ಧಾರವಾಡ:
ಕರ್ನಾಟಕ ವಿದ್ಯಾವರ್ಧಕ ಸಂಘದ ಶಿಕ್ಷಣ ಮಂಟಪವು ಮೊರಬದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ವಿಶ್ವ ಜನಸಂಖ್ಯಾ ದಿನಾಚರಣೆ ನಿಮಿತ್ತ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ `ಜನಸಂಖ್ಯಾ ಸ್ಫೋಟದ ದುಷ್ಪರಿಣಾಮ-ಪರಿಹಾರ’ ವಿಷಯ ಕುರಿತು ಮಾತನಾಡಿದರು.
ಭಾರತದಲ್ಲಿ ಜನಸಂಖ್ಯಾ ಏರಿಕೆ ಜ್ವಲಂತ ಸಮಸ್ಯೆಯಾಗಿದೆ. ಈ ತೀವ್ರತರ ಏರಿಕೆ ದೇಶದ ಅಭಿವೃದ್ಧಿಗೆ ಮಾರಕವಾಗಿದ್ದು, ಬಡತನ, ನಿರುದ್ಯೋಗ, ಆಹಾರ, ವಸತಿಯಂತಹ ಸಮಸ್ಯೆ ಸೃಷ್ಟಿಸುತ್ತಿದೆ. ಅದು ನಮ್ಮ ವೈಯಕ್ತಿಕ ಜೀವನ ಪರಿಸರದ ಮೇಲೂ ದುಷ್ಟರಿಣಾಮ ಬೀರುತ್ತಿದೆ. ಜನಸಂಖ್ಯೆ ಏರಿಕೆಗೆ ಅನೇಕ ಕಾರಣಗಳಿದ್ದು ಭಾರತದ ವಿಜ್ಞಾನ, ತಂತ್ರಜ್ಞಾನಗಳ ಪ್ರಗತಿಗೂ ಇದು ಧಕ್ಕೆಯಾಗುತ್ತದೆ ಎಂದರು.ಜನಸಂಖ್ಯಾ ತೀವ್ರತರ ಏರಿಕೆ ತಡೆಗಟ್ಟಲು ಜನರಿಗೆ ಅಗತ್ಯ ಶಿಕ್ಷಣ ನೀಡುವುದರೊಂದಿಗೆ ಸರ್ಕಾರದ ಜನಪ್ರಿಯ ಯೋಜನೆ, ಕುಟುಂಬ ಯೋಜನೆಯನ್ನು ಪ್ರತಿಯೊಬ್ಬರೂ ಪರಿಪಾಲನೆ ಮಾಡಬೇಕು. ಮದುವೆಯ ವಯಸ್ಸನ್ನು ಮುಂದೂಡಬೇಕು. ಇದಕ್ಕೂ ಮೊದಲು ಜನರ ಮನಪರಿವರ್ತನೆಯಾಗಬೇಕು. ದೇಶದ ಸಮಸ್ಯೆಗಳನ್ನು ಅರ್ಥಮಾಡಿಕೊಳ್ಳಬೇಕೆಂದು ಹೇಳಿದರು.
ಸಂಘದ ಪ್ರಧಾನ ಕಾರ್ಯದರ್ಶಿ ಶಂಕರ ಹಲಗತ್ತಿ ಮಾತನಾಡಿ, ಸಮಸ್ಯೆ ಯಾವುದೇ ಇರಲಿ, ಲಘುವಾಗಿ ಪರಿಗಣಿಸಬಾರದು. ದೇಶದ ಭವಿಷ್ಯದ ಬಗ್ಗೆ ಪ್ರತಿ ವಿದ್ಯಾರ್ಥಿ ಚಿಂತನಶೀಲರಾಗಬೇಕು. ಆತ್ಮಸ್ಥೈರ್ಯ ಹೊಂದಿರಬೇಕೆಂದು ಹೇಳಿದರು.