ಕನ್ನಡಪ್ರಭ ವಾರ್ತೆ ಕುಣಿಗಲ್
ಕುಣಿಗಲ್ ಪಟ್ಟಣದ ಜೆಡಿಎಸ್ ಕಚೇರಿಯಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕುಣಿಗಲ್ ಶಾಸಕರು ಅತಿ ಬುದ್ಧಿವಂತರು ಯಾವ ವಿಚಾರವನ್ನು ಯಾವ ರೀತಿ ಬಳಸಿಕೊಳ್ಳಬೇಕೆಂಬುದನ್ನು ಕಲಿತಿರುವ ಚಾಣಾಕ್ಷತೆ ಅವರಿಗಿದೆ. ಈ ವಿಚಾರವನ್ನು ಅವರು ರಾಜಕೀಯಗೊಳಿಸುವ ಪ್ರಯತ್ನ ಮಾಡುತ್ತಿದ್ದಾರೆ. ಸಿಎಂ ಡಿ ಕೆ ಶಿವಕುಮಾರ್ ಇಂತಹ ವಿಚಾರಗಳಲ್ಲಿ ಲಘುವಾಗಿ ತೆಗೆದುಕೊಳ್ಳುವುದಿಲ್ಲ ಅವರ ಜೊತೆ ಇದ್ದು ನೀವು ಕಲಿತಿರುವ ವಿದ್ಯೆ ಏನು. ಸಿದ್ದರಾಮಯ್ಯ ಕೂಡ ಈ ರೀತಿ ಹಲವು ಬಾರಿ ಆಡು ಭಾಷೆ ಬಳಸಿದ್ದಾರೆ, ಅದನ್ನು ಯಾರೂ ಕೂಡ ರಾಜಕೀಯ ವ್ಯಭಿಚಾರಕ್ಕೆ ಬಳಸಿಲ್ಲ ಎಂದು ತಿವಿದರು. ಕುಣಿಗಲ್ ಶಾಸಕ ಡಾ. ರಂಗನಾಥ್ ಬಗ್ಗೆ ನಿಖಿಲ್ ಕುಮಾರಸ್ವಾಮಿ ಮಾತನಾಡಿರುವ ವಂಶವಾಹಿ ವಿಚಾರ ಅವರ ವೈಯಕ್ತಿಕ ಅಲ್ಲ ಸಾಮಾನ್ಯವಾಗಿ ಆಡು ಭಾಷೆ ಅದನ್ನು ಕುಣಿಗಲ್ ಶಾಸಕ ಡಾ.ರಂಗನಾಥ್ ತಮ್ಮ ರಾಜಕೀಯ ಮೇಲಾಟಕ್ಕೆ ಬಳಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ರಾಜ್ಯದ ಏಳಿಗೆಗಾಗಿ ಕುಮಾರಸ್ವಾಮಿ ನಿರಂತರವಾಗಿ ದುಡಿಯುತ್ತಿದ್ದಾರೆ. ಆದರೆ ಆ ಕೆಲಸವನ್ನು ನಿಮ್ಮ ಕಾಂಗ್ರೆಸ್ ನವರು ಏಕೆ ಮಾಡುತ್ತಿಲ್ಲ. ಒಂದು ಕಾಲದಲ್ಲಿ ಡಾ. ರಂಗನಾಥ್ ಅವರಿಗೆ ಸೆನೆಟ್ ಮೆಂಬರ್ ಮಾಡಲು ಅವಕಾಶ ನೀಡಿದ್ದು ಕುಮಾರಸ್ವಾಮಿ ಆ ಋಣ ನಿಮ್ಮ ಮೇಲಿದೆ. ಕನಕಪುರ, ಕುಣಿಗಲ್ ಮಾಗಡಿ ಸೇರಿದಂತೆ ಬಹುತೇಕ ಸ್ಥಳಗಳಲ್ಲಿ ಡಿಕೆ ಬೆಂಬಲಿಗರು ಮಾಡುತ್ತಿರುವ ಅನಾಚಾರದ ಬಗ್ಗೆ ಅವರು ಮಾತನಾಡಿದ್ದಾರೆ. ಹೊರತು ಕೇವಲ ಒಂದು ವ್ಯವಸ್ಥೆ ಅಥವಾ ವಂಶವಾಹಿ ಬಗ್ಗೆ ಮಾತನಾಡಿಲ್ಲ ಎಂದರು ಈ ಸಂದರ್ಭದಲ್ಲಿ ಪ್ರಕಾಶ್, ದೀಪು, ಮಂಜುನಾಥ್ ಸೇರಿದಂತೆ ಇತರರು ಇದ್ದರು.