ಬಸವರಾಜ ನಂದಿಹಾಳ
ಉತ್ತರ ಕರ್ನಾಟಕದಲ್ಲಿ ರೈತರು ಕೃಷಿಗೆ ಹಾಗೂ ಜಾನುವಾರುಗಳಿಗೆ ಸಂಬಂಧಿಸಿದಂತೆ ಹಲವು ಹಬ್ಬಗಳನ್ನು ಆಚರಿಸುತ್ತಾ ಬಂದಿದ್ದಾರೆ. ಅವುಗಳಲ್ಲಿ ಕಾರಹುಣ್ಣಿಮೆ ನಂತರ ಬರುವ ಮಣ್ಣೆತ್ತಿನ ಅಮವಾಸ್ಯೆಯು ಪ್ರಮುಖ. ಈ ವೇಳೆ ಜನರು ಮಣ್ಣಿನಿಂದ ಮಾಡಿದ ಎತ್ತುಗಳನ್ನು ಪೂಜೆ ಮಾಡುವುದು ರೂಢಿಗತವಾಗಿ ಬಂದಿತ್ತು. ಆದರೆ, ಇತ್ತೀಚಿನ ದಿನಗಳಲ್ಲಿ ಪಿಒಪಿ ಎತ್ತಿನ ಮಾರಾಟ ಜೋರಾಗಿದೆ.
ಎತ್ತು ಮತ್ತು ಮಣ್ಣನ್ನು ಪೂಜಿಸಿದರೆ ಮಳೆ-ಬೆಳೆಗಳು ಚೆನ್ನಾಗಿ ಬರುತ್ತವೆ ಎಂಬ ನಂಬಿಕೆ ರೈತರದ್ದು. ಆದರೀಗ ಮಣ್ಣೆತ್ತಿನ ಬದಲಾಗಿ ಮಾರುಕಟ್ಟೆಯಲ್ಲಿ ಹೆಚ್ಚಾಗಿ ಪ್ಯಾರಿಸ್ ಆಫ್ ಪ್ಲಾಸ್ಟರ್ನಿಂದ ತಯಾರಿಸಿದ ಎತ್ತುಗಳ ಮಾರಾಟ ಜೋರಾಗಿದೆ. ಈ ಹಿನ್ನೆಲೆಯಲ್ಲಿ ಪಟ್ಟಣದಲ್ಲಿ ಮಣ್ಣೆತ್ತು ಜೊತೆಗೆ ಮಾರುಕಟ್ಟೆಯಲ್ಲಿ ಕೊಲ್ಹಾಪುರದಿಂದ ತರಿಸಿರುವ ಪಿಒಪಿಯಿಂದ ತಯಾರಿಸಿದ ಬಣ್ಣ ಬಣ್ಣದ ಎತ್ತುಗಳ ಮಾರಾಟ ಕಂಡು ಬಂತು.ಮುಂಗಾರು ಮಳೆಯೊಂದಿಗೆ ಆರಂಭವಾಗುವ ಹಬ್ಬಗಳ ಆಚರಣೆಯೊಂದಿಗೆ ಕೃಷಿ ಚಟುವಟಿಕೆಯಲ್ಲಿ ನಿರತರಾಗುವ ರೈತ ಕುಟುಂಬದವರು ಸಂಪ್ರದಾಯದಂತೆ ಮಣ್ಣೆತ್ತಿನ ಹಬ್ಬವನ್ನು ಉತ್ಸಾಹದಿಂದ ಆಚರಿಸುತ್ತಾರೆ. ಈ ವರ್ಷ ಮುಂಗಾರು ಆರಂಭದ ಮುನ್ನವೇ ಮಳೆ ಆಗಮಿಸಿದ್ದರಿಂದಾಗಿ ರೈತರು ಹರ್ಷಗೊಂಡಿದ್ದಾರೆ. ಬಿತ್ತನೆ ಕಾರ್ಯ ತೀವ್ರವಾಗಿದೆ. ಬಿತ್ತನೆಯಾದ ನಂತರ ಅಲ್ಪಸ್ವಲ್ಪ ಮಳೆಯಾಗಿದೆ. ಇನ್ನಷ್ಟು ಮಳೆಯಾದರೆ ಬಿತ್ತನೆ ಮಾಡಿರುವುದಕ್ಕೆ ತುಂಬಾ ಅನುಕೂಲವಾಗುತ್ತದೆ ಎಂದು ರೈತರು ಹೇಳುತ್ತಾರೆ.
