ಯೋಗದಿಂದ ದೈಹಿಕ, ಮಾನಸಿಕ ಆರೋಗ್ಯ: ಡಾ. ಕಲ್ಲೇಶ ಮೂರಶಿಳ್ಳಿನ

KannadaprabhaNewsNetwork |  
Published : Oct 28, 2025, 12:15 AM IST
ಕಾರ್ಯಕ್ರಮದಲ್ಲಿ ಡಾ. ಕಲ್ಲೇಶ ಮೂರಶಿಳ್ಳಿನ ಮಾತನಾಡಿದರು. | Kannada Prabha

ಸಾರಾಂಶ

ದೈಹಿಕ ಸಮಸ್ಯೆಗಳಿಗೆ ಮನಸ್ಸೇ ಮೂಲವಾಗಿರುವದರಿಂದ ಮನಸ್ಸಿನ ನಿಗ್ರಹ ಯೋಗದಿಂದ ಮಾತ್ರ ಸಾಧ್ಯ. ಆತ್ಮವಿಶ್ವಾಸ, ಆತ್ಮಪ್ರಜ್ಞೆ, ವಿಶ್ರಾಂತಿ ಮತ್ತು ಉತ್ತಮ ಮನೋಸ್ಥಿತಿಯನ್ನು ಹೊಂದಲು ಯೋಗ ಸಹಕಾರಿಯಾಗಿದೆ.

ಗದಗ: ಬದಲಾದ ಜೀವನಶೈಲಿ ಮತ್ತು ಆಹಾರ ಸೇವನೆಯ ಪರಿಣಾಮದಿಂದ ಮಾನವ ದೈಹಿಕ ಹಾಗೂ ಮಾನಸಿಕ ಸಮಸ್ಯೆಗಳಿಗೆ ಒಳಗಾಗಿದ್ದಾನೆ. ಇದರಿಂದ ಒತ್ತಡಯುಕ್ತ ಬದುಕು ನಿರ್ಮಾಣಗೊಂಡಿದೆ. ಈ ಹಿನ್ನೆಲೆ ಯೋಗದ ಚಟುವಟಿಕೆಗಳು ಮನುಷ್ಯನಲ್ಲಿ ದೈಹಿಕ ಹಾಗೂ ಮಾನಸಿಕ ಆರೋಗ್ಯವನ್ನು ವೃದ್ಧಿಸುತ್ತವೆ ಎಂದು ಆಯುರ್ವೇದ ವೈದ್ಯ ಡಾ. ಕಲ್ಲೇಶ ಮೂರಶಿಳ್ಳಿನ ತಿಳಿಸಿದರು.ನಗರದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ನಿಂದ ಯೋಗಬಂಧು ಸಂಗಮೇಶ ಮೇಲ್ಮುರಿ ಅವರ ಸ್ಮರಣಾರ್ಥ ಜರುಗಿದ ದತ್ತಿ ಉಪನ್ಯಾಸದಲ್ಲಿ ಯೋಗ ಮತ್ತು ಆರೋಗ್ಯ ಕುರಿತು ಮಾತನಾಡಿದರು.

