ಃ

ಸಮೀಪದ ನೇರಲಕೆರೆ ಶ್ರೀ ಅಮೃತೇಶ್ವರ ಪ್ರೌಢಶಾಲೆಯಲ್ಲಿ ನೆಡೆದ ಶಾಲಾ ಸಂಸತ್ ಚುನಾವಣೆಯಲ್ಲಿ ಆಯ್ಕೆಯಾದ ಸದಸ್ಯರು.