ಕನ್ನಡಪ್ರಭ ವಾರ್ತೆ ನಾಗಮಂಗಲ
ಪಟ್ಟಣದ ತಾಪಂ ಆವರಣದಲ್ಲಿ ತಾಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ ಮತ್ತು ಅಭಿಯೋಜನಾ ಇಲಾಖೆಯ ಸಹಭಾಗಿತ್ವದಲ್ಲಿ ಬುಧವಾರ ಆಯೋಜಿಸಿದ್ದ ಅಂತಾರಾಷ್ಟ್ರೀಯ ವಿಶೇಷ ಚೇತನರ ದಿನ ಮತ್ತು ವಿಶ್ವ ಮಾನವ ಹಕ್ಕುಗಳ ದಿನದ ಕಾನೂನು ಅರಿವು ನೆರವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ವಿಕಲಚೇತನರಲ್ಲಿ ಮನಸ್ಸಿನ ದೃಢ ನಿಶ್ಚಯ, ದೈಹಿಕ ಮತ್ತು ರೋಗಪ್ರತಿರೋಧಕ ಶಕ್ತಿ ಬಹಳ ಉತ್ತಮವಾಗಿದೆ. ಬಹುತೇಕ ವಿಕಲಚೇತನರು ಸಾಧನೆಯ ಗುರಿಯೊಂದಿಗೆ ಏನಾದರೊಂದು ಕೆಲಸ ಮಾಡುತ್ತಾರೆ. ಆದರೆ, ಕೆಲವರು ಮಾತ್ರ ತಮ್ಮಲ್ಲಿರುವ ಅಂಗ ವೈಫಲ್ಯವನ್ನೇ ಬಂಡವಾಳ ಮಾಡಿಕೊಂಡು ಭಿಕ್ಷಾಟನೆ ಮಾಡುವುದು ಬೇಸರದ ಸಂಗತಿ ಎಂದರು.ವಿಕಲ ಚೇತನರಿಗಾಗಿ ಸರ್ಕಾರ ಮೀಸಲಾತಿ ಸೇರಿದಂತೆ ಹಲವು ಬಗೆಯ ಸವಲತ್ತುಗಳನ್ನು ನೀಡುತ್ತಿದೆ. ಸರ್ಕಾರದ ಎಲ್ಲ ಸೌಲಭ್ಯ ಸದುಪಯೋಗ ಪಡಿಸಿಕೊಂಡು ಸ್ವಾಭಿಮಾನದ ಬದುಕು ನಡೆಸಬೇಕು ಎಂದರು.
ಮನುಷ್ಯ ಮನುಷ್ಯರೇ ಶತ್ರುಗಳಂತೆ ಬದುಕುತ್ತಿದ್ದೇವೆ. ನಮ್ಮ ಹಕ್ಕುಗಳ ಬಗ್ಗೆ ಮಾತ್ರ ಹೋರಾಟ ನಡೆಸುತ್ತಿದ್ದೇವೆ. ಆದರೆ, ಹಕ್ಕುಗಳ ಜೊತೆಗೆ ನಮ್ಮ ಕರ್ತವ್ಯಗಳನ್ನು ಮರೆಯುತ್ತಿದ್ದೇವೆ. ನಮ್ಮ ಹಕ್ಕುಗಳ ಜೊತೆಗೆ ಬೇರೆಯವರ ಹಕ್ಕುಗಳ ಬಗ್ಗೆಯೂ ಗೌರವಿಸಬೇಕು ಎಂದರು.
ಒಬ್ಬ ಮನುಷ್ಯ ಸಮ ಸಮಾಜದ ದೃಷ್ಟಿಯಿಂದ ಬದುಕು ನಡೆಸಲು ಆಡಳಿತಾರೂಢ ಸರ್ಕಾರಗಳು ಮಾಡಬೇಕಾದ ಅನಿವಾರ್ಯವಾದ ಕರ್ತವ್ಯ. ಆ ಕರ್ತವ್ಯವನ್ನು ಒದಗಿಸುವಂತೆ ಕೇಳಲು ಯಾರೂ ಸಹ ಹಿಂಜರಿಕೆಯನ್ನು ಬಿಟ್ಟು ಅದು ನಮ್ಮ ಹಕ್ಕು ಎನ್ನುವಂತೆ ಸರ್ಕಾರವನ್ನು ಕೇಳಬೇಕು ಎಂದರು.
ಕಾರ್ಯಕ್ರಮದಲ್ಲಿ ಸಹಾಯಕ ಸರ್ಕಾರಿ ಅಭಿಯೋಜಕಿ ಟಿ.ಆರ್.ಶ್ರೀದೇವಿ, ತಾಪಂ ಆಡಳಿತ ಸಹಾಯಕ ನಿರ್ದೇಶಕ ವಿ.ಕೃಷ್ಣಮೂರ್ತಿ, ಅಪರ ಸರ್ಕಾರಿ ವಕೀಲ ಪಿ.ಸಿ.ಮಂಜುನಾಥ್, ವಿವಿದ್ದೋದ್ದೇಶ ಪುನರ್ವಸತಿ ಕಾರ್ಯಕರ್ತರ ಸಂಯೋಜಕರಾದ ಬಿ.ಸಿದ್ದರಾಜು, ಎಸ್.ಚಂದ್ರಕಲಾ, ಎನ್ಆರ್ಎಲ್ಎಂ ಸಂಯೋಜಕ ಸುರೇಂದ್ರ, ನ್ಯಾಯಾಲಯದ ಸೋನುಮೂರ್ತಿ, ತಾಲೂಕಿನ ಎಲ್ಲಗ್ರಾಪಂ ಪಿಡಿಒಗಳು, ತಾಪಂ ಸಿಬ್ಬಂದಿ ಮತ್ತು ವಿಶೇಷ ಚೇತನರು ಇದ್ದರು.