ಕನ್ನಡಪ್ರಭ ವಾರ್ತೆ ನರಗುಂದ
ಭಾನುವಾರ ತಾಲೂಕಿನ ಕೊಣ್ಣೂರ ಗ್ರಾಮದಲ್ಲಿ ನರೇಗಾ ಯೋಜನೆಯಲ್ಲಿ ದುಡಿಯುವ ಕೂಲಿಕಾರರ ಸ್ಥಳಕ್ಕೆ ಹೋಗಿ ಕೂಲಿಕಾರರಿಗೆ ಮತದಾನ ಜಾಗೃತಿ ಮೂಡಿಸಿ ಆನಂತರ ಮಾತನಾಡಿದರು.
ಭಾರತ ದೇಶ ವಿಶ್ವದಲ್ಲೇ ಅತ್ಯಂತ ದೊಡ್ಡ ಪ್ರಜಾಪ್ರಭುತ್ವ ಹೊಂದಿರುವ ದೇಶ. ಇಂಥ ದೇಶದಲ್ಲಿರುವ ಜನರಿಗೆ ಸಂವಿಧಾನ ಮತದಾನ ಎಂಬ ವಿಶೇಷ ಹಕ್ಕನ್ನು ನೀಡಿದೆ. ಸಂವಿಧಾನ ನೀಡಿದ ಮತ ಹಕ್ಕನ್ನು ಚಲಾಯಿಸಿ ಲೋಕಸಭೆಗೆ ಅರ್ಹ ಸಂಸದರನ್ನು ಕಳುಹಿಸುವ ಕೆಲಸವಾಗಬೇಕು ಎಂದು ತಿಳಿಸಿದರು.ನಾನು ಬೆಂಗಳೂರಿನಲ್ಲಿ ಮತ ಹಾಕುವ ಹಕ್ಕನ್ನು ಹೊಂದಿದ್ದೇನೆ. ಆದರೆ, ಸಮಾಜ ಸೇವೆಗೆ ಅಂತ ಕೊಣ್ಣೂರಿನ ಗ್ರಾಮಕ್ಕೆ ಬಂದಿದ್ದೇನೆ. ಸದ್ಯ ಕೊಣ್ಣೂರಿನಲ್ಲಿದ್ದೇನೆ ಅಂತ ನನ್ನ ಮತದಾನ ಹಕ್ಕನ್ನು ನಾನು ಮರೆತಿಲ್ಲ. ಮತದಾನದ ದಿನ ಬೆಂಗಳೂರಿಗೆ ತೆರಳಿ ಮತ ಹಾಕುತ್ತೇನೆ. ಕೇವಲ ಎರಡು ನಿಮಿಷದ ಮತಹಾಕುವ ಕೆಲಸ ಅಂತ ನಾನು ಆಲಸ್ಯತನ ಪಟ್ಟಿಲ್ಲ. ಹಾಗೆಯೇ ನರೇಗಾ ಕೂಲಿಕಾರರು ತಮ್ಮ ಮತ ಚಲಾಯಿಸುವ ಹಕ್ಕು ಎಲ್ಲಿದೆಯೋ ಅಲ್ಲಿಗೆ ತೆರಳಿ ತಪ್ಪದೇ ಮತ ಹಾಕಿ ಬನ್ನಿ ಎಂದರು.ಲೋಕಸಭೆ ಸದಸ್ಯತ್ವ ಸಾಮಾನ್ಯ ಸದಸ್ಯತ್ವ ಅಲ್ಲ. ದೇಶದ ಅಭಿವೃದ್ಧಿಗೆ, ಭದ್ರತೆಗೆ ತನ್ನದೇ ಕೊಡುಗೆ ನೀಡುವಂತ ಸದಸ್ಯತ್ವ ಅದು. ಇಂಥ ಸದಸ್ಯತ್ವವನ್ನು ಯೋಗ್ಯ ಅಭ್ಯರ್ಥಿ ಕೈಗೆ ಕೊಡುವ ಕೆಲಸವಾಗಬೇಕು. ಆ ಕೆಲಸವನ್ನು ಎಲ್ಲ ಮತದಾರರು ಯಾವುದೇ ಆಮಿಷಕ್ಕೆ ಒಳಗಾಗದೇ ನಿರ್ಭೀತಿಯಿಂದ ತಮ್ಮ ಹಕ್ಕನ್ನು ಚಲಾಯಿಸಬೇಕು. ತಾಪಂ ಎಲ್ಲ ಮತದಾರರಿಗೂ ಅರಿವನ್ನು ಮೂಡಿಸುವ ಕೆಲಸ ಮಾಡುತ್ತಿರುವುದು ಪ್ರಶಂಸನೀಯ ಅಂತ ಮೆಚ್ಚುಗೆ ವ್ಯಕ್ತಪಡಿಸಿದರು.
ಎನ್.ಆರ್.ಎಲ್.ಎಂ. ಸಂಯೋಜಕ ಲಕ್ಷ್ಮಣ ಪೂಜಾರ ನರೇಗಾ ಕೂಲಿಕಾರರಿಗೆ ಮತದಾನದ ಪ್ರತಿಜ್ಞಾವಿಧಿ ಬೋಧಿಸಿದರು.
ಈ ಸಂದರ್ಭದಲ್ಲಿ ಗ್ರಾಪಂ ಪಿಡಿಒ ಮಂಜುನಾಥ ಗಣಿ, ನರೇಗಾ ತಾಂತ್ರಿಕ ಸಂಯೋಜಕ ಹನುಮಂತ ಡಂಬಳ, ಗ್ರಾಮ ಕಾಯಕ ಮಿತ್ರ ಅನಸೂಯಾ ಕಬನೂರು, ಸಿಬ್ಬಂದಿ ಇದ್ದರು.