ಕನ್ನಡಪ್ರಭವಾರ್ತೆ ಹೊಸದುರ್ಗ
ಪಟ್ಟಣದ ಶ್ರೀ ವಿಠ್ಠಲ ದೇವಾಲಯದಲ್ಲಿ ಭಾನುವಾರ ಭಾವಸಾರ ಕ್ಷತ್ರೀಯ ಸಮಾಜ ಹಾಗೂ ತುಳುಜಾಭವಾನಿ ಸೇವಾ ಟ್ರಸ್ಟ್ ಆಯೋಜಿಸಿದ್ದ ಶ್ರೀ ಹಿಂಗುಲಾಂಬಿಕಾ ಮಾತಾ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಭಾವಸಾರ ಕ್ಷತ್ರೀಯ ಸಮಾಜದ ಕುಲ ದೇವತೆಯಾದ ಹಿಂಗುಲಾಜ ಮಾತೆಯ ಶಕ್ತಿ ಪೀಠ ಪಾಕಿಸ್ತಾನದ ಬಲೂಚಿಸ್ತಾನ ಪ್ರಾಂತ್ಯದ ಹಿಂಗ್ಲಾಜ್ ಪ್ರದೇಶದಲ್ಲಿದೆ. ಆರ್ಥಿಕವಾಗಿ ಹಿಂದುಳಿದಿರುವ ಭಾವಸಾರ ಕ್ಷತ್ರೀಯ ಸಮಾಜದ ಜನರು ಆರ್ಥಿಕ ಹಾಗೂ ರಾಜಕೀಯ ಕಾರಣಗಳಿಂದ ಕುಲ ದೇವತೆಯ ದರ್ಶನ ಮಾಡಲು ಸಾಧ್ಯವಾಗದೆ ಧಾರ್ಮಿಕ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಧಾರ್ಮಿಕ ಶ್ರದ್ದೆ ಹೊಂದಿರುವ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಕರ್ನಾಟಕದಲ್ಲಿ ಹಿಂಗುಲಾಜ ದೇವಿಯ ಶಕ್ತಿ ಪೀಠ ಸ್ಥಾಪಿಸಲು ನೆರವು ನಿಡಬೇಕು ಎಂದು ಕೋರಿದರು.ರಾಜ್ಯದಲ್ಲಿ ದೇವಿಯ ಶಕ್ತಿಪೀಠ ಸ್ಥಾಪನೆಯಾದರೆ ಭಾವಸಾರ ಕ್ಷತ್ರೀಯ ಸಮಾಜಕ್ಕೆ ಧಾರ್ಮಿಕ ಶಕ್ತಿ ನೀಡಿದಂತಾಗುತ್ತದೆ. ಈಗಾಗಲೇ ಧಾರವಾಡದ ಬಳಿ 100 ಎಕರೆ ಜಮೀನು ನೀಡುವಂತೆ ರಾಜ್ಯ ಸರ್ಕಾರಕ್ಕೆ ಮನವಿ ಮಾಡಲಾಗಿದೆ. ಸರ್ಕಾರ ದಾರವಾಡದ ಜಿಲ್ಲಾಧಿಕಾರಿಗೆ ಭೂಮಿ ಪರಿಶೀಲಿಸಲು ಸೂಚನೆ ನೀಡಿದೆ. ದೇವಾಲಯ ನಿರ್ಮಾಣದ ಜೊತೆಗೆ ಗುರುಪೀಠ ಸ್ಥಾಪಿಸುವ ಅಲೋಚನೆ ಕೂಡ ಇದೆ ಎಂದರು.
ಸುರೇಶ್ ಬಾಬು, ಮೋಹನ್ ಗುಜ್ಜಾರ್, ಮಂಗಳ ಕುಂಠೆ, ಸಾಧನ, ನಂದಿನಿ, ಪ್ರಶಾಂತ್ ಗುಜ್ಜಾರ್, ಬಾಬುರಾವ್, ರಾಜು ಹೊವಳೆ, ರಂಗನಾಥ್ ಜಿಂಗಾಡೆ, ಗಣೇಶ್ ಮಾಳತ್ಕರ್, ವಾಸುದೇವರಾವ್, ರಾಮಣ್ಣ, ಸಂತೋಷ ಇತರರು ಹಾಜರಿದ್ದರು.