----
ಕೋಟ್ಮೊದಲು ಪಟ್ಟಣದಲ್ಲಿ ಹಿರಿಯರಾದ ಸಾಯಬಣ್ಣ ಕುಂಬಾರ, ಪರ್ವುತಪ್ಪ ಕುಂಬಾರ ಅವರು ಕಾರಹುಣ್ಣಿಮೆ ಮರುದಿನದಿಂದಲೇ ಮಣ್ಣೆತ್ತಿನ ಅಮವಾಸ್ಯೆಗೆ ಬೇಕಾದ ಮಣ್ಣೆತ್ತು ಮಾಡಲು ತೊಡಗುತ್ತಿದ್ದರು. ಮಣ್ಣೆತ್ತಿನ ಅಮವಾಸ್ಯೆ ದಿನ ರೈತರ ಮನೆಗಳಿಗೆ ವಿತರಣೆ ಮಾಡಿ ಜೋಳ ಇಲ್ಲವೇ ಹಣ ಸಂಗ್ರಹಿಸುತ್ತಿದ್ದರು. ಇದೀಗ ಈ ಇಬ್ಬರು ವ್ಯಕ್ತಿಗಳು ಮೃತರಾಗಿದ್ದಾರೆ. ಇದೀಗ ಕುಂಬಾರ ಮನೆಗಳಲ್ಲಿ ಮಣ್ಣೆತ್ತು ತಯಾರಿಸುವುದು ಕಡಿಮೆಯಾಗುತ್ತಿರುವುದು ವಿಷಾದಕರ ಸಂಗತಿ. ಅಮವಾಸ್ಯೆ ದಿನ ನಮ್ಮ ಮನೆಗೆ ಮೊದಲಿನಂತೆ ಯಾರೂ ಮಣ್ಣೆತ್ತುಗಳನ್ನು ಕೊಡದೇ ಇರುವುದರಿಂದಾಗಿ ನಾನೇ ಮನೆಯಲ್ಲಿ ಮಣ್ಣಿನಿಂದ ಎತ್ತುಗಳನ್ನು ಮಾಡಿ ಸಂಪ್ರದಾಯದಂತೆ ಪೂಜೆ ಮಾಡಲಾಗುತ್ತಿದೆ.
-ಬಸವರಾಜ ಹಾರಿವಾಳ ಪಟ್ಟಣದ ಹಿರಿಕರು-----
ಮಣ್ಣೆತ್ತಿನ ಅಮವಾಸ್ಯೆ ಅಂಗವಾಗಿ ಜನರ ಬೇಡಿಕೆ ಅನುಗುಣವಾಗಿ ಬಣ್ಣ ಹಚ್ಚಿರುವ (ಪಿಒಪಿ) ಎತ್ತುಗಳನ್ನು ಕೊಲ್ಹಾಪುರ ಹಾಗೂ ಉಮರ್ಗಾದಿಂದ ಮಾರಾಟಕ್ಕೆ ತರಿಸಲಾಗಿದೆ. ಬೇರೆ ಕಡೆಯಿಂದ ತರಿಸಲಾದ ಪ್ಯಾರಿಸ್ ಆಫ್ ಪ್ಲಾಸ್ಟರ್ನಿಂದ ತಯಾರಿಸಿದ ಎತ್ತುಗಳನ್ನು ಗಾತ್ರದ ಅನುಗುಣವಾಗಿ ₹೧೦೦ ರಿಂದ ೨೫೦೦ವರೆಗೆ ಮಾರಾಟ ಮಾಡಲಾಗುತ್ತಿದೆ. ಮಣ್ಣಿನಿಂದ ತಯಾರಿಸಿದ ಎತ್ತುಗಳು ಜೋಡಿಗೆ ₹೫೦ ರಿಂದ ೧೦೦ವರೆಗೆ ಮಾರಾಟವಾಗುತ್ತಿವೆ.-ಗದಿಗೆಪ್ಪ ಕುಂಬಾರ, ಕುಂಬಾರರು