ಕನ್ನಡಪ್ರಭವಾರ್ತೆ ಕುಶಾಲನಗರ
ಈ ಹಿನ್ನೆಲೆಯಲ್ಲಿ ಪ್ರವಾಸಿಗರ ಅನುಕೂಲಕ್ಕಾಗಿ ಈ ಸ್ಥಳದಲ್ಲಿ ಘಟಕವನ್ನು ಸ್ಥಾಪಿಸಲಾಗಿದೆ. ಇದು ನಮ್ಮ ಸ್ವಚ್ಛ ಕುಶಾಲನಗರ ಅಭಿಯಾನದ ಭಾಗವಾಗಿದೆ. ಈಗಾಗಲೇ ಎರಡು ಘಟಕಗಳನ್ನು ಅಳವಡಿಸಲಾಗಿದ್ದು, ಇದೀಗ ಮೂರನೇ ಘಟಕವನ್ನು ಪ್ರವಾಸಿಗರಿಗೆ ಉಪಯೋಗವಾಗುವಂತೆ ಅಳವಡಿಸಿದ್ದೇವೆ. ಸಾರ್ವಜನಿಕರು ಇದರ ಬಳಕೆಯೊಂದಿಗೆ ಪರಿಸರ ಸ್ವಚ್ಛತೆಗೆ ಕೈಜೋಡಿಸಬೇಕು ಎಂದು ತಿಳಿಸಿದರು.
ಘಟಕಕ್ಕೆ ಕುಶಾಲನಗರ ಪುರಸಭೆ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗಿರೀಶ್ ಚಾಲನೆ ನೀಡಿದರು. ಕಾರ್ಯಕ್ರಮದಲ್ಲಿ ಇನ್ನರ್ ವೀಲ್ ಅಧ್ಯಕ್ಷೆ ರೇಷ್ಮಾ ನವೀನ್, ಪುರಸಭೆ ಆರೋಗ್ಯಾಧಿಕಾರಿ ಉದಯ್ ಕುಮಾರ್, ರೋಟರಿ ಕಾರ್ಯದರ್ಶಿ ಮಂಜುನಾಥ್ ಹೆಚ್.ಪಿ., ಇನ್ನರ್ ವೀಲ್ ಸದಸ್ಯೆ ಸುಪ್ರೀತಾ ರವಿ, ರೋಟರಿ ಸದಸ್ಯರಾದ ಸತೀಶ್ ಎಸ್.ಕೆ., ಡಾ. ಹರಿ ಎ. ಶೆಟ್ಟಿ, ಸಹಾಯಕ ರಾಜ್ಯಪಾಲ ಉಲ್ಲಾಸ್, ರಾಣಿ ಉಲ್ಲಾಸ್, ಮಹೇಶ್ ನಲವಾಡೆ, ರುದ್ರೇಶ್ ಪಟೇಲ್, ಜೇಕಬ್, ರಾಜಶೇಖರ್, ಶೀನಾ ಪ್ರಕಾಶ್, ಸುನೀತಾ ಮಹೇಶ್, ಚಿತ್ರಾ ರಮೇಶ್ ಇದ್ದರು.