ಕನ್ನಡಪ್ರಭ ವಾರ್ತೆ ಮೈಸೂರು
14 ಪ್ರಥಮ, 4 ದ್ವಿತೀಯ ಮತ್ತು 1 ತೃತೀಯ ಬಹುಮಾನ ಪಡೆಯುವ ಮೂಲಕ ಕೇರಳ ಅಂಚೆ ವೃತ್ತ ಎರಡನೇ ಸ್ಥಾನ, ಒಟ್ಟು 9 ಬಹುಮಾನಗಳನ್ನು ಪಡೆಯುವ ಮೂಲಕ ಒಡಿಶಾ ಅಂಚೆ ವೃತ್ತವು ಮೂರನೇ ಸ್ಥಾನ ತನ್ನದಾಗಿಸಿಕೊಂಡಿತು.
ಕರ್ನಾಟಕ ಅಂಚೆ ವೃತ್ತದ ಚಾರ್ಮಿ ಎಸ್, ಕಿರಿಯರ ವಿಭಾಗದ ಕರ್ನಾಟಕ ಶೈಲಿಯ ಜಾನಪದ ಗಾಯನದಲ್ಲಿ ಪ್ರಥಮ, ಒಡಿಸ್ಸಿ ನೃತ್ಯದಲ್ಲಿ ದ್ವಿತೀಯ ಬಹುಮಾನ, ಪಲ್ಲವಿ ಎಲ್. ಕೊಡಿಯ, ಹಿರಿಯರ ವಿಭಾಗದ ಕರ್ನಾಟಕ ಮತ್ತು ಹಿಂದೂಸ್ಥಾನಿ ಶೈಲಿಯ ಜಾನಪದ ಗಾಯನದಲ್ಲಿ ಪ್ರಥಮ ಮತ್ತು ತೃತೀಯ ಬಹುಮಾನವನ್ನು, ಶಾಂಭವಿ ದೇಗಾವಿ ಮಠ್ ಅವರು ಕಿರಿಯರ ವಿಭಾಗದ ಹಿಂದೂಸ್ಥಾನಿ ಶೈಲಿಯ ಜಾನಪದ ಗಾಯನದಲ್ಲಿ ಪ್ರಥಮ ಬಹುಮಾನ, ಸಿ.ಜಿ. ಪ್ರದ್ಯುಮ್ ಕೌಶಿಕ್ ಅವರು ಹಿರಿಯರ ವಿಭಾಗದ ಹಿಂದೂಸ್ಥಾನಿ ಶೈಲಿಯ ಪಿಟೀಲು ವಾದನದಲ್ಲಿ ಪ್ರಥಮ ಬಹುಮಾನ, ಸ್ಪರ್ಶ ಹಿರಿಯರ ವಿಭಾಗದ ಭರತ ನಾಟ್ಯದಲ್ಲಿ ಪ್ರಥಮ, ಸೃಷ್ಚಿ ಕಿರಿಯರ ವಿಭಾಗದ ಸಾತ್ರಿಯ ನೃತ್ಯದಲ್ಲಿ ದ್ವಿತೀಯ, ಡಿ.ಎಂ. ಪುಣ್ಯಶ್ರೀ ಕಿರಿಯರ ವಿಭಾಗದ ಮೋಹಿನಿಆಟ್ಟಂ ನೃತ್ಯದಲ್ಲಿ ದ್ವಿತೀಯ ಸೇರಿದಂತೆ ಹಲವು ಬಹುಮಾನ ಪಡೆದರು.ಕೇರಳ ಅಂಚೆ ವೃತ್ತದ ಕೆ.ಎಸ್. ನಿರಂಜನಾ ಕಿರಿಯರ ವಿಭಾಗದ ಭರತನಾಟ್ಯಂನಲ್ಲಿ ಪ್ರಥಮ, ದುರ್ಗಾರಾಂ ಹಿರಿಯರ ವಿಭಾಗದ ಮೋಹಿನಿ ಆಟ್ಟಂನಲ್ಲಿ ಪ್ರಥಮ, ಗೌತಮ್ ಗಣೇಶ್ ಹಿರಿಯರ ವಿಭಾಗದ ಕಥಕಳಿ ನೃತ್ಯದಲ್ಲಿ ಪ್ರಥಮ, ಎನ್. ನಯನ ವಾಸುದೇವ್ ಅವರು ಹಿರಿಯರ ವಿಭಾಗದ ಕರ್ನಾಟದ ಶೈಲಿ ಜಾನಪದ ಗಾಯನದಲ್ಲಿ ದ್ವಿತೀಯ ಬಹುಮಾನ ಮತ್ತು ಕೆ. ಎನ್. ಶಿವಾನಂದನ ಅವರು ಕಿರಿಯರ ವಿಭಾಗದ ಕರ್ನಾಟಕ ಶೈಲಿ ಜಾನಪದ ಗಾಯನದಲ್ಲಿ ದ್ವಿತೀಯ ಬಹುಮಾನ ಪಡೆದುಕೊಂಡರು.
ಒಡಿಶಾ ಅಂಚೆ ವೃತ್ತದ ಬನಶ್ರೀ ಪಟ್ನಾಯಕ್ ಅವರು ಹಿರಿಯರ ವಿಭಾಗದ ಕರ್ನಾಟಕ ಶೈಲಿ ಜಾನಪದ ಗಾಯನದಲ್ಲಿ ದ್ವಿತೀಯ ಬಹುಮಾನ, ವಿಶೇಷ ಬಹುಮಾನವನ್ನು ಲಕ್ಷ್ಮಣ್ ದಾಸ್, ಕಿರಿಯರ ವಿಭಾಗದ ತಬಲ ವಾದನದಲ್ಲಿ ಅಮನ್ ಕುಮಾರ್ ದಾಸ್ ಪ್ರಥಮ ಬಹುಮಾನ ಹಾಗೂ ಹಿರಿಯರ ವಿಭಾಗದದಲ್ಲಿ ಪಡೆದರು.ಕರ್ನಾಟಕ ಅಂಚೆ ವೃತ್ತವು ಆಯೋಜಿಸಿರುವ ಈ ಐದು ದಿನಗಳ ಸಾಂಸ್ಕೃತಿಕ ಹಬ್ಬದಲ್ಲಿ ಭಾರತದಾದ್ಯಂತದ 21 ಅಂಚೆ ವೃತ್ತಗಳ 335 ಅಂಚೆ ನೌಕರರು ಭಾಗವಹಿಸಿದ್ದು ಅಂಚೆ ನೌಕರರಲ್ಲಿ ಸಾಂಸ್ಕೃತಿಕ ವಿನಿಮಯ ಮತ್ತು ರಾಷ್ಟ್ರೀಯ ಏಕೀಕರಣ ಬಲಪಡಿಸುವ ಪ್ರಮುಖ ವೇದಿಕೆಯಾಗಿದೆ.