ಕೊಪ್ಪಳ:
ಪ್ರತಿಯೊಬ್ಬರು ಸಸಿ ನೆಟ್ಟು ಉತ್ತಮ ಪರಿಸರ ನಿರ್ಮಿಸಬೇಕು. ಅದರಿಂದ ಉತ್ತಮವಾದ ಗಾಳಿ ಸಿಗಲಿದ್ದು ಪರಿಸರ ರಕ್ಷಣೆ ಪ್ರತಿಯೊಬ್ಬರ ಕರ್ತವ್ಯವಾಗಿದೆ ಎಂದರು.
ಸಹಶಿಕ್ಷಕ ನಾಗರಾಜ್ ಕುಷ್ಟಗಿ ಮಾತನಾಡಿ, ಹಸಿರು ಉಳಿಸಿ ಬೆಳೆಸುವುದು ಪ್ರತಿಯೊಬ್ಬ ವ್ಯಕ್ತಿಯ ಸಾಮಾಜಿಕ ಜವಾಬ್ದಾರಿಯಾಗಿದೆ. ಮರಗಳಿಂದ ಭೂಮಿ ಮೇಲಿರುವ ಎಲ್ಲ ಜೀವಿಗಳಿಗೂ ಅನುಕೂಲವಿದೆ. ಹೀಗಾಗಿ, ವಿದ್ಯಾರ್ಥಿಗಳು ಶಿಕ್ಷ ಣಕ್ಕೆ ನೀಡುವ ಮಹತ್ವವನ್ನು ಸಸಿ ನೆಟ್ಟು ಬೆಳೆಸಲೂ ನೀಡಬೇಕು. ಅಂದಾಗ ಮಾತ್ರ ಉತ್ತಮ ಪರಿಸರ ನಿರ್ಮಿಸಲು ಸಾಧ್ಯವಾಗಲಿದೆ ಎಂದು ಹೇಳಿದರು.ಸಹಶಿಕ್ಷಕರಾದ ಬಸವರಾಜ್ ಗುಗ್ರಿ ಸ್ವಾಗತಿಸಿದರು, ಮಲ್ಲಿಕಾರ್ಜುನ ಲಾಡಿ ನಿರೂಪಿಸಿದರು. ಪಿಎಂಶ್ರೀ ಶಾಲೆಯ ವಿದ್ಯಾರ್ಥಿಗಳು ಮತ್ತು ಕಿನ್ನಾಳದ ಧರಣಿ ಕಲಾ ಬಳಗದಿಂದ ಪರಿಸರ ಜಾಗೃತಿ ಕುರಿತ ಜಾಥಾದಲ್ಲಿ ಪರಿಸರ ಜಾಗೃತಿ ಗೀತೆ ಹಾಡಿ ಜನರಿಗೆ ಪರಿಸರದ ಅರಿವು ಮೂಡಿಸಲಾಯಿತು.
ಕಾರ್ಯಕ್ರಮದಲ್ಲಿ ಮುಖ್ಯಶಿಕ್ಷಕಿ ಸಾವಿತ್ರಿ ದಾಸ್, ಗೌತಮಬುದ್ಧ ಎಸ್ಎಸ್ಜಿ ಸಂಸ್ಥೆ ಕಾರ್ಯದರ್ಶಿ ರಂಗನಾಥ ಕೋಳೂರು, ಭಾಗ್ಯನಗರ ಪಪಂ ನಾಮನಿರ್ದೇಶಿತ ಸದಸ್ಯ ಹನುಮಂತಪ್ಪ ಬಂಡಿ, ಸಹಶಿಕ್ಷಕರಾದ ನಾಗರಾಜ್ ಕುಷ್ಟಗಿ, ವಿಜಯಲಕ್ಷ್ಮಿ ಬಡಿಗೇರ, ಕಸ್ತೂರಿ ದ್ಯಾಂಪೂರ, ಕಲಾವಿದೆ ಗೌರಿ ಗೋನಾಳ ಇದ್ದರು.