ಕನ್ನಡಪ್ರಭ ವಾರ್ತೆ ರಬಕವಿ-ಬನಹಟ್ಟಿ ಶ್ರಮಿಕ ಕುಟುಂಬದ ಹಿನ್ನೆಲೆಯಿಂದ ಬಂದ ದೊಡ್ಡಣ್ಣ ಬಜಂತ್ರಿಯವರು ಕಡುಬಡತನವನ್ನೇ ಹಾಸಿಹೊದ್ದು ಮಲಗಿದವರು. ದಲಿತ, ಬಂಡಾಯ ಸಾಹಿತ್ಯವನ್ನು ಅವಲೋಕಿಸುತ್ತ ಬರೆದವರು. ಅವರ ಕಾವ್ಯ ಕಲಾ ಕೌಶಲ್ಯ ಗಮನಾರ್ಹವಾದುದು. ಕವಿ ಅನುಭವದ ಹಿನ್ನೆಲೆಯಲ್ಲಿ ಕಾವ್ಯ ರಚಿಸುತ್ತಾನೆ ಎಂದು ಮಹಾಲಿಂಗಪುರದ ಹಿರಿಯ ಸಾಹಿತಿ ದೇವೇಂದ್ರ ಬಿಸ್ವಾಗರ ಹೇಳಿದರು.
ಹಿರಿಯ ಜಾನಪದ ಕಲಾವಿದ ಬಸವರಾಜ ತೇರಣಿ ಅಧ್ಯಕ್ಷತೆ ವಹಿಸಿದ್ದರು. ಮಹಾಶಾಂತ ಶೆಟ್ಟಿ, ಮಹಾದೇವ ಕವಿಶೆಟ್ಟಿ, ಅವಲೋಕನದಲ್ಲಿ ಸಂವಾದ ನಡೆಸಿದರು. ಕೃತಿಕಾರ ಪ್ರೊ.ದೊಡ್ಡಣ್ಣ ಭಜಂತ್ರಿ ಸನ್ಮಾನ ಸ್ವೀಕರಿಸಿ ಒಲೆಯ ಹೊಕ್ಕು ಇದು ನೋವುಗಳನ್ನು ಅನುಭವಿಸಿದ ಸಂಕೇತ. ಕವಿ ಭಾವಲೋಕದಲ್ಲಿ ಮಿಂದು ಬರೆಯುತ್ತಾನೆ ಎಂದರು.
ತಾಲೂಕು ಕಸಾಪ ಅಧ್ಯಕ್ಷ ಮ.ಕೃ. ಮೇಗಾಡಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿಕ್ಷಕ ಮಹಾಲಿಂಗ ಚಿಮ್ಮಡ ಪ್ರಾರ್ಥಿಸಿದರು. ಈರಣ್ಣ ತೇರಣಿ ನಿರೂಪಿಸಿದರು. ದಾನಪ್ಪ ಆಸಂಗಿ ವಂದಿಸಿದರು.ಹಿರಿಯ ಸಾಹಿತಿ ಶಿವಾನಂದ ದಾಶಾಳ, ಮಲ್ಲೇಶಪ್ಪ ಕುಚನೂರ, ಇಂದುಧರ ಬೆಳಗಲಿ, ಡಿ. ಬಿ. ಜಾಯಗೊಂಡ, ಶರತ್ ಜಂಬಗಿ, ರವೀಂದ ್ರಅಷ್ಟಗಿ, ಪ್ರಕಾಶ ಸಿಂಗನ್, ಸವಿತಾ ಹೊಸೂರ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.