ವೈದ್ಯಕೀಯ ಸೇವೆಗೆ ಹೋಗಬೇಕಾದ ಆ್ಯಂಬುಲೆನ್ಸ್ಗೂ ದಾರಿ ಸಿಗುವುದು ಕಷ್ಟ
ಕನ್ನಡಪ್ರಭ ವಾರ್ತೆ ಹೊನ್ನಾವರ
ಕರಾವಳಿ ತೀರದ ಪ್ರಮುಖ ಪಟ್ಟಣವಾದ ಹೊನ್ನಾವರವು ಪ್ರಸ್ತುತ ತೀವ್ರ ಸಂಚಾರ ದಟ್ಟಣೆಯ ಅವ್ಯವಸ್ಥೆಯಿಂದ ತತ್ತರಿಸಿದೆ. ರಾಷ್ಟ್ರೀಯ ಹೆದ್ದಾರಿ 66 ಮತ್ತು ಶರಾವತಿ ನದಿಯ ಗುಂಟ ನಡೆಯುತ್ತಿರುವ ಪ್ರವಾಸಿ ಚಟುವಟಿಕೆಗಳು, ಅಪೂರ್ಣಗೊಂಡ ರಸ್ತೆ ಕಾಮಗಾರಿಗಳೊಂದಿಗೆ ಸೇರಿ ಈ ಸಮಸ್ಯೆಯನ್ನು ಉಲ್ಬಣಗೊಳಿಸಿವೆ.ಪಟ್ಟಣದ ಮೂಲಕ ಹಾದುಹೋಗುವ ರಾಷ್ಟ್ರೀಯ ಹೆದ್ದಾರಿ 66ರ ವಿಸ್ತರಣೆ ಮತ್ತು ಅಭಿವೃದ್ಧಿ ಕಾಮಗಾರಿಗಳು ಪೂರ್ಣಗೊಳ್ಳದಿರುವುದು ಟ್ರಾಫಿಕ್ ಜಾಮ್ಗೆ ಮೂಲ ಕಾರಣವಾಗಿದೆ. ಅಲ್ಲದೆ ಶರಾವತಿ ಬೋಟಿಂಗ್ಗೆ ಹೋಗುವ ರಸ್ತೆಯೂ ಸಹ ಸಮರ್ಪಕವಾಗಿಲ್ಲ. ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡು ಬೋಟಿಂಗ್ಗೆ ಹೋಗುವ ರಸ್ತೆ ಇದೆ. ರಾಷ್ಟ್ರೀಯ ಹೆದ್ದಾರಿಯಲ್ಲಿ ನೂರಾರು ವಾಹನಗಳು ಏಕಕಾಲದಲ್ಲಿ ಸಂಚರಿಸುತ್ತಿರುತ್ತದೆ. ಹೀಗಾಗಿ ಬೋಟಿಂಗ್ ಹೋಗುವ ವಾಹನಗಳು ಹಾಗೂ ಹೆದ್ದಾರಿಯ ವಾಹನಗಳ ಕಾರಣದಿಂದ ವಾಹನ ದಟ್ಟಣೆ ಉಂಟಾಗುತ್ತದೆ.
ಹಲವು ಕಡೆ ರಸ್ತೆ ಕಾಮಗಾರಿಗಳ ಸಲುವಾಗಿ ಮಾರ್ಗವು ಕಿರಿದಾಗಿದ್ದು, ವಾಹನಗಳು ನಿಧಾನವಾಗಿ ಸಾಗಬೇಕಿದೆ. ಒಂದು ವಾಹನ ಕೆಟ್ಟು ನಿಂತರೂ ಸಾಕು, ಇಡೀ ಸಂಚಾರ ವ್ಯವಸ್ಥೆಯೇ ಅಸ್ತವ್ಯಸ್ತಗೊಳ್ಳುವ ಪರಿಸ್ಥಿತಿ ಇದೆ.
ಜೂನ್ನಿಂದ ಆರಂಭಿಸಿ ಇಲ್ಲಿಯವರೆಗೆ ಶರಾವತಿ ನದಿಯಲ್ಲಿ ನಡೆಯುವ ಬೋಟಿಂಗ್ ಮತ್ತೆ ಪ್ರಾರಂಭವಾಗಿದೆ. ಪ್ರವಾಸಿಗರ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಬೋಟಿಂಗ್ ನ್ನು ಮಳೆಗಾಲದಲ್ಲಿ ನಿಲ್ಲಿಸಲಾಗಿತ್ತು. ಇದೀಗ ಮಳೆಗಾಲ ಮುಗಿದಿದ್ದು ಮತ್ತೆ ಬೋಟಿಂಗ್ ಆರಂಭಗೊಂಡಿದೆ.
ಬೋಟಿಂಗ್ ತಾಣಗಳ ಬಳಿ ಸಾಗುವ ರಸ್ತೆಯೂ ಕಿರಿದಾಗಿದ್ದು ಇಲ್ಲಿ ಸಂಚರಿಸುವ ವಾಹನಗಳಿಂದಲೂ ಟ್ರಾಫಿಕ್ ಸಮಸ್ಯೆ ಆಗುತ್ತಿದೆ.
ರಜಾ ದಿನಗಳಲ್ಲಿ ಪರಿಸ್ಥಿತಿ ಇನ್ನಷ್ಟು ಗಂಭೀರ: