ಮುಳವಾಡ ಕಾಲುವೆಗಳಿಗೆ ನೀರು ಹರಿಸಿ

KannadaprabhaNewsNetwork |  
Published : Jan 14, 2026, 04:15 AM IST
ಕೊಲ್ಹಾರ | Kannada Prabha

ಸಾರಾಂಶ

ಈ ಮೊದಲು ಮುಳವಾಡ 1ನೇ ಹಂತದ ಪಚ್ಚಿಮ, ಪೂರ್ವ ಕಾಲುವೆಗಳಿಗೆ 14 ದಿನ ನೀರನ್ನು ಹರಿಸಿ 10 ದಿನ ಬಂದ್ ಮಾಡಲಾಗುತ್ತಿತ್ತು. ರೈತರ ಪ್ರತಿಭಟನೆ ನಂತರ ಅವರ ಬೇಡಿಕೆಯಂತೆ ಜ.16ರಿಂದ ಏಪ್ರಿಲ್ 2ರವರೆಗೆ ಕಾಲುವೆಗಳಿಗೆ 10 ದಿನ ನೀರನ್ನು ಹರಿಸಿ 7 ದಿನ ಬಂದ್ ಮಾಡಲಾಗುತ್ತದೆ ಎಂದು ಗೋವಿಂದ ರಾಠೋಡ ಹೇಳಿದರು.

ಕನ್ನಡಪ್ರಭ ವಾರ್ತೆ ಕೊಲ್ಹಾರ

ಈ ಭಾಗದ ಹೆಚ್ಚಿನ ಪ್ರದೇಶದಲ್ಲಿ ಉಳ್ಳಾಗಡ್ಡಿ ಬೆಳೆ ಬೆಳೆಯಲಾಗಿದ್ದು, ಹೆಚ್ಚಿನ ನೀರು ಬೇಕು. ಹಾಗಾಗೀ ಮುಳವಾಡ 1ನೇ ಹಂತದ ಪೂರ್ವ ಹಾಗೂ ಪಶ್ಚಿಮ ಕಾಲುವೆಗಳಿಗೆ ನೀರು ಹರಿಸಬೇಕು. ಕೆನಾಲ್ ಮೇಲಿನ ಪಕ್ಕದ ರಸ್ತೆಗಳು ಹದಗೆಟ್ಟಿದ್ದು ಅವುಗಳನ್ನು ಕ್ಷೇತ್ರದ ಜನಪತ್ರಿನಿಧಿಗಳು ಅನುದಾನ ತಂದು ಸುಧಾರಣೆ ಮಾಡಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆ ರಾಜ್ಯಾಧ್ಯಕ್ಷ ಚೂನಪ್ಪ ಪೂಜಾರಿ ಆಗ್ರಹಿಸಿದರು.

ತಾಲೂಕಿನ ಮಟ್ಟಿಹಾಳ ಕ್ರಾಸ್‌ ಬಳಿಯಿರುವ ಕೃಷ್ಣಾ ಭಾಗ್ಯ ಜಲ ನಿಗಮ ನಿಯಮಿತದ ಮುಳವಾಡ ಏತ ನೀರಾವರಿ ವಿಭಾಗ-ನಂ.1ರ ಕಾರ್ಯನಿರ್ವಾಹಕ ಅಭಿಯಂತರ ಕಚೇರಿ ಮುಂದೆ ಸಂಘಟನೆ ನೇತೃತ್ವದಲ್ಲಿ ನಡೆದ ರೈತರ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು. ರೈತರ ಜಮೀನುಗಳಲ್ಲಿ ಕಾಲುವೆಗಳು ಹಾಯ್ದು ಹೋಗಿವೆ. ಅದರಿಂದ ರೈತರು ಜಮೀನು ಕಳೆದುಕೊಂಡಿದ್ದಾರೆ. ಅನೇಕ ರೈತರಿಗೆ ಪರಿಹಾರ ದೊರಕಿಲ್ಲ. ಶೀಘ್ರವಾಗಿ ಪರಿಹಾರ ನೀಡಬೇಕು. ಕಾಲುವೆಗಳಲ್ಲಿ ಹೂಳು ತುಂಬಿದ್ದು, ಏ.24 ನಂತರ ಜೂನ್ ವರೆಗೆ ಎಲ್ಲ ಕಾಲುವೆಗಳ ಹೂಳು ತೆಗೆಯುವ ಕಾರ್ಯ ಆಗಬೇಕು ಎಂದರು.