ದೈಹಿಕ ಸಮಸ್ಯೆಗಳಿಗೆ ಮನಸ್ಸೇ ಮೂಲವಾಗಿರುವದರಿಂದ ಮನಸ್ಸಿನ ನಿಗ್ರಹ ಯೋಗದಿಂದ ಮಾತ್ರ ಸಾಧ್ಯ. ಆತ್ಮವಿಶ್ವಾಸ, ಆತ್ಮಪ್ರಜ್ಞೆ, ವಿಶ್ರಾಂತಿ ಮತ್ತು ಉತ್ತಮ ಮನೋಸ್ಥಿತಿಯನ್ನು ಹೊಂದಲು ಯೋಗ ಸಹಕಾರಿಯಾಗಿದೆ ಎಂದರು.ಸಾಹಿತಿ ಅಂದಾನೆಪ್ಪ ವಿಭೂತಿ ಮಾತನಾಡಿ, ಯೋಗಬಂಧು ಸಂಗಮೇಶ ಮೇಲ್ಮುರಿ ಅವರು ಎಲ್‌ಐಸಿ ಅಧಿಕಾರಿಗಳಾಗಿ ಕಾರ್ಯನಿರ್ವಹಿಸಿ ನಿವೃತ್ತಿಯಾದ ನಂತರ ಯೋಗ ಮತ್ತು ಆಯುರ್ವೇದ ಪ್ರಚಾರದಲ್ಲಿ ಮಾಡಿದ ಸಾಧನೆಯನ್ನು ತಿಳಿಸಿದರು.ಅಧ್ಯಕ್ಷತೆ ವಹಿಸಿದ್ದ ಕಸಾಪ ಜಿಲ್ಲಾಧ್ಯಕ್ಷ ವಿವೇಕಾನಂದಗೌಡ ಪಾಟೀಲ ಮಾತನಾಡಿ, ಒಂದು ಕಾಲದಲ್ಲಿ ಅನ್ನದ ಕೊರತೆ ಇತ್ತು. ಆದರೆ ಇಂದು ಆರೋಗ್ಯದ ಕೊರತೆಯಿದೆ. ಆರೋಗ್ಯ ಅನಕ್ಷರತೆಯಿಂದ ದುಡಿಮೆಯ ಬಹುಪಾಲನ್ನು ಆರೋಗ್ಯ ರಕ್ಷಣೆಗಾಗಿ ಕಳೆಯುವ ಸಂದರ್ಭ ಒದಗಿ ಬಂದಿದೆ. ಶಾಲಾ- ಕಾಲೇಜುಗಳಲ್ಲಿ ಆರೋಗ್ಯ ಶಿಕ್ಷಣ ನೀಡುವಂತಾಗಬೇಕೆಂದು ತಿಳಿಸಿದರು. ಕೊಟ್ರೇಶ ಮೇಲ್ಮುರಿ, ಡಾ. ಧನೇಶ ದೇಸಾಯಿ, ಡಾ. ಆರ್.ಎನ್. ಗೋಡಬೋಲೆ, ಡಾ. ಅರ್ಜುನ ಗೊಳಸಂಗಿ, ಅನ್ನದಾನಿ ಹಿರೇಮಠ, ಬಿ.ಎಸ್. ಹಿಂಡಿ, ವಿ.ಎಸ್. ದಲಾಲಿ, ಎಸ್.ಯು. ಸಜ್ಜನಶೆಟ್ಟರ, ರಾಜಶೇಖರ ಕರಡಿ, ರಾಜೇಶ್ವರಿ ಬಡ್ನಿ, ಅಶೋಕ ಸತ್ಯರಡ್ಡಿ, ಶಕುಂತಲಾ ಗಿಡ್ನಂದಿ, ಅಶೋಕ ಮತ್ತಿಗಟ್ಟಿ, ಜಯನಗೌಡ ಪಾಟೀಲ, ಅಮರೇಶ ರಾಂಪೂರ, ಅಶೋಕ ಹಾದಿ, ಬಸವರಾಜ ಗಣಪ್ಪನವರ, ಎಸ್.ಸಿ. ಹಾಲಕೇರಿ, ಸುಧಾ ಬಳ್ಳಿ, ಮಲ್ಲಿಕಾರ್ಜುನ ನಿಂಗೋಜಿ, ರತ್ನಾ ಪುರಂತರ, ಶಶಿಕಾಂತ ಕೊರ್ಲಹಳ್ಳಿ, ಎಂ.ಎಫ್. ಡೋಣಿ, ಬಸವರಾಜ ನೆಲಜೇರಿ, ರಾಜಶೇಖರ ಪಾಟೀಲ, ಬೂದಪ್ಪ ಅಂಗಡಿ, ಕಿರಣ ಗುಗ್ಗರಿ, ರಮೇಶ ಹಂಚಿನಾಳ, ಸಿ.ಕೆ.ಎಚ್. ಕಡಣಿ ಶಾಸ್ತ್ರೀ, ಸುರೇಶ ನಲವಡಿ, ಕೃಷ್ಣಾ ಕಡಿ ಮೊದಲಾದವರು ಇದ್ದರು. ರಾಹುಲ ಗಿಡ್ನಂದಿ ನಿರೂಪಿಸಿದರು. ಕಿಶೋರಬಾಬು ನಾಗರಕಟ್ಟಿ ಸ್ವಾಗತಿಸಿದರು. ಸತೀಶ ಚನ್ನಪ್ಪಗೌಡ್ರ ವಂದಿಸಿದರು.

PREV

Recommended Stories

ವಾಲ್ಮೀಕಿಗೆ ದೇವರ ಪಟ್ಟ ಕೊಡದಿರುವುದು ದುರಂತ: ಡಾ.ಗೋಪಾಲ
ಚರ್ಚ್‌ನಲ್ಲಿ ನಡೆದಿರುವುದು ಆತ್ಮಹತ್ಯೆಯಲ್ಲ, ಕೊಲೆ: ಆರೋಪ