ಕನ್ನಡಪ್ರಭ ವಾರ್ತೆ ಪಾಂಡವಪುರ
ಜೆಡಿಎಸ್ ಅಧ್ಯಕ್ಷ ಎಸ್.ಎ.ಮಲ್ಲೇಶ್ ಮಾತನಾಡಿ, ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡರ ಧರ್ಮಪತ್ನಿ ಚನ್ನಮ್ಮ ಅವರ ನಿಧನದಿಂದ ಮನಸ್ಸಿಗೆ ಆಘಾತ ಉಂಟು ಮಾಡಿದೆ. ಅವರು ದೇವೇಗೌಡರಿಗೆ ಬೆಂಬಲವಾಗಿ ನಿಂತು ಅವರು ಪ್ರಧಾನ ಮಂತ್ರಿಯಾಗುವುದಕ್ಕೂ ಕಾರಣರಾಗಿದ್ದರು. ದೇವೇಗೌಡರ ಹೇಳ್ಗೆಯಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಅಷ್ಟೆ ಅಲ್ಲದೇ, ದೇವೇಗೌಡರ ಮನೆಗೆ ಯಾರೇ ಹೋದರು ಪ್ರೀತಿಯಿಂದ ಕಾಣುತ್ತಿದ್ದರು ಅಂತಹ ತಾಯಿಕಳೆದುಕೊಂಡು ಎಲ್ಲರಿಗೂ ದುಃಖ ಉಂಟಾಗಿದೆ ಎಂದು ವಿಷಾಧಿಸಿದರು.
ಜಿಪಂ ಮಾಜಿ ಸದಸ್ಯ ಎಚ್.ಮಂಜುನಾಥ್ ಮಾತನಾಡಿ, ಎಚ್.ಡಿ.ದೇವೇಗೌಡರ ಧರ್ಮಪತ್ನಿ ಚನ್ನಮ್ಮ ಅವರ ವಯೋಸಹ ನಿಧನದಿಂದ ಪಕ್ಷದ ಮುಖಂಡರು, ನಾಯಕರು, ಕಾರ್ಯಕರ್ತರು ಸೇರಿದಂತೆ ನಾಡಿನ ಜನತೆಗೆ ನೋವುಂಟಾಗಿದೆ. ತಾಯಿಯನ್ನೇ ಕಳೆದುಕೊಂಡು ಭಾವನೆ ಮೂಡಿದೆ ಎಂದರು.ಚನ್ನಮ್ಮ ಅವರು ಅತ್ಯಂತ ದೈವಭಕ್ತೆಯಾಗಿದ್ದರು. ಮನೆಯಲ್ಲಿ ಅನ್ನಪೂರ್ಣೇಶ್ವರಿಯಂತಿದ್ದರು. ಎಲ್ಲಾ ಅವರ ಬಗ್ಗೆ ಒಳ್ಳೆಯ ಮೆಚ್ಚುಗೆ ಮಾತುಗಳನ್ನು ಆಡುತ್ತಿದ್ದರು. ಅವರ ಕುಟುಂಬಕ್ಕೆ ಚನ್ನಮ್ಮ ಅವರ ನಿಧನದ ದುಃಖವನ್ನು ಭರಿಸುವ ಶಕ್ತಿಯನ್ನು ತಾಯಿ ಚಾಮುಂಡೇಶ್ವರಿ ನೀಡಲೆಂದು ಎಲ್ಲಾ ಜನತೆಯ ಪರವಾಗಿ ಪ್ರಾರ್ಥಿಸುತ್ತೇನೆ ಎಂದರು.
ಈ ವೇಳೆ ಪುರಸಭೆ ಮಾಜಿ ಸದಸ್ಯರಾದ ಆರ್.ಸೋಮಶೇಖರ್, ಎಂ.ಗಿರೀಶ್, ಟಿಎಪಿಸಿಎಂಎಸ್ ಅಧ್ಯಕ್ಷ ಚಿಕ್ಕಾಡೆ ಗಿರೀಶ್, ಬಲರಾಮು, ಜಿಲ್ಲಾ ಸಹಕಾರ ಯೂನಿಯನ್ ಮಾಜಿ ಅಧ್ಯಕ್ಷ ವಿ.ಎಸ್.ನಿಂಗೇಗೌಡ, ಚಿಕ್ಕಾಡೆ ಪ್ರಸನ್ನಕುಮಾರ್, ಆದರ್ಶ, ಅಶ್ವಥ್ಕುಮಾರೇಗೌಡ, ಸಗಾಯಂ, ಬೊಮ್ಮರಾಜು, ವಾಸುದೇವ್, ಮಂಚೇಗೌಡ, ಚಂದ್ರಶೇಖರ್, ನವೀನ್, ಜಯರಾಮು, ಉಮೇಶ್, ಬಿ.ಎಸ್.ಜಯರಾಮು, ಚೇತನ್, ಶಶಿ, ಪ್ರಶಾಂತ್, ರಾಚಯ್ಯ, ಗುರು ಸೇರಿದಂತೆ ಹಲವರು ಹಾಜರಿದ್ದರು.