ತಾಲೂಕು ಅಧ್ಯಕ್ಷ ಸೋಮು ಬಿರಾದಾರ ಮಾತನಾಡಿ, ಕಾಲುವೆಗಳಿಗೆ ಸತತವಾಗಿ 8 ರಿಂದ 9 ತಿಂಗಳವರೆಗೆ ನೀರು ಹರಿಸಬೇಕು. ಎರಡ್ಮೂರು ವರ್ಷಗಳಿಂದ ಅಧಿಕಾರಿಗಳು ಕಾಲುವೆ ನೀರನ್ನು ಹಂತ ಹಂತವಾಗಿ ಬಂದ್ ಮಾಡುತ್ತಾ ಬಂದ್ರು ಅದಕ್ಕಾಗಿ ನಾವು ರೈತರೊಂದಿಗೆ ಸಂಘಟನೆ ಮಾಡಿಕೊಂಡು ರಸ್ತೆಗೆ ಇಳಿಯಬೇಕಾದ ಪರಿಸ್ಥಿತಿ ಬಂದಿದೆ ಎಂದರು.

ಡಿವೈಎಸ್ಪಿ ಬಲ್ಲಪ್ಪ ನಂದಗಾವಿ, ಕೆಬಿಜೆಎನ್ಎಲ್ ಎಸ್ಇ ಗೋವಿಂದ ರಾಠೋಡ, ಸಿಪಿಐ ಶರಣಗೌಡ ಗೌಡರ, ಪಿಎಸ್ಐ ಅಶೋಕ ನಾಯಕ, ಎನ್ ಟಿಪಿಸಿ ಕೂಡಗಿ ಪಿಎಸ್ಐ ಯತೀಶ್ ಕೆ.ಎನ್, ಸಂಘದ ಉಪಾಧ್ಯಕ್ಷ ಕಲ್ಲಪ್ಪ ಸೋನ್ನದ, ರಾಹುಲ್ ಕುಬಕಡ್ಡಿ, ಸಂಗಮೇಶ ಸಗರ, ಟಿ.ಟಿ. ಹಗೆದಾಳ, ಶ್ರೀಶೈಲ ಅಂಗಡಿ, ಜಗದೀಶ ಸುನಗದ, ಕಲ್ಲಪ್ಪ ಗಿಡ್ಡಪ್ಪಗೋಳ, ವಿಜಯಮಾಂತೇಶ ಗಿಡ್ಡಪ್ಪಗೋಳ, ಮಂಜುನಾಥ ದ್ಯಾವಾಪೂರ, ಮಲ್ಲಪ್ಪ ಗಾಣಗೇರ, ಕೆಬಿಜೆಎನ್ಎಲ್ ಅಧಿಕಾರಿಗಳು ಸೇರಿದಂತೆ ತಾಲೂಕಿನ ಸುತ್ತಮುತ್ತಲಿನ ರೈತರು ಭಾಗವಹಿಸಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಜೆಡಿಯು ನಾಯಕ ನಿತೀಶ್‌ ರಾಜ್ಯಸಭೆಗೆ - ಸಿಎಂ ಸ್ಥಾನಕ್ಕೆ ರಾಜೀನಾಮೆ
ಈ ಸಾಲಲ್ಲಿ ಅಬಕಾರಿ ರಾಜಸ್ವ ಟಾರ್ಗೆಟ್‌ ಕಷ್ಟ? 11 ತಿಂಗಳಲ್ಲಿ ಮದ್ಯ ಮಾರಾಟ ಗಣನೀಯ ಕುಸಿತ