- ಪಕ್ಷದ ಜನಪರ ಹೋರಾಟಕ್ಕೆ ಸಂದ ಜಯ: ಮಾಜಿ ಸಚಿವ ರೇಣುಕಾಚಾರ್ಯ ಹೇಳಿಕೆಕನ್ನಡಪ್ರಭ ವಾರ್ತೆ ಹೊನ್ನಾಳಿ
ಸ್ಥಗತಗೊಳಿಸಿದ್ದ ಪಿಂಚಣಿಗಳ ಪುನಃ ನೀಡಲು ಮುಂದಾದ ಸರ್ಕಾರದ ನಿಲುವಿಗೆ ಅಭಿನಂದನೆ ಸಲ್ಲಿಸಿ ಶುಕ್ರವಾರ ಪಟ್ಟಣದ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ನೂರಾರು ಬಿಜೆಪಿ ಮುಖಂಡರು, ಕಾರ್ಯಕರ್ತರೊಂದಿಗೆ ವಿಜಯೋತ್ಸವ ನಡೆಯಿತು. ಈ ವೇಳೆ ಅವರು ಮಾತನಾಡಿ, ಇದು ಬಿಜೆಪಿ ಹೋರಾಟದ ಫಲವಾಗಿದೆ ಎಂದರು.
ಈ ಎಲ್ಲ ಸೌಲಭ್ಯಗಳನ್ನು ಅದಾಯ ಪರಿಶೀಲನೆ ನೆಪದಲ್ಲಿ ಸರ್ಕಾರ ಫಲಾನುಭವಿಗಳಿಗೆ ಸೌಲಭ್ಯಗಳನ್ನು ಕೆಲವಾರು ತಿಂಗಳಿಂದ ತಡೆಹಿಡಿಯಲಾಗಿತ್ತು. ಸರ್ಕಾರದ ಈ ನಿಲುವು ಖಂಡಿಸಿ ಬಿಜೆಪಿ ಜುಲೈ 22ರಂದು ಅವಳಿ ತಾಲೂಕುಗಳಲ್ಲಿ ಉಗ್ರ ಹೋರಾಟ ನಡೆಸಿ ಹಿರಿಯ ನಾಗರೀಕರು, ಅಂಗವಿಕಲರು, ಹಾಗೂ ವಿಧವೆಯಗೆ ಕೂಡಲೇ ಬಾಕಿ ಇರುವ ಮಾಸಾಶನ ಬಿಡುಗಡೆ ಮಾಡುವಂತೆ ರಾಜ್ಯದ ಕಾಂಗ್ರೆಸ್ ಸರ್ಕಾರಕ್ಕೆ ಒತ್ತಾಯಿಸಲಾಗಿತ್ತು. ಇದೀಗ ಸರ್ಕಾರ ₹32 ಸಾವಿರ ಆದಾಯ ಮಿತಿ ಸಡಿಲಗೊಳಿಸಿ ಇದನ್ನು ₹1.20 ಲಕ್ಷಕ್ಕೆ ಆದಾಯ ಮಿತಿ ನಿಗದಿಪಡಿಸಿ, ಸ್ಥಗಿತಗೊಳಿಸಿದ್ದ ಎಲ್ಲ ರೀತಿಯ ಮಾಸಾಶನ ಸೌಲಭ್ಯಗಳನ್ನು ನೀಡುವಂತೆ ಆದೇಶ ಹೊರಡಿಸಿದೆ ಎಂದರು.ಮುಂದಿನ ದಿನಗಳಲ್ಲಿ ಗುಟ್ಕಾ ನಿಷೇಧ ವಿಷಯವಾಗಿ ಅಡಕೆ ಬೆಳಗಾರರ ಹಿತಕಾಯುವ ನಿಟ್ಟಿನಲ್ಲಿ ಕೂಡ ಇಡೀ ಜಿಲ್ಲೆಯಲ್ಲಿ ಪಾದಯಾತ್ರೆ ನಡೆಸುವ ಬಗ್ಗೆ ಶೀಘ್ರವಾಗಿ ಮುಖಂಡರು, ಕಾರ್ಯಕರ್ತರೊಂದಿಗೆ ಸಭೆ ನಡೆಸಿ, ದಿನಾಂಕ ನಿಗದಿಪಡಿಸಲಾಗುವುದು ಎಂದರು.
- - -
ರಾಜ್ಯ ಸರ್ಕಾರ ವಿವಿಧ ಮಾಸಾಶನಗಳ ವಿತರಣೆ ಪುನಃ ಜಾರಿಗೊಳಿಸಿದ ಹಿನ್ನೆಲೆ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ನೇತೃತ್ವದಲ್ಲಿ ಬಿಜೆಪಿಯಿಂದ ಪಟಾಕಿ ಸಿಡಿಸಿ ವಿಜಯೋತ್ಸವ ಆಚರಿಸಲಾಯಿತು.