ತೊಗರಿ ಬೆಳೆಗೆ ಕೀಟಬಾಧೆ: ನಿಯಂತ್ರಣಕ್ಕೆ ರೈತರ ಹರಸಾಹಸ

KannadaprabhaNewsNetwork |  
Published : Oct 23, 2024, 12:49 AM IST
ಫೋಟೋ- ತೊಗರ | Kannada Prabha

ಸಾರಾಂಶ

Toor Dal, Kalaburagi News, Pests Problem, ಅಫಜಲ್ಪುರ, ತೊಗರಿ ಬೆಳೆಗೆ ಕೀಟಬಾಧೆ, ಕೀಟ ಬಾಧೆ

ಕನ್ನಡಪ್ರಭ ವಾರ್ತೆ ಅಫಜಲ್ಪುರ

ತಾಲೂಕಿನ ರೈತರ ಪ್ರಮುಖ ವಾಣಿಜ್ಯ ಬೆಳೆಯಾದ ತೊಗರಿ ಹೆಚ್ಚಿನ ಪ್ರಮಾಣದಲ್ಲಿ ಬಿತ್ತನೆ ಮಾಡಿದ ರೈತರಿಗೆ ಈಗ ಬೆಳೆಗೆ ಆವರಿಸಿದ ಕೀಟಬಾಧೆ ನಿಯಂತ್ರಣಕ್ಕೆ ದುಬಾರಿ ವೆಚ್ಚದ ಔಷಧ ಸಿಂಪಡಣೆಯಲ್ಲಿ ಪರದಾಡುವಂತೆ ಮಾಡಿದೆ. ಎಲ್ಲೆಡೆ ತೊಗರಿ ಮೊಗ್ಗು ಮತ್ತು ಹೂವು ಬಿಡುತ್ತಿದ್ದು, ಈಗ ಬೆಳೆಗೆ ಕೀಟಬಾಧೆ ಉಲ್ಬಣಗೊಂಡಿದ್ದು, ಬೆಳೆ ರಕ್ಷಿಸಲು ರೈತರು ಕಷ್ಟಪಟ್ಟು ದುಬಾರಿ ಔಷಧಗಳನ್ನು ಅನಿವಾರ್ಯವಾಗಿ ಖರೀದಿಸುವಂತಾಗಿದೆ.

ಬೆಳೆಗೆ ಕೀಟ ಬಾಧೆಯಿಂದ ತಪ್ಪಿಸಲು ಔಷಧ ಸಿಂಪಡಿಸಿದರೂ ಕೂಡ ಕೀಟ ನಿಯಂತ್ರಣದ ಪ್ರಯತ್ನಗಳು ಫಲಪ್ರದವಾಗುತ್ತಿಲ್ಲ ಎಂದು ರೈತರು ಹೇಳುತ್ತಿದ್ದಾರೆ. ಇದರಿಂದ ಬೆಳೆ ಹಾನಿ ತಡೆಯಲು ಕೈಗೊಂಡ ಕ್ರಮಗಳು ವಿಫಲವಾಗಿರುವುದರಿಂದ ರೈತರಿಗೆ ಆರ್ಥಿಕ ನಷ್ಟದ ದಿನಗಳು ಎದುರಾಗುತ್ತಿವೆ.

ಪಟ್ಟಣ ಸೇರಿದಂತೆ ತಾಲೂಕಿನ ಕರಜಗಿ ಅಫಜಲ್ಪುರ ಅತನೂರ ಗೊಬ್ಬೂರ ವಲಯಗಳಲ್ಲಿ ತೊಗರಿ ಬೆಳೆ ಮಳೆಯಿಂದ ಅಲ್ಲಲ್ಲಿ ಕೊಂಚ ಹಾನಿಯಾದರೆ ಉಳಿದವರಿಗೆ ಬಂಪರ್‌ ಬೆಳೆ ಬಂದಿದೆ. ಆದರೆ ಕೀಟಗಳ ಹಾವಳಿಯಿಂದ ದುಬಾರಿ ವೆಚ್ಚದ ಔಷಧ ಸಿಂಪಡಣೆ ಹಾಗೂ ಕೂಲಿಯಾಳುಳಿಗೆ ರೈತ ತತ್ತರಿಸುವಂತೆ ಮಾಡಿದೆ.

ಬೆಳೆ ಬಂಪರ್‌ ಬಂದರೂ ನಿರ್ವಹಣೆ, ಬಿತ್ತನೆ ಖರ್ಚು, ರಾಶಿ ಸೇರಿದಂತೆ ದುಬಾರಿ ವೆಚ್ಚದಿಂದ ಕೈಗೆ ಹಣ ಬರುತ್ತಿಲ್ಲ. ಹವಾಮಾನ ವೈಪರೀತ್ಯ ಇಳುವರಿ ಕುಂಠಿತ ಮತ್ತು ಕೀಟಬಾಧೆಯಿಂದ ಉತ್ಪಾದನೆಯಲ್ಲಿ ಕಡಿಮೆಯಾದರೆ ರೈತ ಬರಿಗೈಯಿಂದಲೇ ಮನೆಗೆ ತೆರಳುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ತಾಲೂಕಿನ ಮಣ್ಣೂರ ಗ್ರಾಮದ ರೈತರಾದ ಸಂತೋಷ ಅಲ್ಲಾಪೂರ, ಶಾಂತಪ್ಪ ವಾಯಿ ಮಲಕಪ್ಪ ಕರಜಗಿ ಮಹ್ಮದಕರಿಂ ಮಂಗಲಗಿರಿ ತಮ್ಮ ಅಳಲು ತೋಡಿಕೊಂಡರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಅಧಿವೇಶನ ಮುಗಿದ ಬಳಿಕ ಡಿಕೆಶಿಗೆ ಶುಭಸುದ್ದಿ : ಇಕ್ಬಾಲ್
ಬೆಳಗಾವೀಲೂ ‘ಕೈ’ ಡಿನ್ನರ್‌ ಸಭೆಗೆ ಬಿವೈವಿ ಕಿಡಿ