ನಾಪೋಕ್ಲು: ಎಲ್ಲಾ ಧರ್ಮಗಳು ಶಾಂತಿ ಪ್ರೀತಿ ಸೌಹಾರ್ದತೆ ಪ್ರತಿಪಾದಿಸುತ್ತವೆ. ಶಾಂತಿ ಸೌಹಾರ್ದತೆಯ ಸಮಾಜ ನಿರ್ಮಾಣಕ್ಕೆ ಪ್ರತಿಯೊಬ್ಬರು ಮುಂದಾಗಬೇಕು ಎಂದು ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ, ಶಾಸಕ ಎ.ಎಸ್. ಪೊನ್ನಣ್ಣ ಹೇಳಿದ್ದಾರೆ.
ಶಾಂತಿ ಪ್ರತಿಪಾದಿಸಿದ ಸೂಫಿ ಸಂತರ ನಾಡಿನಲ್ಲಿ ಉರುಸ್ ಸಮಾರಂಭ ಆಯೋಜಿಸಲಾಗುತ್ತಿದೆ. ಯಾವ ಧರ್ಮವು ದ್ವೇಷ ಪ್ರತಿಪಾದಿಸಿಲ್ಲ. ದ್ವೇಷದಿಂದ ಏನನ್ನು ಸಾಧಿಸಲಾಗದು ಸಮಾಜದಲ್ಲಿ ಶಾಂತಿ ಸೌಹಾರ್ದತೆ ಸಮಾನತೆ ತರುವ ಕೆಲಸ ಆಗಬೇಕಿದೆ ಸಂವಿಧಾನದ ಆಶಯಗಳಿಗೆ ಅನುಗುಣವಾಗಿ ಎಲ್ಲರೂ ಬಾಳಬೇಕು ಎಂದರು.
ಸಂವಿಧಾನದ ಆಶಯಗಳನ್ನು ಮನಃಪೂರ್ವಕವಾಗಿ ಒಪ್ಪಿ ಸ್ವೀಕಾರ ಮಾಡಬೇಕು ಸಮಾಜದಲ್ಲಿ ಅಭಿವೃದ್ಧಿಯು ಆಗಬೇಕಿದೆ ಎಂದರು.ಕೇವಲ ಮಾತುಗಳಿಗೆ, ಗೋಷ್ಠಿಗೆ, ಕಾರ್ಯಕ್ರಮಗಳಿಗೆ ಸಂವಿಧಾನದ ತತ್ವಗಳು ಸೀಮಿತ ಆಗಬಾರದು. ಸಂವಿಧಾನದ ಆಶಯಗಳನ್ನು ಬದಲಾಗಿರಬೇಕು ಎಂದರು. ರಾಜ್ಯದೆಲ್ಲೆಡೆ ಅಭಿವೃದ್ಧಿ ಕೆಲಸಗಳಾಗುತ್ತಿವೆ ರಾಜ್ಯದ ಅಭಿವೃದ್ಧಿಗೆ ರಾಜ್ಯ ಸರ್ಕಾರ ಸ್ಪಂದಿಸಿದೆ. ವಿರಾಜಪೇಟೆ ಕ್ಷೇತ್ರದಲ್ಲಿ ಹಲವು ಅಭಿವೃದ್ಧಿ ಕಾರ್ಯಗಳಿಗೆ ರಾಜ್ಯ ಸರ್ಕಾರ ಮುಖ್ಯಮಂತ್ರಿಗಳು ಮಾಡಿಕೊಟ್ಟಿದ್ದಾರೆ. ಯಾವುದೇ ರೀತಿಯ ತಾರತಮ್ಯವನ್ನು ಮಾಡದೆ ಸೌಹಾರ್ದ ಸಮಾಜ ನಿರ್ಮಾಣಕ್ಕೆ ಸರ್ಕಾರ ಬದ್ಧವಾಗಿದ್ದು ಉತ್ತಮ ಸಮಾಜ ನಿರ್ಮಾಣಕ್ಕೆ ಎಲ್ಲರ ಸಹಕಾರ ಅಗತ್ಯ ಎಂದರು.
ಜಮಾಅತ್ ಅಧ್ಯಕ್ಷ ಹುಸೈನ್ ಸಖಾಫಿ, ಎರ್ಮು ಹಾಜಿ , ಮೊಹಮ್ಮದ್ ಹಾಜಿ ಕುಂಜಿಲ, ಅಬ್ದುಲ್ ರೆಹಮನ್, ಹಂಸ ಕೊಟ್ಟಮುಡಿ, ಇಸ್ಮಾಯಿಲ್ ನಾಪೋಕ್ಲು, ಯಾಕೂಬ್, ಹಂಝ ಪಡಿಯಾಣಿ, ಕರೀಂ ಆಜು, ಅಶ್ರಫ್ ಬಿ.ಯು. ಹಾಗೂ ಜಮಾಯಿತಿನ ಹಾಲಿ ಹಾಗೂ ಚಂಬಾರಂಡ ಮಾಹಿನೆ ಸೇರಿದಂತೆ ಹಾಲಿ ಮತ್ತು ಮಾಜಿ ಜಮಾಅತ್ ಆಡಳಿತ ಮಂಡಳಿ ಪದಾಧಿಕಾರಿಗಳು ಸದಸ್ಯರು ಹಾಜರಿದ್ದರು. ಜಮಾಅತ್ ಕಾರ್ಯದರ್ಶಿ ಸಯ್ಯದ್ ಝಕರಿಯ ಸಅದಿ ಸ್ವಾಗತಿಸಿದರು. ಸುಲೈಮಾನ್ ಸಖಾಫಿ ವಂದಿಸಿದರು. ನಂತರ ಅನ್ನದಾನ ನಡೆಯಿತು.